ಬಳ್ಳಾರಿ ಜಿಲ್ಲೆಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಅಭ್ಯರ್ಥಿಗಳು
ಬಳ್ಳಾರಿ, ಮೇ 15 : ಬಳ್ಳಾರಿ ಜಿಲ್ಲೆಯ ಬಿ.ಎಸ್. ಆನಂದಸಿಂಗ್, ಇ. ತುಕಾರಾಂ ಮತ್ತು ಬಿ. ನಾಗೇಂದ್ರ ನಿರಂತರವಾಗಿ ಮೂರು ಬಾರಿ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಶಾಸಕರಾಗಿದ್ದಾರೆ.
ಬಿ.ಎಸ್. ಆನಂದಸಿಂಗ್ ಅವರು 2008, 2013 ಮತ್ತು 2018 ರಲ್ಲಿ ನಿರಂತರವಾಗಿ ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಮೊದಲ ಎರಡು ಅವಧಿಗೆ ಬಿಜೆಪಿಯಿಂದ, ಈಬಾರಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.
ಇ. ತುಕಾರಾಂ ಅವರು 2008, 2013 ಮತ್ತು 2018 ರಲ್ಲಿ ಸಂಡೂರು ಎಸ್ಟಿ ಮೀಸಲು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ನಿಂದಲೇ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.

ಬಿ. ನಾಗೇಂದ್ರ ಅವರು 2008 ರಲ್ಲಿ ಕೂಡ್ಲಿಗಿಯಿಂದ ಬಿಜೆಪಿ ಅಭ್ಯರ್ಥಿಯಾಗಿ, 2013 ರಲ್ಲಿ ಪಕ್ಷೇತರರಾಗಿ ಕೂಡ್ಲಿಗಿಯಿಂದ, 2018 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕರಾಗಿ ಆಯ್ಕೆ ಆಗಿದ್ದಾರೆ.












Click it and Unblock the Notifications