'ಗುರು'ವನ್ನು ಮೀರಿಸುವುದಕ್ಕೆ ಗೂಗಲ್ ಗೆ ಸಾಧ್ಯವಿಲ್ಲ
ಅಮರಾವತಿ, ನವೆಂಬರ್ 28: 'ಗೂಗಲ್ ಯಾವತ್ತಿಗೂ ಗುರು ಆಗುವುದಕ್ಕೆ ಸಾಧ್ಯವಿಲ್ಲ' ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದರು.
ಆಂಧ್ರಪ್ರದೇಶದ ಅಮರಾವತಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅವರು ಶಿಕ್ಷಣ ಮತ್ತು ಶಿಕ್ಷಕರ ಮಹತ್ವವನ್ನು ತಿಳಿಹೇಳಿದರು.
Recommended Video

Venkaiah Naidu says, Farmers loan waiver has become a fashion now | Oneindia Kannada

ಗೂಗಲ್ ಎಂದಿಗೂ ಗುರುವಾಗುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ ಗೂಗಲ್ ಕೇವಲ ಪಠ್ಯಕ್ಕೆ ಅಗತ್ಯವಿರುವುದನ್ನು ಹೇಳಬಹುದು. ಆದರೆ ಗುರು, ಪಠ್ಯದೊಂದಿಗೆ ಮನುಷ್ಯನಿಗೆ ಅಗತ್ಯವಿರುವ ಅಂತರ್ದೃಷ್ಟಿಯನ್ನೂ ಕಲಿಸಬಲ್ಲ ಎಂದರು.
ನವೆಂಬರ್ ನಲ್ಲಿ ಒಡಿಶಾದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ನಾಯ್ಡು, ಅಲ್ಲಿಯೂ ಇದೇ ಮಾತನ್ನು ಹೇಳಿದ್ದರು. ಸಾಮಾಜಿಕ ಬದಲಾವಣೆ ಮತ್ತು ಸುಧಾರಣೆಯಲ್ಲಿ ಗುರು ಎಲ್ಲರಿಗಿಂತ ಮಹತ್ವದ ಸ್ಥಾನ ಹೊಂದಿದ್ದಾನೆ ಎಂದಿದ್ದರು.












Click it and Unblock the Notifications