ರಸ್ತೆ ಅಪಘಾತದಲ್ಲಿಒಂದೇ ಕುಟುಂಬದ ನಾಲ್ವರ ಸಾವು
ಬಳ್ಳಾರಿ, ಏಪ್ರಿಲ್ 13: ಸಿರುಗುಪ್ಪ ರಸ್ತೆಯ ಭಾಗ್ಯನಗರ ಕ್ಯಾಂಪ್ ಬಳಿ ನಡೆದ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ.
ಮಹಾರಾಷ್ಟ್ರದಲ್ಲಿ ಭೀಕರ ರಸ್ತೆ ಅಪಘಾತಕ್ಕೆ 17 ಬಲಿ
ಭಾಲ್ಕಿಯ ವೈದ್ಯ ದಂಪತಿಗಳಾದ ಸಂತೋಷ್(35), ಅರ್ಚನಾ (28), ಇವರ ಪುತ್ರಿ ಲಕ್ಷ್ಮಿ( 01) ತಂದೆ ಸಿದ್ಧರಾಮಪ್ಪ( 65 ) ಮೃತರು.
ಗುರುವಾರ ಸಂಜೆ ಭಾಲ್ಕಿಯಿಂದ ಬೆಂಗಳೂರಿಗೆ ಕೌಟುಂಬಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪೋಷಕರೊಂದಿಗೆ ವೈದ್ಯ ದಂಪತಿಗಳು ಕಾರಿನಲ್ಲಿ ಬರುತ್ತಿದ್ದಾಗ ಬಳ್ಳಾರಿ ಸಮೀಪದ ಭಾಗ್ಯನಗರ ಕ್ಯಾಂಪ್ ಬಳಿ, ರಸ್ತೆ ಸೇತುವೆಗೆ ಕಾರು ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.
ದಂಪತಿಗಳ ಪುತ್ರ ತನುಷ್ (03), ತಾಯಿ ಲೀಲಾವತಿ (55 ) ಪ್ರಾಣಾಪಾಯದಿಂದ ಪಾರಾಗಿ ವಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುರುಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Comments
English summary
kurugodu Police said the dead have been identified as a yound doctor couple's Santosh(35), Archana(28), their daughter Lakshmi (01), Father Siddaramappa (65). The couple's son Tanush (03) and mother Lilavati (55) Getting Treated at Vims.The family, which lived in Bhalki, Bellary. The accident took place near Bhagyanagar camp of Siruguppa road.