ಕರ್ತವ್ಯಪ್ರಜ್ಞೆ ಜೊತೆಗೆ ಆಟೋ ಚಾಲಕನ ಪ್ರಾಣವನ್ನೂ ಉಳಿಸಿದ ಕ್ಯಾಮೆರಾಮನ್
ಬಳ್ಳಾರಿ, ಸೆಪ್ಟೆಂಬರ್.04: ನ್ಯೂಸ್ ಚಾನೆಲ್ ವೊಂದರ ಕ್ಯಾಮರಾಮೆನ್ ತನ್ನ ಕರ್ತವ್ಯಪ್ರಜ್ಞೆಯನ್ನು ತೋರುವುದರ ಜೊತೆ ಜೊತೆಯಲ್ಲೇ ಓರ್ವನ ಪ್ರಾಣ ರಕ್ಷಿಸುವಲ್ಲಿ ನೆರವಾಗಿ ತನಗೆ ಅರಿವೇ ಇಲ್ಲದಂತೆ ಮಾನವೀಯ ಜವಾಬ್ದಾರಿಯನ್ನು ನಿರ್ವಹಿಸಿ ದೊಡ್ಡ ಸುದ್ದಿಯಾಗಿದ್ದಾನೆ.
ಆತನ ಹೆಸರು ದುರ್ಗೇಶ್ ಯಾದವ್ (34). ಬಳ್ಳಾರಿ ಜಿಲ್ಲೆಯ ಕನ್ನಡ ಸುದ್ದಿವಾಹಿನಿಯ ಕ್ಯಾಮರಾಮೆನ್. ಆಗಿದ್ದು ಏನಪ್ಪಾ ಅಂದ್ರೆ, ಸೋಮವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಆತನು ಕರ್ತವ್ಯಕ್ಕೆ ಹಾಜರಾಗಲು ಸ್ಥಳೀಯ ಸಂಸ್ಥೆಗಳ ಮತ ಎಣಿಕೆಯ ಕೇಂದ್ರವಾಗಿದ್ದ ತಹಸೀಲ್ದಾರರ ಕಚೇರಿಗೆ ಹೋಗುತ್ತಿದ್ದಾಗ, ಬಳ್ಳಾರಿಯ ದುರ್ಗಮ್ಮಗುಡಿ ಸಮೀಪದ ಅಂಡರ್ ಬ್ರಿಡ್ಜ್ ನಲ್ಲಿ ಆಟೋ ಚಾಲಕ ತನ್ನ ಆಟೋದ ಮುಂದಿನ ಗ್ಲಾಸ್ ನಲ್ಲಿ ಸಿಲುಕಿ ನೇತಾಡುತ್ತಿದ್ದ.
ಇದನ್ನು ಕಂಡ ದುರ್ಗೇಶ್ ಯಾದವ್, ಮೊದಲು ಮಾಡಿದ್ದು, ತನ್ನ ಕ್ಯಾಮರಾ ತೆಗೆದು ಐದು ಸೆಕೆಂಡುಗಳ ಕಾಲ ಚಿತ್ರೀಕರಣ. ಆದರೆ, ಗಾಯಾಳು ಚಾಲಕನ ಉಸಿರಾಟವನ್ನು ತಕ್ಷಣವೇ ಸೂಕ್ಷ್ಮವಾಗಿ ಗಮನಿಸಿದ ದುರ್ಗೇಶ್, ಕ್ಯಾಮರಾ ರೋಲಿಂಗ್ ನಿಲ್ಲಿಸಿ, ಆಟೋ ಚಾಲಕನನ್ನು ಸಂಕಷ್ಟದಿಂದ ಪಾರು ಮಾಡಲು ಮುಂದಾದರು.

ಆಗ, ದಾರಿಹೋಕರು ಆರಂಭದಲ್ಲಿ ಯಾರೊಬ್ಬರೂ ನೆರವಿಗೆ ಬಾರದೇ ಇದ್ದಾಗ, ತಕ್ಷಣವೇ, ಗಾಯಾಳುವನ್ನು ಆಟೋದ ಸಿಲುಕಿನಿಂದ ಹೊರಕ್ಕೆ ತೆಗೆದು, ರಸ್ತೆಯ ಮೇಲೆ ಮಲಗಿಸಿ, ಪ್ರಾಥಮಿಕ ಚಿಕಿತ್ಸೆಗೆ ಮುಂದಾಗಿ, ಪೊಲೀಸರಿಗೆ ಮಾಹಿತಿ ರವಾನೆ ಮಾಡಿ, ಗಾಯಾಳುವನ್ನು ವಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸುವಲ್ಲಿ ಯಶಸ್ವಿಯಾದರು.
ಈ ಕುರಿತು ಒನ್ ಇಂಡಿಯಾ ಜೊತೆ ಮಾತನಾಡಿದ ದುರ್ಗೇಶ್ ಯಾದವ್ ನಾನು ಮತ ಎಣಿಕೆ ಕೇಂದ್ರಕ್ಕೆ ಹೋಗುತ್ತಿದ್ದೆ, ಅದೇ ಸಂದರ್ಭದಲ್ಲಿ ಲಗೇಜ್ ಆಟೋ, ಈ ಆಟೋಕ್ಕೆ ಡಿಕ್ಕಿ ಹೊಡೆದು, ಪರಾರಿ ಆದ.
ಆದರೆ, ನಾನು ಈ ಘಟನೆಯನ್ನು ಕಣ್ಣಾರೆ ಕಂಡು, ಅಪಘಾತದಲ್ಲಿ ಚಾಲಕನು ಮೃತಪಟ್ಟಿರಬೇಕು ಎಂದುಕೊಂಡು ಐದು ಸೆಕೆಂಡುಗಳ ಕಾಲ ಕ್ಯಾಮರಾರೋಲ್ ಮಾಡಿದೆ. ಸೂಕ್ಷ್ಮವಾಗಿ ಆತನ ಉಸಿರಾಟ ಗಮನಿಸಿ ತಕ್ಷಣ ಕ್ಯಾಮೆರಾ ರೋಲಿಂಗ್ ನಿಲ್ಲಿಸಿ, ಆತನ ರಕ್ಷಣೆಗೆ ಮುಂದಾದೆ' ಎಂದರು.

ಅಷ್ಟೇ ಅಲ್ಲ ಗಾಯಾಳುವನ್ನು ಪೊಲೀಸರ ನೆರವಿನಿಂದ ವಿಮ್ಸ್ ಆಸ್ಪತ್ರೆಗೆ ಕಳುಹಿಸಿದ ನಂತರ, ವಿಮ್ಸ್ ಆಸ್ಪತ್ರೆಯ ಸೂಪರಿಂಡೆಂಟ್ ಅವರಿಗೆ ಫೋನ್ ಮಾಡಿ, ಗಾಯಾಳುವಿನ ಮಾಹಿತಿ ಪಡೆದಿದ್ದಾರೆ.
ವಿಮ್ಸ್ ಆಸ್ಪತ್ರೆಯ ವೈದ್ಯರು "ಗಾಯಾಳು ಆಟೋ ಚಾಲಕನಿಗೆ ಚಿಕಿತ್ಸೆ ನೀಡಲಾಗಿದೆ. ಆತನ ಆರೋಗ್ಯಕ್ಕೆ ಯಾವುದೇ ಪ್ರಾಣಾಪಾಯವಿಲ್ಲ. ರಕ್ತಸ್ರಾವ ಹೆಚ್ಚಾಗಿರುವ ಕಾರಣ ಚೇತರಿಸಿಕೊಳ್ಳಲು ಸ್ವಲ್ಪಕಾಲ ಹಿಡಿಯಲಿದೆ" ಎಂದು ಒನ್ ಇಂಡಿಯಾಕ್ಕೆ ತಿಳಿಸಿದ್ದಾರೆ.
ಆದರೆ ಪೊಲೀಸರು ಮಾತ್ರ ಗಾಯಾಳು ಆಟೋ ಚಾಲಕನ ಮಾಹಿತಿಯನ್ನು ಸಂಗ್ರಹಿಸುವಲ್ಲಿ ಹೆಚ್ಚಿನ ಆಸಕ್ತಿ ತೋರಿಸಿಲ್ಲ. ಅಪಘಾತ ಪ್ರಕರಣ ಕುರಿತು, ವೈದ್ಯರು, ಎಂಎಲ್ ಸಿ (ಮೆಡಿಕೋ ಲೀಗಲ್ ಕೇಸ್) ದಾಖಲಿಸಿದ್ದಾರೆ.
-
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ












Click it and Unblock the Notifications