ಮಕ್ಕಳಿಗೆ ಉಚಿತ ಐಸ್ಕ್ರೀಮ್: ಹೀಗೊಂದು ಆಫರ್ ಕೊಟ್ಟ ಬೆಳಗಾವಿ ಶಾಸಕ
ಬಿಜೆಪಿ ಶಾಸಕ ಅಭಯ ಪಾಟೀಲ ಈಗ ಬೆಳಗಾವಿಯಲ್ಲಿ ಶಾಲೆಗೆ ಹೋಗುವ ಮಕ್ಕಳಿಗೆ ಉಚಿತ ಐಸ್ ಕ್ರೀಮ್ ನೀಡುತ್ತಿದ್ದಾರೆ.
ಬೆಳಗಾವಿ ಮಾರ್ಚ್ 14: ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಪ್ರಬಲ ಪಕ್ಷಗಳಿಂದ ಭರದ ಸಿದ್ಧತೆ ನಡೆದಿದೆ. ಈ ನಡುವೆ ಬೆಳಗಾವಿ ಬಿಜೆಪಿ ಶಾಸಕರೊಬ್ಬರು ಶಾಲೆಗೆ ಹೋಗುವ ಮಕ್ಕಳಿಗೆ ಉಚಿತ ಐಸ್ ಕ್ರೀಮ್ ನೀಡುವ ಉತ್ಸವ ಆಯೋಜನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಸಾಮಾನ್ಯವಾಗಿ ಚುನಾವಣೆಗಳಲ್ಲಿ ಮದ್ಯ, ಹಣ, ಸೀರೆ, ಆಹಾರದ ಕಿಟ್, ಮತ್ತಿತರ ಆಮಿಷಗಳನ್ನ ಒಡ್ಡಿ ಮತ ಗಿಟ್ಟಿಸಿಕೊಳ್ಳುವುದನ್ನು ನಾವೆಲ್ಲರೂ ನೋಡಿದ್ದೇವೆ. ಆದರೆ ಈ ಬಾರಿಯ ಚುನಾವಣೆ ತುಂಬಾ ವಿಭಿನ್ನವಾದಂತೆ ತೋರುತ್ತಿದೆ. ಬಿಜೆಪಿ ಶಾಸಕ ಅಭಯ ಪಾಟೀಲ ಈಗ ಬೆಳಗಾವಿಯಲ್ಲಿ ಶಾಲೆಗೆ ಹೋಗುವ ಮಕ್ಕಳಿಗೆ ಉಚಿತ ಐಸ್ ಕ್ರೀಮ್ ನೀಡುತ್ತಿದ್ದಾರೆ.

ಶಾಸಕ ಅಭಯ ಪಾಟೀಲ್ ಅವರು ಬೆಳಗಾವಿಯಲ್ಲಿ ಐಸ್ ಕ್ರೀಮ್ ಉತ್ಸವವನ್ನು ಇಂದು ಮತ್ತು ನಾಳೆ (ಮಾರ್ಚ್ 14 ಮತ್ತು 15) ಆಯೋಜಿಸಿದ್ದಾರೆ. ಬೆಳಿಗ್ಗೆ 9.30ಕ್ಕೆ ಆರಂಭವಾಗುವ ಈ ಉತ್ಸವ ಸಂಜೆ 7ರವರೆಗೆ ನಡೆಯಲಿದೆ. ಉತ್ಸವದಲ್ಲಿ ಭಾಗವಹಿಸಲು ಮಕ್ಕಳಿಗೆ ಉಚಿತ ಪಾಸ್ಅನ್ನು ನೀಡಲಾಗುತ್ತದೆ. ಪಾಸ್ ಅನ್ನು ಅಂಗಡಿಯಲ್ಲಿ ತೋರಿಸಿದರೆ ಉಚಿತವಾಗಿ ಐಸ್ ಕ್ರೀಮ್ ಪಡೆಯಬಹುದು. ಪಾಸ್ ಹೊಂದಿದ ಮಕ್ಕಳಿಗೆ ಮಾತ್ರ ಉಚಿತ ಐಸ್ ಕ್ರೀಮ್ ನೀಡಲಾಗುತ್ತದೆ. ಉತ್ಸವದಲ್ಲಿ ಎಲ್ಕೆಜಿಯಿಂದ 10ನೇ ತರಗತಿ ಮಕ್ಕಳು ಮಾತ್ರ ಭಾಗವಹಿಸಬೇಕು.
ಪಾಸ್ ಪಡೆದವರು ನಿಗದಿತ ಅಥವಾ ಪಾಸ್ನಲ್ಲಿ ನೀಡಲಾದ ವಿಳಾಸದ ಐಸ್ ಕ್ರೀಮ್ ಪಾರ್ಲರ್ನಲ್ಲಿ ಮಾತ್ರ ಉಚಿತ ಐಸ್ ಕ್ರೀಮ್ ಸಿಗುತ್ತದೆ. ಪಾಸ್ನಲ್ಲಿ ಐಸ್ ಕ್ರೀಮ್ ಪಾರ್ಲರ್ ಹೆಸರು ಮತ್ತು ಅದರ ವಿಳಾಸ ಕೂಡ ನೀಡಲಾಗಿದೆ. ಈ ಮೂಲಕ ಮತದಾರರನ್ನು ಸೆಳೆಯಲು ಅಭಯ ಪಾಟೀಲ ಮುಂದಾಗಿದ್ದಾರೆ.

ಒಟ್ಟು ಒಂಬತ್ತು ಐಸ್ ಕ್ರೀಮ್ ಪಾರ್ಲರ್ ಹೆಸರುಗಳು ಇಲ್ಲಿದೆ:
1.Angolkar parlour- plot No 20(Ioc)pump congress road tilakwadi belagavi.
2.Bhagya nagar parlour- shop num 1 plot no 86/13/1 4th cross bhagya nagar angol belagavi.
3.Hari mandir parlour- shop no 3 mutakekar complex gadgil buss stop main road angol belagavi.
4.RPD collage belagavi- shop no.5 opposite rpd college gate tilakwadi belagavi.
5. RPD cross hindawadi parlour- 74/5 cts no 2808 hindwadi vadgaon belagavi.
6.RPD cross parlour- opp.Hotel Uday Bhavan 52 A somwar peth tilakwadi belagavi
7. Khavu kata- tinisu katte basaveswar circle khanapur road belagavi
8. uppin 1st stage corner- mandoli road near 1st railway gate tilakwadi belagavi.
9. Zatpat colony parlour- R.s.no 744/3 Shivshakti Nagar Angol Belagavi.
-
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ












Click it and Unblock the Notifications