ಬಳ್ಳಾರಿ: ಕರೂರು ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕಿಗೆ ಕನ್ನ
ಬಳ್ಳಾರಿ, ಮೇ 08 : ಸೋಮವಾರ ನಸುಕಿನ ವೇಳೆ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಕರೂರು ಗ್ರಾಮದಲ್ಲಿನ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕಿನ ಬಾಗಿಲು ಮುರಿದು ಹಣ ದೋಚಿ ಪರಾರಿಯಾಗಿದ್ದಾರೆ.
ಬ್ಯಾಂಕಿನ ಬಾಗಿಲು ಮುರಿಯುವ ಮುನ್ನ ಪ್ಲಾನ್ ಮಾಡಿ ಸಿನಿಮೀಯ ರೀತಿಯಲ್ಲಿ ವಿದ್ಯುತ್, ಸೈರಾನ್, ಸಿಸಿ ಟಿವಿಗಳ ಸಂಪರ್ಕವನ್ನು ಕಟ್ ಮಾಡಿ ಬಳಿಕ ಬ್ಯಾಂಕ್ ಬಾಗಿಲು ಮುರಿದು ಒಳನುಗ್ಗಿ ಬ್ಯಾಂಕ್ ನಲ್ಲಿದ್ದ ಹಣ ದೋಚಿದ್ದಾರೆ.

ಎಷ್ಟು ಹಣ ಕಳ್ಳತನವಾಗಿ ಎಂಬ ಬಗ್ಗೆ ಇನ್ನು ವರದಿಯಾಗಿಲ್ಲ. ಬೆಳಗ್ಗೆ ಎಂದಿನಂತೆ ಬ್ಯಾಂಕ್ ಸಿಬ್ಬಂದಿ ಬಾಗಿಲು ತೆರೆಯುವ ವೇಳೆ ಘಟನೆ ಬೆಳಕಿಗೆ ಬಂದಿದೆ.
ಘಟನಾ ಸ್ಥಳಕ್ಕೆ ಬ್ಯಾಂಕ್ ನ ಹಿರಿಯ ಅಧಿಕಾರಿಗಳು, ಸಿರಿಗೇರಿ ಪೊಲೀಸರು ಹಾಗೂ ಶ್ವಾನದಳ ಆಗಮಿಸಿದ್ದು, ತನಿಖೆ ನಡೆಸಿದ್ದಾರೆ.












Click it and Unblock the Notifications