ಜಾನುವಾರು ಸಾವು : ಪರಿಹಾರ ನೀಡಲು ಸಿಎಂ ಸಮ್ಮತಿ
ಬೆಳಗಾವಿ, ಅ.9 : ಕೊನೆಗೂ ಕಾಲು-ಬಾಯಿ ರೋಗದಿಂದ ಸಾವನ್ನಪ್ಪುವ ಜಾನುವಾರುಗಳ ಮಾಲೀಕರಿಗೆ ಸರ್ಕಾರದಿಂದ ಪರಿಹಾರ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮತಿ ನೀಡಿದ್ದಾರೆ. ಈ ಕುರಿತು ತನಿಖೆ ನಡೆಸುವಂತೆ ಆದೇಶ ನೀಡಿದ್ದಾರೆ.
ಬುಧವಾರ
ಬೆಳಗಾವಿಗೆ
ಆಗಮಿಸಿದ
ಸಿಎಂ
ಸಿದ್ದರಾಮಯ್ಯ
ವಿಮಾನ
ನಿಲ್ದಾಣದಲ್ಲಿ
ಮಾಧ್ಯಮಗಳೊಂದಿಗೆ
ಮಾತನಾಡಿದರು.
ಕಾಲು-ಬಾಯಿ
ಜ್ವರದಿಂದ
ಸಾವನ್ನಪ್ಪಿರುವ
ಜಾನುವಾರುಗಳ
ಮಾಲೀಕರಿಗೆ
ಸರ್ಕಾರದಿಂದ
ಪರಿಹಾರ
ನೀಡಲಾಗುವುದು.
ಇದಕ್ಕಾಗಿ ರಾಜ್ಯದಲ್ಲಿ ಸಾವನ್ನಪ್ಪಿರುವ ಜಾನುವಾರುಗಳ ಬಗ್ಗೆ ತನಿಖೆ ನಡೆಸಲು ಪಶುಸಂಗೋಪನಾ ಇಲಾಖೆಗೆ ಸೂಚಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು. ಕಾಲು-ಬಾಯಿ ಜ್ವರವನ್ನು ನಿಯಂತ್ರಿಸಲು ಸರ್ಕಾರ ವಿಫಲವಾಗಿದೆ ಎಂಬ ಪ್ರತಿಪಕ್ಷಗಳ ಆರೋಪಗಳನ್ನು ಸಿಎಂ ತಳ್ಳಿಹಾಕಿದರು.
ಸಾಮಾನ್ಯವಾಗಿ ಜನವರಿ ಅಥವ ಫೆಬ್ರವರಿಯ ಬೇಸಿಗೆ ಸಂದರ್ಭದಲ್ಲಿ ರೋಗ ಕಾಣಿಸಿಕೊಳ್ಳುತ್ತಿತ್ತು. ಆದರೆ, ಈ ಬಾರಿ ಮಳೆಗಾಲದಲ್ಲೇ ಕಾಲು-ಬಾಯಿ ಜ್ವರ ಕಾಣಿಸಿಕೊಂಡಿದೆ. ರಾಮನಗರ, ಮಂಡ್ಯ, ಮೈಸೂರು, ಕೋಲಾರ ಜಿಲ್ಲೆಗಳಲ್ಲಿ ರೋಗ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ ಎಂದರು. (ರಾಮನಗರ : ಹಸುಗಳ ಸಾವು, ಜನರಿಗೆ ಸಂಕಷ್ಟ)
ಕೆಲವು ಮಾಹಿತಿಗಳ ಪ್ರಕಾರ ಸುಮಾರು 2 ಸಾವಿರ ಜಾನುವಾರುಗಳು ಸಾವನ್ನಪ್ಪಿವೆ ಎಂದು ತಿಳಿದು ಬಂದಿದೆ. ಆದ್ದರಿಂದ ಪಶುಸಂಗೋಪನಾ ಇಲಾಖೆ ತನಿಖೆ ನಡೆಸಿ, ಮೃತಪಟ್ಟಿರುವ ಜಾನುವಾರುಗಳ ಮಾಹಿತಿ ನೀಡಲಿದೆ. ನಂತರ ಪರಿಹಾರ ನೀಡುವುದಾಗಿ ಸಿದ್ದರಾಮಯ್ಯ ಹೇಳಿದರು.
ಪಶು ಸಂಗೋಪನಾ ಇಲಾಖೆ ರೋಗ ಹರಡದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಮೊದಲು ಏಳು ತಿಂಗಳಿಗೊಮ್ಮೆ ಲಸಿಕೆ ಜಾನುವಾರುಗಳಿಗೆ ಲಸಿಕೆ ಹಾಕಲಾಗುತ್ತಿತ್ತು. ಸದ್ಯ ರೋಗ ಕಾಣಿಸಿಕೊಂಡ ತಕ್ಷಣ ಲಸಿಕೆ ಹಾಕಲಾಗುತ್ತಿದೆ ಎಂದು ತಿಳಿಸಿದರು.
ಪ್ರತಿ ಜಿಲ್ಲೆಯಲ್ಲಿ ಕಾಲು-ಬಾಯಿ ರೋಗದ ಕುರಿತು ವರದಿ ನೀಡಲು ಸಮಿತಿ ರಚಿಸಲಾಗಿದೆ. ಅಧಿಕಾರಿಗಳು ಲಸಿಕೆ ಹಾಕದೆ ನಿರ್ಲಕ್ಷ್ಯ ತೋರಿದ್ದರೆ ಅವರ ವಿರುದ್ಧ ವರದಿ ಬಂದ ನಂತರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಭರವಸೆ ನೀಡಿದರು.(ರೈತರಿಗೆ ಪರಿಹಾರ ನೀಡಿ ಎಚ್ಡಿಕೆ ಆಗ್ರಹ)
ಪ್ರತಿಪಕ್ಷ ಜೆಡಿಎಸ್ ಮತ್ತು ಬಿಜೆಪಿ ಸರ್ಕಾರ ಕಾಲು-ಬಾಯಿ ಜ್ವರ ನಿಯಂತ್ರಿಸಲು ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ್ದವು. ಇದರಿಂದ ಎಚ್ಚೆತ್ತ ಸರ್ಕಾರ ಜಾನುವಾರುಗಳ ಮಾಲೀಕರಿಗೆ ಪರಿಹಾರ ನೀಡುವುದಾಗಿ ಪ್ರಕಟಿಸಿದೆ.