ವಿಂಟರ್ ಕಾರ್ನಿವಾಲ್ :ಇದು ವಿಶೇಷ ಮಕ್ಕಳ ಹಬ್ಬ
ಬೆಂಗಳೂರು, ಡಿಸೆಂಬರ್ 11 : ಇಂದಿರಾನಗರದಲ್ಲಿರುವ ಸ್ಪ್ಯಾಸ್ಟಿಕ್ ಸೊಸೈಟಿಯು ಬೌದ್ಧಿಕ ಬೆಳವಣಿಗೆ ಕುಂಠಿತ ಅನಾರೋಗ್ಯದಿಂದ ಬಳಲುತ್ತಿರುವ ವಿಶೇಷ ಮಕ್ಕಳಿಗಾಗಿ 'ವಿಂಟರ್ ಕಾರ್ನಿವಲ್ 'ಏರ್ಪಡಿತ್ತು.
ಕಾರ್ಯಕ್ರಮವು ಇಂತಹ ಮಕ್ಕಳ ಮನೋಸ್ಥೈರ್ಯ ಉದ್ದೀಪನಗೊಳಿಸುವ ಮಹಾತ್ಕಾರ್ಯ ಕೈಗೊಂಡಿತು. ಕಾರ್ಯಕ್ರಮದಲ್ಲಿ ಮಕ್ಕಳು, ಪೋಷಕರು, ಕಲಾವಿದರು ಎಲ್ಲರೂ ಒಂದೆಡೆ ಸೇರಿ, ಕರಕುಶಲ ವಸ್ತುಗಳು, ಪೇಪರ್ ಕ್ರಾಫ್ಟ್, ಟೈಲರಿಂಗ್ ಮಾಡುವ ಮೂಲಕ ಸಂತಸ ಪಟ್ಟರು. ಎಲ್ಲರಲ್ಲಿರುವ ಕಲೆಯನ್ನು ಹೊರ ಹಾಕುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು.

ಎಸ್ ಬಿಐ ಲೈಫ್ ಇನ್ಶುರೆನ್ಸ್ ಅಹಯೋಗದಲ್ಲಿ ಕಾರ್ನಿವಲ್ ಹಮ್ಮಿಕೊಂಡಿತ್ತು, ಎಸ್ ಬಿಐ ಪ್ರಾದೇಶಿಕ ವ್ಯವಸ್ಥಾಪಕ ಪ್ರದೀಪ್ ಕುಮಾರ್ ಮಹಾಲಿಕ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸ್ಪ್ಯಾಸ್ಟಿಕ್ ಸೊಸೈಟಿ ನಿರ್ದೇಶಕರಾದ ಕುಕ್ಮಿಣಿ ಕೃಷ್ಣಸ್ವಾಮಿ ಸೇರಿ ಒಟ್ಟು2500 ಮಂದಿ ಬುದ್ದಿಮಾಂದ್ಯ ಮಕ್ಕಳು ಮತ್ತೆ ಅವರೊಡನೆ ಪೋಷಕರು,ಶಿಕ್ಷಕರು ನಡೆದುಕೊಳ್ಳಬೇಕಾದ ರೀತಿ ಕುರಿತು ಚರ್ಚಿಸಿದರು.
ಚಳಿಗಾಲದ ಹಬ್ಬದಲ್ಲಿ ವಿಶೇಷ ಸಂಗೀತ ಕಾರ್ಯಕ್ರಮ, ಆಹಾರ ಮಳಿಗೆಗಳು, ಆಟಗಳ ಜತೆಗೆ ಕರಕುಶಲ ವಸ್ತುಗಳ ಪ್ರದರ್ಶನವನ್ನು ಕೂಡ ಆಯೋಜಿಸಲಾಗಿತ್ತು. ವಿಶೇಷ ಮಕ್ಕಳು ಬಗೆ ಬಗೆಯ ತಿಂಡಿ ತಿನಿಸುಗಳು, ಖುಷಿಕೊಡುವ ನಾನಾ ಬಗೆಯ ಮೋಜಿನ ಆಟಗಳು, ಕುಣಿದು ಕುಪ್ಪಿಸುವ ಮ್ಯೂಸಿಕ್ ಸೇರಿದಂತೆ ಇನ್ನೂ ಹಲವು ಅವಿಸ್ಮರಣೀಯ ಚಟುವಟಿಕೆಗಳನ್ನು ಭಾಗಿಯಾಗಿ ಸಂತಸ ಪಟ್ಟರು.

ಜತೆಗೆ ವಿದ್ಯಾ ವೆಂಕಟ್, ಮೊಹಮ್ಮದ್ ಜಹೀರ್ ಅವರಿಂದ ರೆಟ್ರೋ ಹಾಡುಗಳು ಮೂಡಿಬಂದವು. ಕಾರ್ಯಕ್ರಮದಲ್ಲಿ ನೂರಾರು ಆಕಾಶ ಬುಟ್ಟಿಗಳು, ಕಾಗದಿಂದ ತಯಾರಿಸಿದ ಅಲಂಕಾರಿಕ ವಸ್ತುಗಳು, ಗೃಹಲಂಕಾರಿ ವಸ್ತುಗಳ ಪ್ರದರ್ಶನ ನಡೆಯಿತು ಇದು ಕ್ರಿಸ್ ಮಸ್ ತಿಂಗಳಾಗಿರುವುದರಿಂದ ಸಾಂತಾ ಕ್ಲಾಸ್, ವಿಶೇಷ ಮುಖವಾಡಗಳು, ಮಕ್ಕಳು ಹಾಗೂ ಶಿಕ್ಷಕರು ಸೇರಿ ತಯಾರಿಸಿದ ಕ್ರಿಸ್ ಮಸ್ ಟ್ರೀ, ಅಲಂಕಾರಿಕ ಉತ್ಪನ್ನಗಳಾದ ಬಳೆ, ಸರಗಳು, ಚಿತ್ರಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು.
-
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ












Click it and Unblock the Notifications