ಅಸ್ಮಿತೆಯ ಪ್ರತೀಕ ಚಂದ್ರಯಾನ-2: ಹೆಮ್ಮೆಯ ಕ್ಷಣಕ್ಕೆ ಗಣ್ಯರ ಅಭಿನಂದನೆ
ಶ್ರೀಹರಿಕೋಟ, ಜುಲೈ 22: ಸರಿಯಾಗಿ ಗಂಟೆ ಮಧ್ಯಾಹ್ನ 2:43... ಸಹಸ್ರಾರು ಭಾರತೀಯರ ಉದ್ಗಾರದೊಂದಿಗೆ, ಜೈಕಾರದೊಂದಿಗೆ, ಅಸ್ಮಿತೆಯ ಹೆಗ್ಗುರುತಾಗಿ ಚಂದ್ರಯಾನ-2 ಉಡಾವಣೆಯಾಗಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ಅವಿರತ ಶ್ರಮದ ಫಲವಾಗಿ ಬಾಹುಬಲಿ ಯಶಸ್ವಿಯಾಗಿ ಅಂಬರಕ್ಕೆ ಹಾರಿದ್ದಾನೆ.
ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸೋಮವಾರ ಉಡಾವಣೆಯಾದ ಚಂದ್ರಯಾನ 2 ಇದುವರೆಗೂ ಯಾವ ದೇಶವೂ ಹೋಗಿರದ ಚಂದ್ರನ ಮೇಲ್ಮೈ ಗೆ ತೆರಳಿ ಅಧ್ಯಯನ ನಡೆಸಲಿದೆ. ಜುಲೈ 15 ರಂದೇ ಉಡಾವಣೆಯಾಗಬೇಕಿದ್ದ ಚಂದ್ರಯಾನ ಕೊನೆಯ ಕ್ಷಣದಲ್ಲಿ ಉಂಟಾದ ತಾಂತ್ರಿಕ ಸಮಸ್ಯೆಯಿಂದ ಉಡಾವಣೆಯಾಗಿರಲಿಲ್ಲ.
ಆದರೆ ಇಂದು ಯಶಸ್ವಿಯಾಗಿ ಬಾಹುಬಲಿಯ ಉಡಾವಣೆಯಾಘಿದ್ದು, ಈ ಐತಿಹಾಸಿಕ ಕ್ಷಣವನ್ನು ಪ್ರ್ತಯಕ್ಷವಾಗಿ ಮತ್ತು ಟಿವಿ, ಫೋನ್, ವೆಬ್ ಸೈಟ್ ಮೂಲಕ ಕಣ್ತುಂಬಿಸಿಕೊಂಡ ಕೋಟ್ಯಂತರ ಜನ ಹೆಮ್ಮೆಯ ಇಸ್ರೋ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರೂ ತಮ್ಮ ಕಚೇರಿಯಿಂದಲೇ ಈ ಕ್ಷಣದ ಲೈವ್ ಪ್ರಸಾರವನ್ನು ನೋಡಿ, ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ. ಜೊತೆಗೆ ನೂರಾರು ನಾಯಕರು ಇಸ್ರೋದ ಈ ಪರಿಶ್ರಮವನ್ನು ಕೊಂಡಾಡಿ, ಶುಭ ಹಾರೈಸಿದ್ದಾರೆ.

ರಾಮನಾಥ್ ಕೋವಿಂದ್
"ಎಲ್ಲ ಭಾರತೀಯರಿಗೂ ಶ್ರೀಹರಿಕೋಟದಲ್ಲಿ ಉಡ್ಡಯನವಾದ ಚಂದ್ರಯಾನ-2 ಒಂದು ಹೆಮ್ಮೆಯ ಕ್ಷಣ. ಭಾರತದ ದೇಶೀಯ ಬಾಹ್ಯಾಕಾಶ ಕಾರ್ಯಕ್ರಮಕ್ಕಾಗಿ ವಿಜ್ಞಾನಿಗಳಿಗೆ, ಇಂಜಿನಿಯರ್ ಗಳಿಗೆ ಅಭಿನಂದನೆಗಳು. ಇಸ್ರೋ ಮುಂದೆಯೂ ಇಂಥದೇ ಮೈಲಿಗಲ್ಲುಗಳನ್ನು ಸ್ಥಾಪಿಸಲಿ"- ರಾಮನಾಥ್ ಕೋವಿಂದ್, ರಾಷ್ಟ್ರಪತಿ

ನರೇಂದ್ರ ಮೋದಿ
ನಮ್ಮ ವೈಭವಯುತ ಇತಿಹಾಸಕ್ಕೆ ಮತ್ತೊಂದು ಹೊಸ ಕ್ಷಣ ಸೇರ್ಪಡೆಯಾಗಿದೆ. ಚಂಮದ್ರಯಾನ 2, ನಮ್ಮ ವಿಜ್ಞಾನಿಗಳ ಪರಾಕ್ರಮ, ಪರಿಶ್ರಮ ಮತ್ತು ನೂರಾಮೂವತ್ತು ಕೋಟಿ ಭಾರತೀಯರ ಇಚ್ಛಾಶಕ್ತಿಯ ಸಂಕೇತವಾಗಿದೆ. ಇಂದು ಪ್ರತಿ ಭಾರತೀಯನೂ ಹೆಮ್ಮೆ ಪಟ್ಟಿದ್ದಾನೆ" -ನರೇಂದ್ರ ಮೋದಿ, ಪ್ರಧಾನಿ

ಸುಷ್ಮಾ ಸ್ವರಾಜ್
"ಚಂದ್ರಯಾನ 2 ರ ಯಶಸ್ವೀ ಉಡ್ಡಯನದ ನಂತರ ಭಾರತವನ್ನು ಬಾಹ್ಯಾಕಾಶದ ಸೂಪರ್ ಪವರ್ ಅನ್ನಾಗಿ ಮಾಡಿದ ಇಸ್ರೋದ ವಿಜ್ಞಾನಿಗಳಿಗೆ ನನ್ನ ಅಭಿನಂದನೆಗಳು. ಈ ಮಿಶನ್ ಭಾರೀ ಯಶಸ್ಸು ಗಳಿಸಲಿ ಎಂಬುದು ನನ್ನ ಹಾರೈಕೆ" - ಸುಷ್ಮಾ ಸ್ವರಾಜ್, ಮಾಜಿ ವಿದೇಶಾಂಗ ಸಚಿವೆ

ರಂಣದೀಪ್ ಸುರ್ಜೇವಾಲಾ
"ಚಂದ್ರಯಾನದ ಯಶಸ್ವೀ ಉಡ್ಡಯನದ ಮೂಲಕ ಭಾರತ ಕೀರ್ತಿ ಹೆಚ್ಚಿದೆ. ಭಾರತವನ್ನು ಮಹಾನ್ ದೇಶವನ್ನಾಗಿ ಮಾಡುವ ಇಂಥ ಕೆಲವು ಉಲ್ಲೇಖನೀಯ ಕ್ಷಣಗಳು ನಡೆಯುತ್ತವೆ. 130 ಭಾರತೀಯರು ಹೆಮ್ಮೆ ಪಡುವಂತೆ ಮಾಡಿ, ಅದಕ್ಕಾಗಿ ಹಗಲಿರುಳೂ ಶ್ರಮಿಸಿದ ಇಸ್ರೋದ ಎಲ್ಲ ಬಾಹ್ಯಾಕಾಶ ಇಂಜಿನಿಯರ್ ಗಳಿಗೆ ನನ್ನ ಅಭಿನಂದನೆಗಳು"- ರಣದೀಪ್ ಸುರ್ಜೇವಾಲಾ, ಕಾಂಗ್ರೆಸ್ ವಕ್ತಾರ

ರಾಜನಾಥ್ ಸಿಂಗ್
"ಯಾವುದೇ ದೋಷವಿಲ್ಲದೆ ಚಂದ್ರಯಾನ 2 ಅನ್ನು ಯಶಸ್ವಿಯಾಗಿ ಉಡ್ಡಯನ ಮಾಡಿದ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆಗಳು. ಭಾರತದ ದೇಶೀಯ ಮತ್ತು ಮಹತ್ವಾಕಾಂಕ್ಷಿ ಮೂನ್ ಮಿಶನ್ ಅನ್ನು ಉಡ್ಡಯನ ಮಾಡುವ ಮೂಲಕ ಭಾರತದ ಬಾಹ್ಯಾಕಾಶ ಇತಿಹಾಸದಲ್ಲಿ ಇಸ್ರೋ ಹೊಸ ಅಧ್ಯಾಯ ಬರೆದಿದೆ. ಭಾರತವಿ ತನ್ನ ವಿಜ್ಞಾನಿಗಳ ಬಗ್ಗೆ ಮತ್ತು ಇಸ್ರೋ ಬಗ್ಗೆ ಹೆಮ್ಮೆ ಹೊಂದಿದೆ"- ರಾಜನಾಥ್ ಸಿಂಗ್, ರಕ್ಷಣಾ ಸಚಿವ
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications