ಈರುಳ್ಳಿ ಬೆಲೆ ಎಷ್ಟಾದರೂ ಆ ಗ್ರಾಮಸ್ಥರಿಗೆ ಕಣ್ಣೀರು ಬರಲ್ಲ!
ಪಾಟ್ನಾ, ಆ.27 : ದೇಶದ ತುಂಬಾ ಈರುಳ್ಳಿ ಕೊಳ್ಳುವ ಜನರು ಬೆಲೆ ಏರಿಕೆಯಿಂದಾಗಿ ಕಂಗಾಲಾಗಿದ್ದಾರೆ. ಆದರೆ, ಬಿಹಾರದ ಗ್ರಾಮವೊಂದು ಈರುಳ್ಳಿ ದರದ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಕಾರಣವಿಷ್ಟೆ ಈ ಗ್ರಾಮದಲ್ಲಿ ಈರುಳ್ಳಿ ಬಳಕೆಯನ್ನು ನಿಷೇಧಿಸಲಾಗಿದೆ.
ಬಿಹಾರದ ಬಂಕ್ರಾ ಜಿಲ್ಲೆಯ ಭೀಮಸೇನ ಎಂಬ ಹಳ್ಳಿಯ ಜನರಿಗೆ ಈರುಳ್ಳಿ ಬೆಲೆ ಎಷ್ಟು ಹೆಚ್ಚಾದರೂ ಯಾವುದೇ ಚಿಂತೆಯಿಲ್ಲ. ಕಾರಣ ಗ್ರಾಮದಲ್ಲಿ ಸುಮಾರು 200 ವರ್ಷಗಳಿಂದ ಅಡುಗೆಗೆ ಈರುಳ್ಳಿಯನ್ನು ಬಳಸುವುದಿಲ್ಲ.

ಭೀಮಸೇನ 200 ಮನೆಗಳಿರುವ ಚಿಕ್ಕ ಗ್ರಾಮ. ಈ ಗ್ರಾಮದ ಎಲ್ಲಾ ಮನೆಗಳಲ್ಲೂ ಈರುಳ್ಳಿ ಬಳಕೆ ನಿಷೇಧ ಆದ್ದರಿಂದ ಬೆಲೆ ಎಷ್ಟು ಹೆಚ್ಚಾದರೂ ಜನರು, ತಮ್ಮ ಪಾಡಿಗೆ ತಾವು ಹಾಯಾಗಿರುತ್ತಾರೆ. ಈರುಳ್ಳಿಯನ್ನು ಬಳಸಬಾರದು ಎಂಬುದು ಗ್ರಾಮದ ಒಂದು ಸಂಪ್ರದಾಯ.
ಭೀಮಸೇನ ಗ್ರಾಮದ ಮಹೇಂದರ್ ಸಿಂಗ್ ಹೇಳುವಂತೆ, ಬಹಳ ಹಿಂದೆ ಗ್ರಾಮ ಪ್ಲೇಗ್ ತರಹದ ಮಾರಣಾಂತಿಕ ರೋಗವೊಂದಕ್ಕೆ ತುತ್ತಾಗಿತ್ತು. ಇದರಿಂದ ಗ್ರಾಮದ ನೂರಾರು ಜನರು ಸಾವಿಗೀಡಾಗಿದ್ದರು.
ಈ ರೋಗ ಬರಲು ಗ್ರಾಮದ ದೇವತೆಯ ಶಾಪವೇ ಕಾರಣ. ಗ್ರಾಮಸ್ಥರು ರೋಗದಿಂದ ಗುಣಮುಕ್ತರಾದರೆ, ಗ್ರಾಮದಲ್ಲಿ ಈರುಳ್ಳಿ ಬಳಕೆಯನ್ನು ನಿಷೇಧಿಸುತ್ತೇವೆ ಎಂದು ಜನರು ಹರಕೆ ಹೊತ್ತರು. ರೋಗ ವಾಸಿಯಾದ ನಂತರ ಗ್ರಾಮದಲ್ಲಿ ಈರುಳ್ಳಿ ಬಳಸುತ್ತಿಲ್ಲ ಎಂದು ಹೇಳುತ್ತಾರೆ.
ಈರುಳ್ಳಿ ಬಳಕೆ ಮಾತ್ರವಲ್ಲ, ಗ್ರಾಮದ ಹೊಲಗಳಲ್ಲಿ ಈರುಳ್ಳಿಯನ್ನು ಬೆಳೆಯುವುದಿಲ್ಲ. ಗ್ರಾಮದಲ್ಲಿ ಯಾವುದೇ ಸಭೆ-ಸಮಾರಂಭ ನಡೆದು, ವಿವಿಧ ಭಕ್ಷ ಭೋಜನಗಳು ತಯರಾದರೂ ಈರುಳ್ಳಿಯ ಘಮ ನಿಮಗೆ ದೊರೆಯುವುದಿಲ್ಲ.
ಅಂದಹಾಗೆ ಕರ್ನಾಟಕದಲ್ಲಿ ಈರುಳ್ಳಿ ಬೆಲೆ ಹತೋಟಿಗೆ ಬಂದಿದೆ. ರಾಜ್ಯದ ವಿವಿಧ ಭಾಗಗಳಿಂದ ಮಾರುಕಟ್ಟೆಗಳಿಗೆ ಈರುಳ್ಳು ಹೆಚ್ಚಾಗಿ ಸರಬರಾಜು ಆಗುತ್ತಿದೆ. ಬೆಂಗಳೂರಿನಲ್ಲಿ ಮಂಗಳವಾರ ಈರುಳ್ಳಿ ಬೆಲೆ 40 ರಿಂದ 45 ರೂ. ಇದೆ.(ಪಿಟಿಐ ಚಿತ್ರ)
-
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral












Click it and Unblock the Notifications