ಇಲ್ಲಿ ಟಿವಿಗಿಂತ ಆಕಾಶವಾಣಿಯೇ ಜನಪ್ರಿಯ
ಹುಬ್ಬಳ್ಳಿ, ಆ.26: ಟಿವಿ ಬಂದ ಮೇಲೆ ರೇಡಿಯೋ ಕೇಳುವವರೇ ಇಲ್ಲ. ಖಾಸಗಿ ವಾಹಿನಿಗಳ ಅಬ್ಬರ, ಸುದ್ದಿ ವಾಹಿನಿಗಳ ಬ್ರೇಕಿಂಗ್ ನ್ಯೂಸ್ ನಡುವೆ ಆಕಾಶವಾಣಿ ಎಂಬ ಮೆಲುದನಿಯ ಸಂಗಾತಿಯನ್ನು ಜನರು ಕಳೆದುಕೊಂಡಿದ್ದಾರೆ. ಆಕಾಶವಾಣಿ ಜನಪ್ರಿಯತೆ ಉಳಿಸಿಕೊಳ್ಳಲು ಹೆಣಗಾಡುತ್ತಿದೆ ಎಂಬ ಮಾತು ನಿಜವಾದರೂ ಇತ್ತೀಚಿನ ಸಮೀಕ್ಷೆಯೊಂದು ಧಾರವಾಡ ಕೇಂದ್ರ ಟಿವಿಗಿಂತ ಜನಪ್ರಿಯವಾಗಿದೆ ಎಂಬ ಅಚ್ಚರಿಯ ಸತ್ಯ ಹೊರ ಹಾಕಿದೆ.
ಆಕಾಶವಾಣಿಯ ಶ್ರೋತೃ ಸಂಶೋಧನಾ ವಿಭಾಗದ ಸಮೀಕ್ಷೆ ನೀಡಿರುವ ವರದಿ ನಂಬುವುದೇ ಕಷ್ಟ ಎನಿಸಬಹುದು. ಆದರೆ, ಧಾರವಾಡ ಆಕಾಶವಾಣಿ ಸ್ಪಷ್ಟವಾಗಿ ಕೇಳಿಸುವ ಹಳ್ಳಿ, ಗ್ರಾಮ, ಪಟ್ಟಣ, ಹೋಬಳಿ, ನಗರಗಳಲ್ಲಿ ಸಮೀಕ್ಷೆ ನಡೆಸಿ ಮಾಹಿತಿ ಕಲೆ ಹಾಕಲಾಗಿದೆ.
ಧಾರವಾಡ ಆಕಾಶವಾಣಿ ವ್ಯಾಪ್ತಿಯ ನೂರು ಹಳ್ಳಿ, ನೂರು ಪಟ್ಟಣಗಳಲ್ಲಿ ನಡೆಸಿದ ಸ್ಯಾಂಪಲ್ ಸರ್ವೆ ಈ ಮಾಹಿತಿ ಹೊರಗೆಡವಿದೆ.40 ಸಾವಿರ ಚದರ ಕಿ.ಮೀ ವ್ಯಾಪ್ತಿಯ ಪ್ರಸಾರ ವಲಯವನ್ನು ಹೊಂದಿರುವ ಆಕಾಶವಾಣಿ ಧಾರವಾಡ 3.42 ಕೋಟಿ ಕೇಳುಗರನ್ನು ತಲುಪುವ ಸಾಮರ್ಥ್ಯ ಹೊಂದಿದೆ. ಸುಮಾರು 16 ಲಕ್ಷ ರೆಡಿಯೊ ಮನೆಗಳಿದ್ದು 80 ಲಕ್ಷ ಜನ ಪ್ರತಿನಿತ್ಯ ಒಂದಲ್ಲ ಒಂದು ರೆಡಿಯೊ ಕಾರ್ಯಕ್ರಮ ಕೇಳುತ್ತಿದ್ದಾರೆ.

ಎಲ್ಲರ ಪ್ರೀತಿಯ ಚಿತ್ರಗೀತೆಗಳ ಜತೆಗೆ ಪ್ರದೇಶ ಸಮಾಚಾರ, ವಾರ್ತೆ, ಆರೋಗ್ಯ ಸಂಬಂಧಿ ಕಾರ್ಯಕ್ರಮ, ವಿಶೇಷ ಬಾನುಲಿ ಸರಣಿಗಳು, ಕರಂಗ ಹೀಗೆ ಹತ್ತಾರು ಕಾರ್ಯಕ್ರಮಗಳಿಂದ ಆಕಾಶವಾಣಿ ಧಾರವಾಡ ಕೇಳುಗರ ನಿತ್ಯ ಸಂಗಾತಿಯಾಗಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.
ಧಾರವಾಡದ ಶೇ 80.5 ರಷ್ಟು ಜನಸಂಖ್ಯೆ ಆಕಾಶವಾಣಿಗೆ ಅಂಟಿಕೊಂಡಿದೆ. ಗ್ರಾಮೀಣ ಪ್ರದೇಶದಲ್ಲಿ ಶೇ 79.3 ರಷ್ಟು ಹಾಗೂ ನಗರ ವಿಭಾಗದಲ್ಲಿ ಶೇ 81.3 ರಷ್ಟು ಕೇಳುಗರನ್ನು ಹೊಂದಿದೆಯಂತೆ. ಆದರೆ, ಶೇ 19.5 ರಷ್ಟು ಮಂದಿ ರೇಡಿಯೋ ಕೇಳುವುದೇ ಇಲ್ಲವಂತೆ.
ಟಿವಿಗೆ ಹೋಲಿಸಿದರೆ ಬೆಳಗ್ಗೆ 6.30 ರಿಂದ 9 ಗಂಟೆ ತನಕ ಆಕಾಶವಾಣಿ ಅತಿ ಹೆಚ್ಚು ಕೇಳುಗರನ್ನು ಹೊಂದಿರುತ್ತದೆ. ಬೆಂಗಳೂರಿಗೆ ಹೋಲಿಸಿದರೆ ಎಲ್ಲರ ಕೈಲೂ ಮೊಬೈಲ್ ಗಳಿದ್ದು ಅದರಲ್ಲಿ ಎಫ್ ಎಂ ವಾಹಿನಿಗಳದ್ದೇ ಸದ್ದು ಕೇಳಿಬರುತ್ತದೆ. ಧಾರಾವಾಡದಲ್ಲಿ ಇಂದಿಗೂ ಹಳೆ ಕಾಲದ ರೇಡಿಯೋ ಸೆಟ್ ಗಳು ಗುಜುರಿ ಸೇರದಂತೆ ನೋಡಿಕೊಳ್ಳಲಾಗಿದೆ.
ವಾರದ ದಿನಗಳಲ್ಲಿ ಟಿವಿಗಿಂತ ರೇಡಿಯೋ ಅತಿ ಹೆಚ್ಚು ಜನರನ್ನು ಆಕರ್ಷಿಸುತ್ತಿದೆ. ಅದರಲ್ಲೂ ಪುರುಷರಿಗಿಂತ ಗೃಹಿಣಿಯರು ಟಿವಿಯಲ್ಲಿ ಸೀರಿಯಲ್ ನೋಡುವುದಕ್ಕಿಂತ ರೇಡಿಯೋದಲ್ಲಿ ಹಾಡು ಹಸೆ, ಆರೋಗ್ಯ ಸಲಹೆ ಕಾರ್ಯಕ್ರಮ ಕೇಳುವುದರಲ್ಲೇ ಹೆಚ್ಚು ಕಾಲ ತೊಡಗಿಸಿಕೊಂಡಿದ್ದಾರಂತೆ.
ಒಟ್ಟಾರೆ ಧಾರಾವಾಡ ಅಕಾಶವಾಣಿ(AIR) ಕೇಂದ್ರದ ಪ್ರಸಾರ ಧಾರವಾಡ, ಬೆಳಗಾವಿ, ಬಿಜಾಪುರ, ಕೊಪ್ಪಳ, ಗದಗ, ಹಾವೇರಿ, ಉತ್ತರ ಕನ್ನಡ ಹಾಗೂ ಬಾಗಲಕೋಟೆ ಜಿಲ್ಲೆಗಳಿಗೆ ತಲುಪುತ್ತಿದೆ.
ಹೆಚ್ಚಿನ ಪ್ರಸರಣ ಸಾಮರ್ಥ್ಯದೊಂದಿಗೆ ರಾಯಚೂರು, ಬಳ್ಳಾರಿ, ದಾವಣಗೆರೆ, ಗುಲ್ಬರ್ಗಾ, ಶಿವಮೊಗ್ಗ ಹಾಗೂ ಚಿತ್ರದುರ್ಗ ಜಿಲ್ಲೆಗಳಿಗೂ ತಲುಪಿದೆ. ನೆರೆ ರಾಜ್ಯ ಮಹಾರಾಷ್ಟ್ರ ಹಾಗೂ ಗೋವಾದಲ್ಲೂ ಧಾರವಾಡದ ದನಿ ಕೇಳಿ ಬಂದಿದೆ.
ವಿವಿಧ ಭಾರತಿ ಪ್ರತಿನಿತ್ಯ 56 ಲಕ್ಷ ಕೇಳುಗರನ್ನು ತಲುಪುವ ಸಾಮರ್ಥ್ಯ ಹೊಂದಿದ್ದು, ಆಧುನಿಕ ತಂತ್ರಜ್ಞಾನದ ಬೆಂಬಲದಿಂದ ಮನರಂಜನೆ ಮಾಹಿತಿಗಳನ್ನು ಕೇಳುಗರಿಗೆ ತಲುಪಿಸುತ್ತಾ ಜನಪ್ರಿಯ ಕಾಯ್ದುಕೊಂಡಿದೆ.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications