ನವಜೋತ್ ಸಿಂಗ್ ಸಿಧು ಮೇಲೆ ಚಪ್ಪಲಿ ಎಸೆದ ಮಹಿಳೆಯ ಬಂಧನ
ಅಮೃತಸರ, ಮೇ 9: ಸಚಿವ ನವಜೋತ್ ಸಿಂಗ್ ಸಿಧು ಮೇಲೆ ಚಪ್ಪಲಿ ಎಸೆದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಸಾರ್ವಜನಿಕರ ಕಾರ್ಯಕ್ರಮವೊಂದರಲ್ಲಿ ಸಿಧು ಅವರ ಮೇಲೆ ಮಹಿಳೆಯೊಬ್ಬಳು ಚಪ್ಪಲಿಯನ್ನು ಎಸೆಯಲು ಮುಂದಾಗಿದ್ದಳು. ಪ್ರಧಾನಿ ಮೋದಿ ವಿರುದ್ಧ ನವಜೋತ್ ಸಿಂಗ್ ಮಾತನಾಡಿದ್ದೇ ಮಹಿಳೆಯ ಆಕ್ರೋಶಕ್ಕೆ ಕಾರಣ ಎನ್ನುವ ಮಾಹಿತಿ ಲಭ್ಯವಾಗಿದೆ.

ಏಪ್ರಿಲ್ ತಿಂಗಳಲ್ಲಿ ಬಿಜೆಪಿ ರಾಷ್ಟ್ರೀಯ ವಕ್ತಾರ ಜಿವಿಎಲ್ ನರಸಿಂಹ ರಾವ್ ಮೇಲೂ ಶೂ ಎಸೆಯಲಾಗಿತ್ತು. ಆದಾಗ್ಯೂ, ಅದು ಅವರಿಗೆ ತಾಗಿರಲಿಲ್ಲ.ಭೂಪಾಲ್ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಪರ ಮಾತನಾಡುತ್ತಾ ಹಿಂದೂ ಸಮುದಾಯಕ್ಕೆ ಕಾಂಗ್ರೆಸ್ ಅಪಚಾರ ಮಾಡುತ್ತಿದೆ ಎಂದು ನರಸಿಂಹರಾವ್ ಟೀಕಿಸಿದ್ದರು.












Click it and Unblock the Notifications