ಬೆಂಗಳೂರು ವಿ.ನಿಲ್ದಾಣ- ಮೈಸೂರು ಮಧ್ಯೆ ಫ್ಲೈ ಬಸ್
ಬೆಂಗಳೂರು, ಆಗಸ್ಟ್ 5: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಜಧಾನಿ ಬೆಂಗಳೂರಿನೊಳಕ್ಕೆ ಪ್ರವೇಶಿಸದೆ ಹೊರವಲಯದಿಂದ ನೇರವಾಗಿ ಮೈಸೂರಿಗೆ ಸಂಚರಿಸುವಂತೆ ಸದ್ಯದಲ್ಲೇ ವೋಲ್ವೋ ಲಕ್ಷುರಿ ಎಕ್ಸ್ ಪ್ರೆಸ್ ಬಸ್ಸುಗಳು (ಫ್ಲೈ ಬಸ್) ಓಡಾಡಲಿವೆ.
ಹೌದು, ರಾಜ್ಯ ಸಾರಿಗೆ ಸಂಸ್ಥೆಯು (ಕೆಎಸ್ಆರ್ ಟಿಸಿ) ಕೆಂಪೇಗೌಡ ವಿಮಾನ ನಿಲ್ದಾಣ ಮತ್ತು ಮೈಸೂರು ಮಧ್ಯೆ ಈ ಫ್ಲೈ ಬಸ್ ಸಂಚಾರವನ್ನು ಒದಗಿಸಲಿದೆ. ಇದು ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಗೆ KSRTC ಕೊಡುಗೆಯಾಗಿದೆ.

Flybusಗಳು ದಿನಂಪ್ರತಿ 2 ಟ್ರಿಪ್ ಸಂಚರಿಸಲಿವೆ. ತಾನ್ನು ತಾವು ಸಂಚರಿಸಬೇಕಾದ ವಿಮಾನಗಳ ಬಗ್ಗೆ real-time ಮಾಹಿತಿ, GPS, ಪ್ಯಾಂಟ್ರಿ, ಕೆಮಿಕಲ್ ಟಾಯ್ಲೆಟ್, ಪ್ರತಿಯೊಂದು ಆಸನಕ್ಕೂ ಒಂದೊಂದು ಟಿವಿ (70 ಚಾನೆಲುಗಳನ್ನು liveನಲ್ಲಿ ನೋಡಬಹುದು), ವೈ-ಫೈ ವ್ಯವಸ್ಥೆಗಳು ಇರುತ್ತವೆ. ಒಟ್ಟಾರೆಯಾಗಿ, ವಿಮಾನವೇರುವ ಮುನ್ನ ವಿಮಾನದಲ್ಲಿಯೇ ಸಂಚರಿಸುತ್ತಿರುವಂತಹ ಅನುಭವ ಈ ಫ್ಲೈ ಬಸ್ ನಲ್ಲಿ ಲಭ್ಯವಾಗಲಿದೆ.
August 14ರಿಂದ ಈ Flybus ಸೇವೆ ಆರಂಭವಾಗಲಿದ್ದು, ಅಡ್ವಾನ್ಸ್ ಬುಕಿಂಗ್ ಗಾಗಿ www.ksrtc.in ವೆಬ್ ಸೈಟ್ ನೋಡಬಹುದು. Make My Trip , RedBus, Via.Booking ಮೂಲಕವೂ ಇಂದಿನಿಂದ ಬುಕಿಂಗ್ ಮಾಡಿಸಬಹುದು.
'ಇದು ನಿಜಕ್ಕೂ ಜನೋಪಯೋಗಿ ಆಗಲಿದೆ. ಪ್ರಸ್ತುತ ತುರ್ತಾಗಿ ಮೈಸೂರಿನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸಂಚರಿಸಬೇಕು ಅಂದರೆ ಟ್ಯಾಕ್ಸಿ ಪ್ರಯಾಣಕ್ಕೆ 4,000 ರೂ. ಖರ್ಚಾಗುತ್ತದೆ. ಬಸ್ಸಿನಲ್ಲೇ ಪ್ರಯಾಣಿಸುತ್ತೇವೆ ಅಂದರೆ 2 ಬಸ್ಸುಗಳಲ್ಲಿ ಸಂಚರಿಸುವ ರಗಳೆ ಇದೆ. ಇದು ತಪ್ಪುತ್ತದೆ' ಎನ್ನುತ್ತಾರೆ KSRTC ವ್ಯವಸ್ಥಾಪಕ ನಿರ್ದೇಶಕ ಎನ್ ಮಂಜುನಾಥ್ ಪ್ರಸಾದ್.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications