ಬೆಂಗಳೂರಿನಲ್ಲಿ ವೇಸ್ಟ್ ಆಗ್ತಿದೆ ಶೇ 50ರಷ್ಟು ಕಾವೇರಿ ನೀರು
ಬೆಂಗಳೂರು, ಸೆಪ್ಟೆಂಬರ್ 14: ಬೆಂಗಳೂರಿಗೆ ಹರಿದುಬರುವ ನೀರಿನ ಪೈಕಿ ಕಾಲು ಭಾಗದಷ್ಟು ಸೋರಿಕೆಯಿಂದ ಹಾಗೂ ಸರಬರಾಜಿನ ಮಧ್ಯೆ ವ್ಯರ್ಥವಾಗುತ್ತದೆ ಎಂಬುದು ನಿಮಗೆ ಗೊತ್ತಾ? ಕಾವೇರಿ ನೀರು ಕಡಿಮೆಯಾದರೆ ಬೆಂಗಳೂರಿಗೂ ಸಮಸ್ಯೆಯೇ. ಅಂದಹಾಗೆ ನೀರು ಸೋರಿಕೆ ಸಮಸ್ಯೆ ಬೆಂಗಳೂರು ನಗರದ ಪಾಲಿಗೆ ದೊಡ್ಡದಾಗಿ ಕಾಡುತ್ತಿದೆ.
ಈ ನಗರದ ಒಳಗಿನ ಸಮಸ್ಯೆ ಬಗ್ಗೆ ಗಮನಹರಿಸುವುದಕ್ಕೆ ಇದು ಸೂಕ್ತ ಸಮಯ. ಬೆಂಗಳೂರು ಜಲಮಂಡಳಿ ಮಾಹಿತಿ ಪ್ರಕಾರ: 85 ಲಕ್ಷ ಜನಸಂಖ್ಯೆಯಿರುವ ಈ ನಗರಕ್ಕೆ ಪ್ರತಿ ದಿನ 1450 ಎಂಎಲ್ ಡಿ (ಮಿಲಿಯನ್ ಲೀಟರ್ಸ್) ನೀರು ಬೇಕು. ಅಧಿಕಾರಿಗಳ ಹೇಳುವ ಹಾಗೆ ಬೆಂಗಳೂರಿಗಿರುವ ಏಕೈಕ ಜಲ ಮೂಲ ಕಾವೇರಿಯೇ. ಕುಡಿಯುವುದಕ್ಕೆ, ಇತರ ದಿನ ಬಳಕೆಗೆ ಬಳಸುವುದೂ ಇದೇ ಕಾವೇರಿ ನೀರನ್ನೇ.[ಆಕ್ರೋಶಕ್ಕೆ ಮಣಿದ ಜಲಮಂಡಳಿ, ಬೋರ್ ವೆಲ್ ಶುಲ್ಕ ಇಳಿಕೆ]

ಇನ್ನು 500 ಎಂಎಲ್ ಡಿ ಯಷ್ಟು ನೀರನ್ನ ಸಾರ್ವಜನಿಕ ಹಾಗೂ ಖಾಸಗಿ ಬೋರ್ ವೆಲ್ ಗಳಿಂದ ಸರಬರಾಜು ಮಾಡಲಾಗುತ್ತದೆ. ಸರಾಸರಿ ತಲಾ 100 ಲೀಟರ್ ನಷ್ಟು ನೀರನ್ನ ಬೆಂಗಳೂರಿಗರು ಬಳಸ್ತಾರೆ. 2007ರ ವರೆಗೆ ಬೆಂಗಳೂರಿನ ನೀರಿನ ಬಳಕೆ ಪ್ರಮಾಣ 900 ಎಂಎಲ್ ಡಿಯಷ್ಟಿತ್ತು. ಆ ನಂತರ ಬಿಬಿಎಂಪಿ ಅಂತಾಗಿ, ನೂರಾಹತ್ತು ಹಳ್ಳಿಗಳನ್ನು ಪಾಲಿಕೆ ವ್ಯಾಪ್ತಿಗೆ ತಂದ ಮೇಲೆ ಜಲ ಮಂಡಳಿ ನೂರು ಟಿಎಂಸಿ ಅಡಿ ನೀರನ್ನು ಹೆಚ್ಚುವರಿಯಾಗಿ ಪೂರೈಸಲು ಒಪ್ಪಿಗೆ ಸೂಚಿಸಿತು.
1450 ಎಂಎಲ್ ಡಿ ಪೈಕಿ ಶೇ 44.67ರಷ್ಟು ಮನೆ ಬಳಕೆಗೆ, ಶೇ 3.84ರಷ್ಟು ಮನೆಗಳ ಹೊರತಾದ ಬಳಕೆಗೆ, ಇನ್ನು ಶೇ 5.20ಯಷ್ಟು ಭಾಗಶಃ ಗೃಹ ಬಳಕೆಗೆ (ಒಂದೇ ಕಟ್ಟಡದಲ್ಲಿ ಮನೆಗಳು ಹಾಗೂ ವ್ಯಾಪಾರದ ಮಳಿಗೆಗಳು ಎರಡೂ ಇರುತ್ತವೆ) ಆಗುತ್ತಿದೆ. ಇನ್ನು ಶೇ 1.56ರಷ್ಟನ್ನು ಬಿಐಎಎಲ್ ಮತ್ತಿತರ ಕಾರ್ಖಾನೆಗಳಿಗೆ ಬಳಸಲಾಗುತ್ತದೆ. ಒಟ್ಟಾರೆ ಕಾವೇರಿ ನೀರಿನ ಶೇ 50.75ರಷ್ಟು ನೀರನ್ನು ಮಾತ್ರ ಬೆಂಗಳೂರಿಗೆ ಹರಿಸಲಾಗುತ್ತದೆ.[ಬೆಂಗಳೂರು : ನೀರಿನ ಸಂಪರ್ಕ ಪಡೆಯಲು ಆನ್ ಲೈನ್ ನಲ್ಲಿ ಅರ್ಜಿ ಹಾಕಿ]
ಈಗ ಬೆಂಗಳೂರಿಗರು ಆಲೋಚನೆ ಮಾಡಬೇಕಾದ ಅಂಕಿ-ಸಂಖ್ಯೆ ತಿಳಿಸಬೇಕಾಗಿದೆ. ಇನ್ನುಳಿದ ಶೇ 49.25ರಷ್ಟು ನೀರಿನಿಂದ ಜಲಮಂಡಳಿಗೆ ಯಾವುದೇ ಆದಾಯ ಬರುತ್ತಿಲ್ಲ. ಹೀಗಂದರೆ ಏನು ಅಂತ ಕೇಳಿದರೆ, 725 ಎಂಎಲ್ ಡಿ ನೀರು ಪೂರ್ತಿ ವ್ಯರ್ಥ ಆಗ್ತಿದೆಯಾ ಅಂತ ಪ್ರಶ್ನೆ ಬರುತ್ತೆ. ಅದಕ್ಕೆ ಜಲಮಂಡಳಿ ಎಂಜಿನಿಯರ್ ಉತ್ತರಿಸಿದ್ದಾರೆ.[ಪ್ರೋರೇಟಾ ಶುಲ್ಕ ಹೆಚ್ಚಿಸಿದ ಬೆಂಗಳೂರು ಜಲಮಂಡಳಿ]
ಆದಾಯ ಬರುವುದಿಲ್ಲ ಎಂದಿರುವ ಪ್ರಮಾಣದಲ್ಲಿ ಶೇ 25ರಷ್ಟು ನೀರು ಸೋರಿಕೆ ಹಾಗೂ ಸರಬರಾಜಿನ ಮಧ್ಯೆ ವ್ಯರ್ಥವಾಗುತ್ತದೆ. ಇನ್ನು ಬಾಕಿ ಶೇ 24ರಷ್ಟು ಹೇಗೆ ವ್ಯರ್ಥವಾಗುತ್ತದೆ ಎಂಬುದೇ ತಿಳಿಯುತ್ತಿಲ್ಲ. ಅನಧಿಕೃತ ಸಂಪರ್ಕ, ಸಮಸ್ಯೆ ಇರುವ ನೀರಿನ ಮೀಟರ್ ಗಳು, ರಾಜ್ಯ ಸರ್ಕಾರದ ಯೋಜನೆಗಳಡಿ ಸರಬರಾಜು ಮಾಡುತ್ತಿರುವುದು ಎಲ್ಲವೂ ಲೆಕ್ಕಕ್ಕೆ ತೆಗೆದುಕೊಂಡೇ ಹೇಳುತ್ತಾರೆ ಜಲಮಂಡಳಿ ಎಂಜಿನಿಯರ್.
-
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Bengaluru Water: ಬೆಂಗಳೂರು ಕೆಸಿ, ಎಚ್ ಎನ್ ವ್ಯಾಲಿ ನೀರಿನಿಂದ ಅಪಾಯವಿಲ್ಲ: ಸಚಿವ ಭೋಸರಾಜು -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್












Click it and Unblock the Notifications