ಜಯಾ ವಿರುದ್ಧ ಮೇಲ್ಮನವಿ ಸಲ್ಲಿಸಲು ಚುನಾವಣಾ ಲೆಕ್ಕಾಚಾರ
ಬೆಂಗಳೂರು, ಮೇ 27 : ಜಯಲಲಿತಾ ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಮೇಲ್ಮನವಿ ಸಲ್ಲಿಸಲು ಕರ್ನಾಟಕ ಸರ್ಕಾರಕ್ಕೆ ಆಗಸ್ಟ್ 11ರವರೆಗೆ ಅವಕಾಶವಿದೆ. ಬಿಬಿಎಂಪಿ ಚುನಾವಣೆ ಎದುರಾಗಿರುವ ಹಿನ್ನಲೆಯಲ್ಲಿ ತಮಿಳರ ಮತಗಳ ಮೇಲೆ ಕಣ್ಣಿಟ್ಟಿರುವ ಸರ್ಕಾರ, ಚುನಾವಣೆ ನಂತರ ಮೇಲ್ಮನವಿ ಸಲ್ಲಿಸಲಿದೆ.
ಮೂರು
ತಿಂಗಳಿನಲ್ಲಿ
ಬಿಬಿಎಂಪಿ
ಚುನಾವಣೆ
ನಡೆಸಿ
ಎಂದು
ಸುಪ್ರೀಂಕೋರ್ಟ್
ಮೇ
5ರಂದು
ಕರ್ನಾಟಕ
ಸರ್ಕಾರಕ್ಕೆ
ಆದೇಶ
ನೀಡಿದೆ.
ಬೃಹತ್
ಬೆಂಗಳೂರು
ಮಹಾನಗರ
ಪಾಲಿಕೆ
ಚುನಾವಣೆಯನ್ನು
ಪ್ರತಿಷ್ಠೆಯಾಗಿ
ತೆಗೆದುಕೊಂಡಿರುವ
ಕಾಂಗ್ರೆಸ್,
ಚುನಾವಣೆ
ಮುಗಿಯಲಿ
ಎಂದು
ಕಾಯಲು
ತೀರ್ಮಾನಿಸಿದೆ.
[ಮೇಲ್ಮನವಿಗೆ
ಕಾನೂನು
ತೊಡಕಿದೆಯೇ?]
30 ಲಕ್ಷ ಮತಗಳು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸುಮಾರು 30 ಲಕ್ಷ ತಮಿಳರು ಮತದಾನ ಮಾಡಲಿದ್ದಾರೆ. ಇಷ್ಟು ಮತಗಳು ಯಾವುದೇ ಪಕ್ಷಕ್ಕಾದರೂ ದೊಡ್ಡ ಲಾಭ ತಂದುಕೊಡಲಿವೆ. ಆದ್ದರಿಂದ, ಚುನಾವಣೆ ಮುಗಿಯಲಿ ಎಂದು ಸರ್ಕಾರ ಕಾದು ನೋಡುವ ತಂತ್ರ ಅನುಸರಿಸಲಿದೆ. [ಮೂರು ತಿಂಗಳಲ್ಲಿ ಬಿಬಿಎಂಪಿ ಚುನಾವಣೆ ನಡೆಸಿ]
ಮೂವತ್ತು ಲಕ್ಷ ಮತದಾರರ ಪೈಕಿ ಬಹುಸಂಖ್ಯಾತರು ಜಯಲಲಿತಾ ಬೆಂಬಲಿಗರು ಮತ್ತು ಎಐಎಡಿಎಂಕೆ ಪಕ್ಷವನ್ನು ಬೆಂಬಲಿಸುವವರು. ಒಂದು ವೇಳೆ ಸರ್ಕಾರ ಮೇಲ್ಮನವಿ ಸಲ್ಲಿಸಿದರೆ ಕಾಂಗ್ರೆಸ್ ಎಐಎಡಿಎಂಕೆ ವಿರೋಧಿ ಎಂದು ಜನರು ಪಕ್ಷದ ವಿರುದ್ಧ ತಿರುಗಿ ಬೀಳಬಹುದು ಎಂಬ ಅಡಗಿದೆ. [ಬಿಬಿಎಂಪಿ ವಿಭಜನೆ ಹೇಗೆ, ಇಲ್ಲಿದೆ ಮಾಹಿತಿ]
ಚುನಾವಣೆ ಲೆಕ್ಕಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಸರ್ಕಾರ ಸದ್ಯಕ್ಕೆ ಮೇಲ್ಮನವಿ ಸಲ್ಲಿಸುವಂತಹ ಕೆಲಸಕ್ಕೆ ಕೈ ಹಾಕುವುದಿಲ್ಲ. ಕಾನೂನು ಇಲಾಖೆಯೂ ಸರ್ಕಾರಕ್ಕೆ ಅಗತ್ಯ ವರದಿಗಳನ್ನು ನೀಡಲಿದ್ದು, ನಂತರ ಮೇಲ್ಮನವಿ ಸಲ್ಲಿಸಬಹುದು. ಅಂದಹಾಗೆ ಜುಲೈನಲ್ಲಿ ಬಿಬಿಎಂಪಿ ಚುನಾವಣೆ ನಡೆಯುವ ಸಾಧ್ಯತೆ ಇದೆ.