ಕುತೂಹಲ ಕೆರಳಿಸಿದ ಮಾಜಿ ಶಾಸಕ ಸಂಭಾಜಿ ಪಾಟೀಲ ಪುತ್ರ ಸಾವು
ಬೆಳಗಾವಿ, ಡಿಸೆಂಬರ್.04: ಬೆಳಗಾವಿ ದಕ್ಷಿಣ ಕ್ಷೇತ್ರದ ಮಾಜಿ ಶಾಸಕ ಸಂಭಾಜಿ ಪಾಟೀಲ ಪುತ್ರ ಸಾಗರ ಪಾಟೀಲ ಶವ ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದಿಂದ ಸ್ವಲ್ಪ ದೂರದಲ್ಲಿ ಪತ್ತೆಯಾಗಿದೆ.
೬ ಜನ ಸಹಚರರೊಂದಿಗೆ ಬೆಂಗಳೂರಿಗೆ ತೆರಳಿದ್ದ ಸಾಗರ ಪಾಟೀಲ ನಿನ್ನೆ ಸೋಮವಾರ (ಡಿಸೆಂಬರ್ .03) ರಾತ್ರಿ ರೈಲಿನಲ್ಲಿ ಊಟ ಮಾಡುವಾಗ ಕೈ ತೊಳೆದುಕೊಳ್ಳಲೆಂದು ಹೋದವರು ಮರಳಿ ಬರಲೇ ಇಲ್ಲ. ಆದರೆ ಆ ನಂತರ ಹುಡುಕಾಟ ನಡೆಸಿದಾಗ ಸಾಗರ ಪಾಟೀಲ ಶವ ರೈಲ್ವೆ ನಿಲ್ದಾಣದಿಂದ ಸ್ವಲ್ಪ ದೂರದಲ್ಲಿ ಪತ್ತೆಯಾಗಿದೆ.

ಈ ಅಸಹಜ ಸಾವಿನ ಪ್ರಕರಣ ಕುತೂಹಲ ಕೆರಳಿಸಿದ್ದು, ಪೊಲೀಸರ ವಿಚಾರಣೆ ನಂತರ ಇನ್ನಷ್ಟು ಮಾಹಿತಿ ಹೊರಬರುವ ಸಾಧ್ಯತೆಯಿದೆ.












Click it and Unblock the Notifications