ಪ್ರವಾಸಿ ತಾಣ ಹಂಪಿ ಸುತ್ತಾಡಲು ಪ್ರವಾಸಿಗರಿಗೆ ಸೈಕಲ್ ಭಾಗ್ಯ
ವಿಜಯನಗರ, ಮಾರ್ಚ್ 20; ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿ ಅಪ್ಲಿಕೇಶನ್ ಆಧಾರಿತ ಸೈಕಲ್ ಸೇವೆ ಆರಂಭಿಸಲು ಪ್ರವಾಸಿಗರಿಂದ ಹಂಪಿ ಅಭಿವೃದ್ಧಿ ಪ್ರಾಧಿಕಾರ ಸಲಹೆಗಳನ್ನು ಆಹ್ವಾನಿಸಿದೆ. ಈಗಾಗಲೇ ಕೆಲವು ರೆಸಾರ್ಟ್ಗಳು ಸೈಕಲ್ ನೀಡುತ್ತಿದ್ದು, ಸರಿಯಾದ ಮಾರ್ಗ ನಕ್ಷೆ ನೀಡದೆ ಪ್ರವಾಸಿಗರ ಕೆಂಗಣ್ಣಿಗೆ ಗುರಿಯಾಗಿವೆ.
ನಗರ ಭೂ ಸಾರಿಗೆ ನಿರ್ದೇಶನಾಲಯ (ಡಿಯುಎಲ್ಟಿ)ಗೆ ಪ್ರವಾಸಿಗರು ಆನ್ಲೈನ್ ಅಥವ ಆಫ್ಲೈನ್ ಮೂಲಕ ಸಲಹೆ ನೀಡಬಹುದಾಗಿದೆ. ಸೈಕಲ್ ಸೇವೆ ಹೇಗಿರಬೇಕು?, ಯಾವ ಮಾದರಿಯಲ್ಲಿರಬೇಕು ಎಂದು ಜನರು ಸಲಹೆ ನೀಡಬಹುದಾಗಿದೆ.
ಹಂಪಿ ಸುತ್ತಲಿನ ಕೆಲವು ರೆಸಾರ್ಟ್, ಹೊಂ ಸ್ಟೇಗಳು ಈಗಾಗಲೇ ಪ್ರವಾಸಿಗರಿಗೆ ಬಾಡಿಗೆಗೆ ಸೈಕಲ್ ನೀಡುತ್ತಿವೆ. ಆದರೆ ಸರಿಯಾದ ಮಾರ್ಗ ನಕ್ಷೆಯನ್ನು ನೀಡದೆ ಪ್ರವಾಸಿಗರಿಗೆ ಗೊಂದಲ ಉಂಟು ಮಾಡುತ್ತಿವೆ.

ಈ ಹಿನ್ನಲೆಯಲ್ಲಿ ಹಂಪಿ ಅಭಿವೃದ್ಧಿ ಪ್ರಾಧಿಕಾರ ಅಪ್ಲಿಕೇಶನ್ ಆಧಾರಿತ ಸೈಕಲ್ ಸೇವೆ ನೀಡಲು ಬಯಸಿದ್ದು, ಅದಕ್ಕಾಗಿ ಜನರಿಂದ ಸಲಹೆಗಳನ್ನು ಆಹ್ವಾನಿಸಿದೆ. ಹಂಪಿಯ ಎಲ್ಲಾ ಪ್ರವಾಸಿ ತಾಣಗಳ ಬಳಿಗೂ 4 ಚಕ್ರದ ವಾಹನದಲ್ಲಿ ಹೋಗಲು ಸಾಧ್ಯವಿಲ್ಲ. ಆದ್ದರಿಂದ ಸೈಕಲ್ ಸೇವೆ ನೀಡಿದರೆ ಪ್ರವಾಸಿಗರಿಗೆ ಅನುಕೂಲವಾಗಲಿದೆ.
ಅಲ್ಲದೇ ಹಂಪಿಗೆ ಬರುವ ವಿದೇಶಿ ಪ್ರವಾಸಿಗರ ಹೆಚ್ಚು ಸೈಕಲ್ ಬಳಕೆ ಮಾಡಲು ಉತ್ಸುಕರಾಗಿದ್ದಾರೆ. ಆದ್ದರಿಂದ ಹಂಪಿ ಅಭಿವೃದ್ಧಿ ಪ್ರಾಧಿಕಾರ ಪ್ರವಾಸಿಗರ ಕೈಗೆ ಸೈಕಲ್ ನೀಡಲು ಮುಂದಾಗಿದೆ.
ಹಂಪಿ ಅಭಿವೃದ್ಧಿ ಪ್ರಾಧಿಕಾರ ವಿವಿಧ ಕಾರಣಗಳಿಂದ ಸೈಕಲ್ ಓಡಿಸಲು ಸಾಧ್ಯವಿಲ್ಲ ಪ್ರವಾಸಿಗರಿಗಾಗಿ ಎಲೆಕ್ಟ್ರಿಕಲ್ ಸೈಕಲ್ ಸೇವೆ ಆರಂಭಿಸಲು ಮುಂದಾಗಿದೆ. ಎಲ್ಲದಕ್ಕು ಮೊದಲು ಜನರ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತದೆ.
ಸಮೀಕ್ಷೆ ಕಾರ್ಯ ಪೂರ್ಣಗೊಳ್ಳುತ್ತಿದ್ದಂತೆ ಸಂಸ್ಥೆಯೊಂದಕ್ಕೆ ಇದರ ನಿರ್ವಹಣೆ ಉಸ್ತುವಾರಿ ನೀಡಲು ಹಂಪಿ ಅಭಿವೃದ್ದಿ ಪ್ರಾಧಿಕಾರ ಮುಂದಾಗಿದೆ. ಮಾರ್ಗ, ಸೈಕಲ್ ನಿರ್ವಹಣೆ ಸೇರಿದಂತೆ ಇತರ ಎಲ್ಲಾ ಕಾರ್ಯಗಳನ್ನು ಈ ಸಂಸ್ಥೆಯೇ ನೋಡಿಕೊಳ್ಳಲಿದೆ.
ಬ್ಯಾಟರಿ ಚಾಲಿತ ರೈಲು; ಹಂಪಿಯಲ್ಲಿ ಸುಮಾರು ಪ್ರವಾಸಿ ತಾಣಗಳಿವೆ. ಅವುಗಳನ್ನು ನಡೆದುಕೊಂಡು ಹೋಗಿ ನೋಡುವುದು ಅಸಾಧ್ಯ. ಈಗ ಪ್ರವಾಸಿಗರ ಅನುಕೂಲಕ್ಕಾಗಿ ಬ್ಯಾಟರಿ ಚಾಲಿತ ರೈಲು ಸೇವೆ ಆರಂಭಿಸಲಾಗಿದೆ.
ಬ್ಯಾಟರಿ ಚಾಲಿತ ಮೂರು ಬೋಗಿಯ ರೈಲು ಒಂದು ಸಮಯದಲ್ಲಿ 90 ಪ್ರವಾಸಿಗರನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ಕೋವಿಡ್ ಪರಿಸ್ಥಿತಿ ಸುಧಾರಣೆ ಬಳಿಕ ಹಂಪಿಗೆ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಪ್ರವಾಸಿಗರಿಗೆ ಉತ್ತಮ ಸೌಲಭ್ಯಗಳನ್ನು ಪರಿಚಯಿಸಲು ಈ ಬ್ಯಾಟರಿ ಚಾಲಿತ ರೈಲು ತರಲಾಗಿದೆ.
ಈ ರೈಲಿನ ಮೂಲಕ ವಿರೂಪಾಕ್ಷ ದೇವಾಲಯ, ಉಗ್ರ ನರಸಿಂಹ ದೇವಾಲಯ, ಸಾಸಿವೆಕಾಳು ಗಣಪತಿ, ಕ್ವೀನ್ಸ್ ಬಾತ್ ಮತ್ತು ಲೋಟಸ್ ಟೆಂಪಲ್ ಸೇರಿದಂತೆ ಪ್ರಮುಖ ಸ್ಮಾರಕಗಳನ್ನು ನೋಡಬಹುದಾಗಿದೆ. ಸಂದರ್ಶಕರು ಒಂದು ದಿನದ ಟಿಕೆಟ್ ಖರೀದಿಸಬೇಕಾಗುತ್ತದೆ ಮತ್ತು ಅದರ ನಂತರ ಹಂಪಿಯ ಯಾವುದೇ ಸ್ಥಳದಿಂದ ಪ್ರಯಾಣಿಸಬಹುದು.
ಕಾಲ್ನಡಿಗೆ ಮೂಲಕ ಸಾಗುವಾಗ ಹಲವಾರು ಪ್ರಮುಖ ಸ್ಮಾರಕಗಳನ್ನು ಸಂದರ್ಶಕರು ತಪ್ಪಿಸಿಕೊಳ್ಳುತ್ತಾರೆ. ಇದನ್ನು ತಪ್ಪಿಸಲು ಮತ್ತು ಉತ್ತಮ ಪ್ರವಾಸಿ ಅನುಭವವನ್ನು ಹೆಚ್ಚಿಸಲು ಈ ಬ್ಯಾಟರಿ ಚಾಲಿತ ರೈಲು ಸೇವೆ ಆರಂಭಗೊಂಡಿದೆ.
ಕೋವಿಡ್ ಪರಿಸ್ಥಿತಿ ಸುಧಾರಣೆ ಬಳಿಕ ಹಂಪಿಗೆ ವಾರದ ದಿನಗಳಲ್ಲಿ ಸುಮಾರು 200 ಪ್ರವಾಸಿಗರು, ವಾರಾಂತ್ಯದಲ್ಲಿ 800ಕ್ಕೂ ಹೆಚ್ಚು ಜನರು ಭೇಟಿ ನೀಡುತ್ತಿದ್ದಾರೆ.
-
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications