ಗುಜರಾತಿಗೆ ಮೋಡಿ ಮಾಡಿರುವ ಜ್ಯೂ. ಮೋದಿ
ಅಹಮದಾಬಾದ್, ಆ.23: ಆತನಿಗಿನ್ನೂ ನಾಲ್ಕು ವರ್ಷ ವಯಸ್ಸು. ಹೆಸರು ಆರವ್ ಪಂಕಜ್ ನಾಯಕ್ ಗೆ ದೇಶದ ನಂ.1 ಮುಖ್ಯಮಂತ್ರಿ ನರೇಂದ್ರ ಮೋದಿಯಂತೆ ಆಗುವ ಕನಸು.ಅಹಮದಾಬಾದಿನ ಮಣಿನಗರ ಈ ಪೋರನ ಭಾಷಣದ ಮೋಡಿಗೆ ಇಡೀ ಗುಜರಾತ್ ಸಿಲುಕಿದೆ. ಗುಜರಾತಿಗಳು ತುಂಬು ಹೃದಯದಿಂದ ಈ ಉದಯೋನ್ಮುಖ ಭಾಷಣಗಾರನನ್ನು ಹರಿಸಿದ್ದಾರೆ.
ಆರವ್ ಭಾಷಣ ಕೇವಲ ಗುಜರಾತಿಗೆ ಸೀಮಿತವಾಗಿಲ್ಲ ಬದಲಿಗೆ ಇಡೀ ಭಾರತ ಹಾಗೂ ವಿಶ್ವದ ಸೌಹಾರ್ದತೆ, ಶಾಂತಿ, ಅಭಿವೃದ್ಧಿಯನ್ನು ಎತ್ತಿ ಹಿಡಿಯುತ್ತದೆ. ಆಗಸ್ಟ್ 12ಕ್ಕೆ ನಾಲ್ಕನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡ ಬಾಲಕ ಎಷ್ಟೆಲ್ಲ ಮಾತನಾಡಲು ಹೇಗೆ ಸಾಧ್ಯ ಎಂಬ ಕುತೂಹಲ ಎಲ್ಲರಲ್ಲೂ ಇದೆ.

ಗುಜರಾತಿ ಅಲ್ಲದೆ, ಹಿಂದಿ, ಇಂಗ್ಲೀಷಿನಲ್ಲೂ ನಿರರ್ಗಳವಾಗಿ ಭಾಷಣ ಮಾಡುವ ಆರವ್ ಮುಂದೆ ದಾಖಲೆ ಪುಸ್ತಕ ಸೇರುವ ಎಲ್ಲಾ ಸಾಧ್ಯತೆಯೂ ಇದೆ. ಆರವ್ ಗೆ ಭಾಷಣ ಕೇಳಿದ ಜನ ಮತ್ತೆ ಮತ್ತೆ ಕೇಳುವ ಆಸೆ ವ್ಯಕ್ತಪಡಿಸುತ್ತಾರೆ. ಹಲವೆಡೆ ಸಮಾರಂಭದಲ್ಲಿ ಆರವ್ ಭಾಷಣವೇ ಪ್ರಮುಖ ಆಕರ್ಷಣೆ ಎನಿಸಿದೆ. ಐದಾರು ಪ್ರಶಸ್ತಿಗಳನ್ನು ಪಡೆದಿರುವ ಆರವ್ ಗೆ ತಾನು ಮೋದಿಯಂತೆ ಆಗುವ ಬಯಕೆ ಇದೆ ಎನ್ನುತ್ತಾನೆ.
ದೇಶಭಕ್ತಿ ಬಗ್ಗೆ ಮೋದಿ ಅವರು ಮಾಡಿದ ಭಾಷಣದ ಯಥಾವತ್ತು ಪುನಾರವರ್ತನೆ ಮಾಡಿದ ಆರವ್ ಗೆ ಜನಜಾಗೃತಿ ಟ್ರಸ್ಟ್ ನಿಂದ ಪ್ರಮಾಣ ಪತ್ರ ಸಿಕ್ಕಿದೆ. ಭಾಷಣ ಮಾಡುವಾಗ ಮೋದಿ ಅವರಂತೆ ಧ್ವನಿಯಲ್ಲಿ ಏರಿಳಿತ ಮಾಡುತ್ತಾನೆ. ಮೋದಿಯಂತೆ ವೇಷ ಭೂಷಣಗಳನ್ನು ಆರವ್ ತೊಡುತ್ತಾನೆ. ಗುಜರಾತ್ ವಿಭಾಗದ ರಿಲಯನ್ ಕಮ್ಯೂನಿಕೇಷನ್ (WLN) ನ ಮುಖ್ಯಸ್ಥರು ಕಳೆದ ಗಣತಂತ್ರ ದಿನಾಚರಣೆ ದಿನ ಆರವ್ ಗೆ ಸನ್ಮಾನ ಮಾಡಿ ಹರಸಿದ್ದಾರೆ.

ಛೋಟಾ ಮೋದಿ ಮಣಿನಗರದ ನೆಲ್ಸನ್ಸ್ ಹೈಸ್ಕೂಲಿನಲ್ಲಿ ಜ್ಯೂನಿಯರ್ ಎಲ್ ಕೆಜಿಯ ವಿದ್ಯಾರ್ಥಿಯಾಗಿದ್ದಾನೆ. ಆರವ್ ಭಾಷಣ ವಿಡಿಯೋ ತುಣುಕು ನೋಡಿ...
-
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Vijay: ನಟ, ರಾಜಕಾರಣಿ ವಿಜಯ್ ಮಹತ್ವದ ಟ್ವೀಟ್ - ಅಪ್ರಬುದ್ಧ ರಾಜಕಾರಣಿ ಎಂದ ಡಿ.ಕೆ ಶಿವಕುಮಾರ್ Tamil Nadu Assembly Election -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು?












Click it and Unblock the Notifications