ನಿಗೂಢ ದೋಣಿ ದುರಂತ: ದಡದ ಬಳಿ ಬಂದಿದ್ದ ಅಂಬಿಗ ನದಿ ಮಧ್ಯೆ ಹೋಗಿದ್ದೇಕೆ?
Recommended Video
ಅಮರಾವತಿ, ಸೆಪ್ಟೆಂಬರ್ 16: ಸುಮಾರು ಮೂವತ್ತಕ್ಕೂ ಹೆಚ್ಚು ಜನರನ್ನು ಜಲಸಮಾಧಿ ಮಾಡಿದ ಆಂಧ್ರಪ್ರದೇಶದ ಗೋದಾವರಿ ನದಿಯಲ್ಲಿ ನಡೆದ ಭೀಕರ ದೋಣಿ ದುರಂತದ ಕುರಿತು ನಿಗೂಢ ಮಾಹಿತಿಯೊಂದು ಲಭ್ಯವಾಗಿದೆ.
ದೋಣಿಯಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಪವಾಡಸದೃಶವಾಗಿ ಬದುಕಿಬಂದ ನಂತರ ಆ ಕರಾಳ ಕ್ಷಣದ ಅನುಭವವನ್ನು ಹಂಚಿಕೊಳ್ಳುವ ಸಂದರ್ಭದಲ್ಲಿ ದೋಣಿ ಚಾಲಕನ ವಿಚಿತ್ರ ವರ್ತನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.
62 ಪ್ರಯಾಣಿಕರನ್ನು ಹೊತ್ತಿದ್ದ "ಶ್ರೀವಸಿಷ್ಠ" ಎಂಬ ದೋಣಿ ಭಾನುವಾರ ಬೆಳಿಗ್ಗೆ 10:30 ರ ಹೊತ್ತಿಗೆ ಮುಳುಗಿತ್ತು. ದೋಣಿಜಯಲ್ಲಿದ್ದ ಸುಮಾರು 39 ಜನ ಸಾವಿಗೀಡಾಗಿರಬಹುದು ಎಂದು ಅಂದಾಜಿಸಲಾಗಿದ್ದು, 12 ಮೃತದೇಹಗಳು ಈಗಾಗಲೇ ಪತ್ತೆಯಾಗಿವೆ.ಆದರೆ ಘಟನೆಗೂ ಮುನ್ನ ದೋಣಿ ಚಾಲಕನ ವಿಚಿತ್ರ ನಡೆ ಇದೀಗ ಚರ್ಚೆಯ ವಿಷಯವಾಗಿದೆ.

ದಡದ ಬಳಿ ಬಂದು ನದಿ ಮಧ್ಯೆ ತೆರಳಿದ ಅಂಬಿಗ!
"90 ಜನರು ಪ್ರಯಾಣಿಸಲು ಅವಕಾಶಬವಿದ್ದ ಎರಡು ಅಂತಸ್ತಿನ ದೋಣಿಯಲ್ಲಿ ಇದ್ದಿದ್ದು 62 ಜನ. ಕಡಿಮೆ ಜನರಿದ್ದರೂ, ದೋಣಿ ಇದ್ದಕ್ಕಿದ್ದಂತೆ ಒಂದು ಕಡೆ ವಾಲುವುದಕ್ಕೆ ಆರಂಬಿಸಿತ್ತು. ಅದೇ ಸಂದರ್ಭದಲ್ಲಿ ಬೇರೊಂದು ದೋಣಿ ಹತ್ತಿರ ಬಂದಿದ್ದರಿಂದ ಕೆಲವರನ್ನು ಆ ದೋಣಿಯಲ್ಲಿರುವವರು ರಕ್ಷಿಸಿದರು. ಹಾಗೆ ರಕ್ಷಿಸಲ್ಪಟ್ಟವರಲ್ಲಿ ನಾನೂ ಒಬ್ಬ. ನಾವು ಮತ್ತೊಮದು ದೋಣಿ ಹತ್ತುವ ಮುನ್ನ ನಾವಿದ್ದ "ಶ್ರೀವಸಿಷ್ಠ" ಎಂಬ ಹಡಗು ದಡದ ಬಳಿ ತೆರಳಿತ್ತು. ಇನ್ನು ಕೆಲವೇ ಕ್ಷಣಗಳಲ್ಲಿ ದಡ ಸೇರಬೇಕು, ಅಷ್ಟರಲ್ಲಿ ಅಂಬಿಗ ದೋಣಿಯನ್ನು ಇದ್ದಕ್ಕಿದ್ದಂತೆ ತಿರುಗಿಸಿ, ನದಿಯ ಮಧ್ಯೆ ಕೊಂಡೊಯ್ದ. ಅದಕ್ಕೆ ಕಾರಣವೇನು ಎಂಬುದು ನಮಗೆ ಅರ್ಥವಾಗಲಿಲ್ಲ. ಆ ನಂತರ ದೋಣಿ ಮುಳುಗಿ, ಈ ದುರಂತ ಸಂಭವಿಸಿದೆ" ಎನ್ನುತ್ತಾರೆ ದಶರಥ ಎಂಬುವವರು.

ಜೀವರಕ್ಷಕ ಜಾಕೇಟ್ ತೊಟ್ಟಿದ್ದ ಬಗ್ಗೆ ಮಾಹಿತಿ ಇಲ್ಲ!
ದೋಣಿಯಲ್ಲಿ ಸುಮಾರು 150 ರಷ್ಟು ಜೀವರಕ್ಷಕ ಜಾಕೇಟ್ ಗಳ ದಾಸ್ತಾನಿತ್ತು. ಆದರೆ ದೋಣಿ ನಡೆಸುವವರಾಗಲೀ, ಇನ್ಯಾವುದೇ ಸಿಬ್ಬಂದಿಯಾಗಲೀ ಜಾಕೆಟ್ ತೊಡುವಂತೆ ಪ್ರಯಾಣಿಕರಿಗೆ ಆದೇಶ ನೀಡಿರಲಿಲ್ಲ. ಹಲವು ಪ್ರಯಾಣಿಕರು ಜಾಕೆಟ್ ತೊಟ್ಟಿರಲಿಲ್ಲ. ಜೀವರಕ್ಷಕ ಜಾಕೆಟ್ ದೋನಿಯಲ್ಲೇ ಇದ್ದರೂ, ಪ್ರಯಾಣಿಕರಿಗೆ ಅದನ್ನು ತೊಡಲು ಹೇಳದೇ ಇದ್ದಿದ್ದು ಮತ್ತು ಪ್ರಯಾಣಿಕರೇ ಅದನ್ನು ಕೇಳಿ ಪಡೆಯದೇ ಇದ್ದಿದ್ದು, ಮತ್ತಷ್ಟು ಪ್ರಾಣಹಾನಿಗೆ ಕಾರಣವಾಯಿತು ಎಂಬ ಮಾಹಿತಿಯೂ ಲಭ್ಯವಾಗಿದೆ.

ಪರವಾನಗಿ ಇಲ್ಲದ ದೋಣಿ!
ಅಪಘಾತಕ್ಕೀಡಾದ ಶ್ರೀವಸಿಷ್ಠ ದೋಣಿ ಬಂದರು ಪ್ರಾಧಿಕಾರದ ಪರವಾನಗಿಯನ್ನೂ ಹೊಂದಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಪ್ರವಾಹ ಜೋರಾಗಿದ್ದರೂ, ವಿರುದ್ಧ ದಿಕ್ಕಿನಿಂದ ಚಾಲಕ ತೆರಳಿದ್ದು, ಅದೇ ಸಂದರ್ಭದಲ್ಲಿ ಬೃಹತ್ ಬಂಡೆಯೊಂದು ತಗುಲಿದ ಪರಿಣಾಮ ಈ ದುರ್ಘಟನೆ ನಡೆದಿದೆ ಎಂದು ಆಂಧ್ರ ಪ್ರದೇಶ ಸರ್ಕಾರ ಹೇಳಿದೆ.

10 ಲಕ್ಷ ರೂ. ಪರಿಹಾರ
ಘಟನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ. ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ, ಮೃತರ ಕುಟುಂಬಕ್ಕೆ ಸರ್ಕಾರದ ಕಡೆಯಿಂದ ತಲಾ ಹತ್ತು ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications