ರಮ್ಯಾ ಪ್ರನಾಳಶಿಶು ಹೇಳಿಕೆಗೆ ಮಂಗಳ ಹಾಡಿದ ಶ್ರೀನಿವಾಸ್
ಮಂಡ್ಯ, ಆಗಸ್ಟ್ 10: ಜೆಡಿಎಸ್ ಮಾಜಿ ಶಾಸಕ ಎಂ ಶ್ರೀನಿವಾಸ್ ಲೋಕಸಭಾ ಉಪಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಮ್ಯಾ ಅವರ ಬಗ್ಗೆ ನುಡಿದಿದ್ದ ಕೀಳುಮಟ್ಟದ ಅವಹೇಳನಕಾರಿ ಮಾತುಗಳಿಗೆ ಬೇಷರತ್ ಕ್ಷಮೆಯಾಚಿಸಿದ್ದಾರೆ.
ಮಂಡ್ಯದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಶ್ರೀನಿವಾಸ್ ಅವರು 'ಕುಮಾರಿ ರಮ್ಯಾ ಅವರಿಗೆ ನೋವುಂಟು ಮಾಡುವ ಉದ್ದೇಶವಿರಲಿಲ್ಲ. ಮಾಧ್ಯಮಗಳಲ್ಲಿ ಬಂದ ವರದಿಗಳನ್ನೇ ಉಲ್ಲೇಖಿಸಿ, ರಮ್ಯಾ ಅವರ ಪೂರ್ವಾಪರ ಪ್ರಶ್ನಿಸಿದ್ದೆ ಅಷ್ಟೇ' ಎಂದು ಹೇಳಿದ್ದಾರೆ.

'ನನಗೆ ಹೆಣ್ಣು ಮಕ್ಕಳ ಬಗ್ಗೆ ತುಂಬಾ ಗೌರವವಿದೆ. ಮಾಧ್ಯಮಗಳ ಮೂಲಕ ವಿಷಾದ ಸೂಚಿಸುತ್ತೇನೆ. ಕಾಂಗ್ರೆಸ್ ಮುಖಂಡರಲ್ಲೂ ಕ್ಷಮೆಯಾಚಿಸುವೆ' ಎಂದು ಶ್ರೀನಿವಾಸ್ ತಿಳಿಸಿದ್ದಾರೆ.
ಇದರೊಂದಿಗೆ ರಾಜ್ಯಾದ್ಯಂತ ಶ್ರೀನಿವಾಸ್ ಹೇಳಿಕೆಯ ವಿರುದ್ಧ ಎದ್ದಿದ್ದ ಆಕ್ರೋಶ ತಣ್ಣಗಾದಂತಿದೆ. ಈ ಮಧ್ಯೆ, ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಕೃಷ್ಣಯ್ಯ ಅವರು ಶ್ರೀನಿವಾಸ್ ಗೆ Show Cause ನೋಟಿಸ್ ಜಾರಿಗೊಳಿಸಿದ್ದಾರೆ.
ಆದರೆ ಇಂತಹ ಪ್ರಕರಣಗಳು ಈ ಹಿಂದೆಯೂ ನಡೆದಿದ್ದು, ಯಾವುದೇ ಪ್ರಕರಣ ಸ್ಟಾಂಡ್ ಆಗಿಲ್ಲ. ಚುನಾವಣೆ ಪ್ರಚಾರದ ವೇಳೆ ರಾಜಕಾರಣಿಗಳಿಗೆ ಇದು ಕಾಲಕ್ಷೇಪವಾಗಿ ಕಂಡುಬರುತ್ತದೆ.












Click it and Unblock the Notifications