ಬಿಜೆಪಿಯಿಂದ ಕೋಮು ಗಲಭೆ : ದಿಗ್ವಿಜಯ್ ಆರೋಪ

ಕರ್ನಾಟಕದ ಉಸ್ತುವಾರಿ ವಹಿಸಿಕೊಂಡಿರುವ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಅವರು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಂತರ ಪತ್ರಕರ್ತರೊಂದಿಗೆ ಮೇಲಿನಂತೆ ತಿಳಿಸಿದರು.
ಚುನಾವಣೆಯನ್ನು ಕೋಮುವಾದೀಕರಣ ಮಾಡದೆ ಭಾರತೀಯ ಜನತಾ ಪಕ್ಷಕ್ಕೆ ಚುನಾವಣೆ ಗೆಲ್ಲಲು ಸಾಧ್ಯವೇ ಇಲ್ಲ. ಹೀಗಾಗಿ ಅವರು ಎಲ್ಲ ಕಾಂಗ್ರೆಸ್ ರಾಜ್ಯಗಳಲ್ಲಿ ಕೋಮು ಸಂಘರ್ಷವನ್ನು ಹುಟ್ಟುಹಾಕಲಿದೆ. ಚುನಾವಣೆಯನ್ನು ಗೆಲ್ಲಲು ಎಂಥ ಮಟ್ಟಕ್ಕೂ ಬಿಜೆಪಿ ಇಳಿಯಲಿದೆ ಎಂದು ಅವರು ಆರೋಪಿಸಿದರು.
ಎಲ್ಲೆಲ್ಲಿ ಜನರ ಮನ್ನಣೆ, ಬೆಂಬಲವನ್ನು ಕಳೆದುಕೊಳ್ಳುತ್ತಿದೆ ಎಂದು ಬಿಜೆಪಿ ಅನಿಸುತ್ತದೋ ಅಲ್ಲೆಲ್ಲ ಕೋಮು ಹಿಂಸಾಚಾರಕ್ಕೆ ನಾಂತಿ ಹಾಡಲಿದೆ. ಇಂಥವರ ಬಗ್ಗೆ ಕಾಂಗ್ರೆಸ್ ನಾಯಕರು ಭಾರೀ ಜಾಗರೂಕತೆಯಿಂದ ಇರಬೇಕು ಮತ್ತು ಶಾಂತಿ ಕಾಪಾಡಲು ಯತ್ನಿಸಬೇಕಿದೆ ಎಂದು ಅವರು ನುಡಿದರು.
ಕರ್ನಾಟಕದಲ್ಲಿ ದೊಂಬಿ ಸೃಷ್ಟಿಸುತ್ತಿರುವ ಸಂಘ ಪರಿವಾರ ಬೆಂಬಲಿತ ಸಂಘಟನೆಗಳ ಮೇಲೆ ಹದ್ದಿನ ಕಣ್ಣು ಇಡಬೇಕು ಎಂದು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಿವಿಮಾತು ಹೇಳಿದರು.
ಸಂಘ ಪರಿವಾರದ 150ಕ್ಕೂ ಹೆಚ್ಚು ಸಂಘಟನೆಗಳು ಚಟುವಟಿಕೆಯಿಂದಿದ್ದು, ಅವರು ಯಾವುದೇ ರಾಜ್ಯದಲ್ಲಿ ಕೋಮು ಗಲಭೆ ನಡೆಸದಂತೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸಂಘಟನೆಗಳು ಗರಿಗೆದರದಂತೆ ಹದ್ದುಬಸ್ತಿನಲ್ಲಿ ಇಡಲು ಸರ್ವಸನ್ನದ್ಧರಾಗಿರಬೇಕು ಎಂದೂ ಅವರು ತಿಳಿಸಿದರು.












Click it and Unblock the Notifications