Get Updates
Get notified of breaking news, exclusive insights, and must-see stories!

6-12 ತರಗತಿಗಳಿಗೆ ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆ ಸೇರಿಸಿದ ಗುಜರಾತ್ ಸರ್ಕಾರ

2022-23ರ ಶೈಕ್ಷಣಿಕ ವರ್ಷದಿಂದ ಸಕಲ ಹಿಂದುಗಳ ಧರ್ಮಗ್ರಂಥ ಎಂದೇ ಹೇಳಲಾಗುವ ಭಗವದ್ಗೀತೆಯನ್ನು ರಾಜ್ಯದಾದ್ಯಂತ ಶಾಲೆಗಳಲ್ಲಿ ಪಠ್ಯಕ್ರಮವಾಗಿ ಸೇರಿಸಲಾಗುವುದು ಎಂದು ಶಿಕ್ಷಣ ಸಚಿವ ಜಿತು ವಾಘನಿ ಗುರುವಾರ ವಿಧಾನಸಭೆಯಲ್ಲಿ ಘೋಷಣೆ ಮಾಡಿದ್ದಾರೆ. ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಅನುಕೂಲವಾಗುವ ರೀತಿಯಲ್ಲಿ ಭಾರತೀಯ ಸಂಸ್ಕೃತಿ ಮತ್ತು ಜ್ಞಾನಶಾಸ್ತ್ರವನ್ನು ಶಾಲಾ ಪಠ್ಯಕ್ರಮದಲ್ಲಿ ಸೇರಿಸಬೇಕು ಎಂದು ಸುತ್ತೋಲೆಯಲ್ಲಿ ಸೇರಿಸಲಾಗುತ್ತದೆ.

ಭಗವದ್ಗೀತೆಯನ್ನು ಶಾಲೆಗಳಲ್ಲಿ ಪಠ್ಯಕ್ರಮವಾಗಿ ಸೇರಿಸಲಾಗುವುದನ್ನು ಪ್ರಾಂಶುಪಾಲರು ಮತ್ತು ಎಲ್ಲಾ ಧರ್ಮದ ಜನರು ಒಪ್ಪಿಕೊಂಡಿದ್ದಾರೆ. 6 ನೇ ತರಗತಿಯಲ್ಲಿ, ವಿದ್ಯಾರ್ಥಿಗಳು ಅದರಲ್ಲಿ ಆಸಕ್ತಿಯನ್ನು ಬೆಳೆಸುವ ರೀತಿಯಲ್ಲಿ ಶ್ರೀಮದ್ ಭಗವದ್ಗೀತೆಯನ್ನು ಪರಿಚಯಿಸಲಾಗುವುದು ಎಂದು ಗುಜರಾತ್‌ನ ಶಿಕ್ಷಣ ಸಚಿವ ಜಿತು ವಘಾನಿ ಹೇಳಿದ್ದಾರೆ. ವಿದ್ಯಾರ್ಥಿಗಳಿಗೆ ಶ್ರೀಮದ್ ಭಗವದ್ಗೀತೆಯ ಮಹತ್ವವನ್ನು ತಿಳಿಸಲಾಗುವುದು. ಸರ್ಕಾರ ಶಾಲೆಗಳಲ್ಲಿ ಭಗವದ್ಗೀತೆ ಕಥೆಗಳ ಶ್ಲೋಕಗಳು, ಶ್ಲೋಕ ಗೀತೆಗಳು, ಪ್ರಬಂಧಗಳು, ಚರ್ಚೆಗಳು, ನಾಟಕಗಳು, ರಸಪ್ರಶ್ನೆಗಳು ಇತ್ಯಾದಿ ರೂಪದಲ್ಲಿ ಪರಿಚಯಿಸಲಾಗುವುದು.

ಶ್ರೀಮದ್ ಭಗವದ್ಗೀತೆಯನ್ನು 6-12 ನೇ ತರಗತಿಯಿಂದ ಕಥೆಗಳು ಮತ್ತು ಪಠ್ಯಪುಸ್ತಕಗಳಲ್ಲಿ ಪಠಣ ರೂಪದಲ್ಲಿ ಪರಿಚಯಿಸಲಾಗುವುದು ಎಂದು ರಾಜ್ಯ ಸರ್ಕಾರ ಹೊರಡಿಸಿದ ಸುತ್ತೋಲೆಯಲ್ಲಿ ವಿವರಿಸಲಾಗಿದೆ. 9-12 ನೇ ತರಗತಿಗಳಿಗೆ, ವಿದ್ಯಾರ್ಥಿಗಳಿಗೆ ಶ್ರೀಮದ್ ಭಗವದ್ಗೀತೆಯ ಆಳವಾದ ಪರಿಚಯವನ್ನು ನೀಡಲಾಗುತ್ತದೆ. ಶ್ರೀಮದ್ ಭಗವದ್ಗೀತೆಯಲ್ಲಿ ಶ್ಲೋಕಗಳ ಪಠಣ, ಪ್ರಬಂಧ, ವರ್ಣಚಿತ್ರಗಳು, ಪ್ರಬಂಧ, ರಸಪ್ರಶ್ನೆ ಸ್ಪರ್ಧೆ, ಇತ್ಯಾದಿಗಳಿರಬೇಕು. ಪಠ್ಯಕ್ರಮವನ್ನು ಆಡಿಯೊ ದೃಶ್ಯಗಳೊಂದಿಗೆ ಮುದ್ರಿಸಬೇಕು ಎಂದು ಸುತ್ತೋಲೆ ಸೇರಿಸುತ್ತದೆ.

Gujarat Govt Includes Bhagavad Gita in School Syllabus for Classes 6-12

ಕಾಂಗ್ರೆಸ್, ಎಎಪಿ ಪ್ರತಿಕ್ರಿಯೆ

ಶ್ರೀಮದ್ ಭಗವದ್ಗೀತೆಯನ್ನು ಶಾಲಾ ಪಠ್ಯಕ್ರಮದಲ್ಲಿ ಸೇರಿಸುವ ನಿರ್ಧಾರವನ್ನು ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ (ಎಎಪಿ) ಸ್ವಾಗತಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಗುಜರಾತ್ ಕಾಂಗ್ರೆಸ್ ವಕ್ತಾರ ಹೇಮಂಗ್ ರಾವಲ್, "ಶ್ರೀಮದ್ ಭಗವದ್ಗೀತೆಯನ್ನು ಪಠ್ಯಕ್ರಮದಲ್ಲಿ ಸೇರಿಸುವ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಜೊತೆಗೆ ಗುಜರಾತ್ ಸರ್ಕಾರವು ಶ್ರೀಮದ್ ಭಗವದ್ಗೀತೆಯಿಂದಲೇ ಕಲಿಯಬೇಕಾಗಿರುವುದು ಸಾಕಷ್ಟಿದೆ" ಎಂದಿದ್ದಾರೆ.

Gujarat Govt Includes Bhagavad Gita in School Syllabus for Classes 6-12

"ಯಾವುದೇ ಪರಿಸ್ಥಿತಿಯನ್ನು ಎದುರಿಸಲು, ನೀವು ಮೊದಲು ಆ ಪರಿಸ್ಥಿತಿಯನ್ನು ಒಪ್ಪಿಕೊಳ್ಳಬೇಕು ಎಂದು ಭಗವದ್ ಸ್ಪಷ್ಟವಾಗಿ ಹೇಳುತ್ತದೆ. ಗುಜರಾತ್‌ನಲ್ಲಿ ಪ್ರಸ್ತುತ ಶಿಕ್ಷಣದ ಪರಿಸ್ಥಿತಿ ಏನು? ಅನ್ನೋದನ್ನು ಸರ್ಕಾರ ಅರ್ಥೈಸಿಕೊಳ್ಳಬೇಕು. ಒಟ್ಟು 33,000 ಶಾಲೆಗಳಲ್ಲಿ 14 ಶಾಲೆಗಳು ಮಾತ್ರ ಎ-ಪ್ಲಸ್ ದರ್ಜೆಯ ಶಾಲೆಗಳಾಗಿವೆ. ಸುಮಾರು 18,000 ಶಿಕ್ಷಕರ ಹುದ್ದೆಗಳು ಖಾಲಿ ಇದ್ದು 6,000 ಶಾಲೆಗಳು ಮುಚ್ಚಲ್ಪಟ್ಟಿವೆ ಎಂದು ಅವರು ಹೇಳಿದರು.

"ಗುಜರಾತ್‌ನಲ್ಲಿ ಅತಿ ಹೆಚ್ಚು ಶಾಲೆ ಬಿಟ್ಟ ಮಕ್ಕಳಿದ್ದಾರೆ ಮತ್ತು ಅನೇಕ ವಿದ್ಯಾರ್ಥಿಗಳಿಗೆ 8ನೇ ತರಗತಿಯವರೆಗೆ ಓದುವುದು ಮತ್ತು ಬರೆಯುವುದು ಗೊತ್ತಿಲ್ಲ. ಅವರಿಗಾಗಿ ಸರ್ಕಾರ ಏನಾದರೂ ಮಾಡಲಿ ಎಂದು ಆಶಿಸುತ್ತೇವೆ. ಶ್ರೀಮದ್ ಭಗವದ್ಗೀತೆಯನ್ನು ಸೇರಿಸುವುದನ್ನು ನಾವು ಸ್ವಾಗತಿಸುತ್ತೇವೆ. ಪಠ್ಯಕ್ರಮ ಆದರೆ ಬಾಲ್ಯದಿಂದಲೇ ಮಕ್ಕಳಿಗೆ ಕಲಿಯಲು ಸಹಾಯವಾಗುತ್ತದೆ ಎಂದರು.

ರಾಜ್ಯ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿರುವ ಗುಜರಾತ್ ಆಪ್ ವಕ್ತಾರ ಯೋಗೇಶ್ ಜಾದ್ವಾನಿ, ಗುಜರಾತ್ ಸರ್ಕಾರ ಕೈಗೊಂಡಿರುವ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ.ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+