ಲಕ್ಷ್ಮೀ ನರಸಿಂಹ ದೇವಾಲಯದ ರಥ ಬೆಂಕಿಗೆ ಅಹುತಿ
ಅಮರಾವತಿ, ಸೆಪ್ಟೆಂಬರ್ 06 : ಆಂಧ್ರ ಪ್ರದೇಶದ ಶ್ರೀ ಲಕ್ಷ್ಮೀ ನರಸಿಂಹ ದೇವಾಲಯದ ರಥ ಬೆಂಕಿಗೆ ಆಹುತಿಯಾಗಿದೆ. ಅಗ್ನಿ ಅಕಸ್ಮಿಕದಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಭಾನುವಾರ ಮುಂಜಾನೆ ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಸಖಿನೇತಿಪಲ್ಲಿ ತಾಲೂಕಿನಲ್ಲಿನ ಅಂತರ್ವೇದಿಯಲ್ಲಿರುವ ದೇವಾಲಯದ ರಥಕ್ಕೆ ಬೆಂಕಿ ತಗುಲಿದೆ. ರಥದ ಕೊಟ್ಟಿಗೆಯಲ್ಲಿದ್ದ ರಥ ಸಂಪೂರ್ಣವಾಗಿ ಸುಟ್ಟು ಹೋಗಿದೆ.
ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಅಗ್ನಿ ಆಕಸ್ಮಿಕದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಅವರು ಹೇಳಿದ್ದಾರೆ. ಬೆಂಕಿ ಹೊತ್ತಿಕೊಳ್ಳಲು ಕಾರಣವೇನು? ಎಂದು ತನಿಖೆ ನಡೆದಿದೆ.

ಅಂತರ್ವೇದಿಯ ಶ್ರೀ ಲಕ್ಷ್ಮೀ ನರಸಿಂಹ ದೇವಾಲಯವನ್ನು ದಕ್ಷಿಣ ಕಾಶಿ ಎಂದು ಕರೆಯಲಾಗುತ್ತದೆ. ಭಾರತದಲ್ಲಿರುವ 104 ಶ್ರೀ ಲಕ್ಷ್ಮೀ ನರಸಿಂಹ ದೇವಾಲಯಗಳಲ್ಲಿ ಇದು ಸಹ ಒಂದಾಗಿದೆ.
ಗ್ರಹ ದೋಷದಿಂದ ಬಳುತ್ತಿರುವವರು ಅದರಲ್ಲು ಕುಜ ದೋಷದಲ್ಲಿ ಇರುವವರು ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರೆ ತೊಂದರೆ ನಿವಾರಣೆಯಾಗಲಿದೆ ಎಂಬ ನಂಬಿಕೆಯೂ ಇದೆ.












Click it and Unblock the Notifications