ಸರ್ಕಾರಿ ಪೌರೋಹಿತ್ಯದಲ್ಲಿ ಅನಾಥೆಗೆ ಕಂಕಣಭಾಗ್ಯ!
ಬೆಂಗಳೂರು, ಆ.20 : ಬೆಂಗಳೂರಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸ್ವೀಕಾರ ಕೇಂದ್ರದಲ್ಲಿ ಸೋಮವಾರ ಸಂಭ್ರಮ ಮನೆ ಮಾಡಿತ್ತು. ಕೇಂದ್ರದ ಆವರಣದಲ್ಲಿ ಮದುವೆ ಸಂಭ್ರಮದ ಕಳೆ ಕಟ್ಟಿತ್ತು. ಅನಾಥೆ ಕಾಳಮ್ಮ ಮತ್ತು ಸತೀಶ್ ಅವರ ವಿವಾಹಕ್ಕೆ ಇಲಾಖೆ ಆವರಣ ಸಾಕ್ಷಿಯಾಯಿತು.
ಮದುವೆ ಸಂಪ್ರದಾಯದಂತೆಯೇ ನಡೆಯಿತು. ತೋರಣ, ಹೂಗಳಿಂದ ಅಲಂಕಾರಗೊಂಡಿದ್ದ ಕೇಂದ್ರದಲ್ಲಿ ಇಲಾಖೆ ಸಿಬ್ಬಂದಿಗಳು ಮನೆ ಮಗಳ ಮದುವೆಯಂತೆ ಉತ್ಸಾಹದಲ್ಲಿ ಓಡಾಡಿಕೊಂಡಿದ್ದರು. ಚಿಕ್ಕ ವಯಸ್ಸಿನಲ್ಲಿ ಅನಾಥೆಯಾಗಿ ಕೇಂದ್ರಕ್ಕೆ ಸೇರಿದ್ದ ಕಾಳಮ್ಮ ವಿವಾಹವಾಗುವ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟರು.

ಅನಾಥೆಯಾಗಿ ಬಾಲಮಂದಿರ ಸೇರಿ ಬೆಳೆದ ಕಾಳಮ್ಮ ವಿವಾಹ ಮಹೋತ್ಸವಕ್ಕೆ ಸರ್ಕಾರ ಪೌರೋಹಿತ್ಯ ವಹಿಸಿತ್ತು. ಸಚಿವರಾದ ಉಮಾಶ್ರೀ ಮತ್ತು ರಾಮಲಿಂಗಾರೆಡ್ಡಿ ಸಮ್ಮುಖದಲ್ಲಿ ಕಾಳಮ್ಮ, ಚಿಕ್ಕಮಗಳೂರಿನ ಸತೀಶ್ ಜೊತೆ ವಿವಾಹವಾದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮಹಿಳಾ ಸಂಘಟನೆ ಮತ್ತು ದಾನಿಗಳ ನೆರವಿನೊಂದಿಗೆ ಸೋಮವಾರ ಸಂದ್ರಪಾಯಬದ್ಧವಾಗಿ ಕಾಳಮ್ಮ ಮತ್ತು ಸತೀಶ್ ಅವರ ವಿವಾಹವನ್ನು ನಡೆಸಿಕೊಟ್ಟಿತು.
ಚಿಕ್ಕಮಗಳೂರಿನ ಬಿಕಾಂ ಪದವೀಧರ ಸತೀಶ್, ಪೂರ್ಣ ಪ್ರಜ್ಞಾ ಶಾಲೆಯ ಹಾಸ್ಟೆಲ್ನಲ್ಲಿ ಕೆಟರಿಂಗ್ ಕೆಲಸ ಮಾಡುತ್ತಿದ್ದಾರೆ. ಕಾಳಮ್ಮ ಅವರನ್ನು ವಿವಾಹವಾಗುವ ಮೂಲಕ ಅನಾಥೆಗೆ ಬಾಳು ನೀಡಿ ಬ್ರಾಹ್ಮಣ ಜನಾಂಗದ ಇವರು ಆದರ್ಶ ಮೆರೆದಿದ್ದಾರೆ.
ವಿವಾಹದಲ್ಲಿ ಪಾಲ್ಗೊಂಡಿದ್ದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೂತನ ದಂಪತಿಗಳಿಗೆ ಐದು ಸಾವಿರ ರೂ. ಉಡುಗೊರೆ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಸಚಿವೆ ಉಮಾಶ್ರೀ ಕಾಣಿಕೆ ಇಬ್ಬರನ್ನು ಹರಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಲವಾರು ಸಿಬ್ಭಂದಿಗಳು ಪಾಲ್ಗೊಂಡಿದ್ದರು. (ಅನಾಥ ಕಾಳಮ್ಮನ ಲಗ್ನಕ್ಕೆ ಸರಕಾರದ ಪೌರೋಹಿತ್ಯ)
ಕಾಳಮ್ಮ ಯಾರು : ಆರು ವರ್ಷವಿರುವಾದ ಕಾಳಮ್ಮ ಬಾಲಮಂದಿರದಲ್ಲಿ ಆಶ್ರಯ ಪಡೆದಿದ್ದಳು. ಆಕೆಯ ವಿದ್ಯಾಭ್ಯಾಸ ನೀಡಲು ಡಿವಿಎಸ್ ರಸ್ತೆಯಲ್ಲಿರುವ ಅಭಯ ಆಶ್ರಮಕ್ಕೆ ಸೇರಿಸಲಾಗಿತ್ತು. ಆದರೆ, ಕಾಳಮ್ಮಳಿಗೆ ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳಲು ಸಾಧ್ಯವಾಗದೆ 9ನೇ ತರಗತಿವರೆಗೆ ಓದಿದಳು.
ಬಳಿಕ ಸ್ವೀಕರ ಕೇಂದ್ರಕ್ಕೆ ಮರಳಿದರೂ ಓದನ್ನು ಮುಂದುವರೆಸಲಿಲ್ಲ. ತಂದೆ-ತಾಯಿ, ಜಾತಿ ಯಾವುದೂ ಗೊತ್ತಿಲ್ಲದ ಆಕೆಯನ್ನು ವಿವಾಹವಾಗಿ ಸತೀಶ್ ಆಕೆಗೆ ಹೊಸ ಜೀವನ ನೀಡಿದ್ದಾನೆ. ವಿವಾಹದ ನಂತರ ಕಾಳಮ್ಮ ಓದು ಮುಂದುವರೆಸುವ ಉತ್ಸಾಹದಲ್ಲಿದ್ದಾರೆ.
ಕಾಳಮ್ಮಳಿಗೆ ಸ್ವೀಕಾರ ಕೇಂದ್ರದ ಅಧೀಕ್ಷಕಿ ವಾಸಂತಿ ತಾಯಿ ಸ್ಥಾನದಲ್ಲಿ ನಿಂತು ಧಾರೆ ಎರೆದುಕೊಟ್ಟರು. ವರನ ಪೋಷಕರು ಸಹ ತಮ್ಮ ಸೊಸೆಯನ್ನು ಸಂತೋಷದಿಂದ ಮನೆ ತುಂಬಿಸಿಕೊಂಡರು. ತನ್ನ ಪೌರೋಹಿತ್ಯದಲ್ಲಿ ನಡೆದ ಮದುವೆಗೆ ಸರ್ಕಾರದಿಂದ 15 ಸಾವಿರ ರೂ. ನೀಡಲಾಯಿತು.
ಕೇಂದ್ರದಲ್ಲಿನ 11ನೇ ಮದುವೆ : ಅನಾಥ ಹುಡುಗಿಯರನ್ನು ವಿವಾಹವಾಗಲು ಬಯಸುವ ಹುಡುಗರನ್ನು ಇಲಾಖೆ ಅಧಿಕಾರಿಗಳು ಪರೀಕ್ಷೆ ನಡೆಸುತ್ತಾರೆ. ಹುಡುಗ-ಹುಡುಗಿಯ ಒಪ್ಪಿಗೆ ಮೇರೆಗೆ ಮದುವೆ ಮಾಡಿಸಲಾಗುತ್ತದೆ.
-
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications