ಜೆಟ್ ಏರ್ ವೇಸ್ ಮಾಲೀಕನ ಪತ್ನಿ ದಂಡಕಟ್ಟಿದ್ದೇಕೆ?

ಏರ್ ಲೈನ್ಸ್ ಕಂಪನಿಯೊಂದರ ಮಾಲೀಕನ ಪತ್ನಿಯಾದರೂ ಸರಿ ನಿಯಮವೆಂದರೆ, ನಿಯಮ ಎಂದು ಪೊಲೀಸರು ಅನಿತಾ ಅವರನ್ನು ಬಂಧಿಸಿ, ದಂಡ ಕಟ್ಟಿಸಿಕೊಂಡು ಅವರನ್ನು ಬಿಡುಗಡೆ ಮಾಡಿದ್ದಾರೆ. ಜೆಟ್ ಏರ್ ವೇಸ್ ಮುಖ್ಯಸ್ಥ ಪತ್ನಿ ನಾಯಿಗಾಗಿ ಕಟ್ಟಿದ್ದು, ಕೇವಲ 36,200 ರೂ.ದಂಡ.
ಆಗಿದ್ದೇನು : ಅನಿತಾ ಗೋಯಲ್ ಕಳೆದ ಶನಿವಾರ ಲಂಡನ್ನಿಂದ ಮುಂಬೈಗೆ ಬರುವಾಗ ತಮ್ಮ ಜೊತೆ ಮುದ್ದು ನಾಯಿಯನ್ನೂ ಕರೆತಂದಿದ್ದರು. ಅನಿತಾ ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ಇಳಿದ ತಕ್ಷಣ ಅವರ ಕೈಯಲ್ಲಿದ್ದ ನಾಯಿಯ ಮೇಲೆ ಕಸ್ಟಮ್ ಅಧಿಕಾರಿಗಳ ಕಣ್ಣು ಬಿದ್ದಿದೆ.
ಅಧಿಕಾರಿಗಳು ಅನಿತಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಅನಿತಾ ತಮ್ಮ ನಾಯಿಯನ್ನು ವಿಮಾನದಲ್ಲಿ ಕರೆದೊಯ್ಯಲು ಯಾವುದೇ ಅನುಮತಿ ಪಡೆದಿರಲಿಲ್ಲ. ಇದರಿಂದಾಗಿ ದಂಡ ಕಟ್ಟುಬೇಕು ಎಂದು ಅಧಿಕಾರಿಗಳು ಆದೇಶಿಸಿದರು.
ದಂಡದ ಮೊತ್ತಗೊತ್ತೆ : ಆಮದು ವ್ಯಾಪಾರ ನಿಯಂತ್ರಣ ಕಾಯ್ದೆಯ ಅನ್ವಯ ಅನಿತಾ ಅವರಿಗೆ ದಂಡ ವಿಧಿಸಲಾಯಿತು. ನಾಯಿಯ ಬೆಲೆಯ ಅರ್ಧದಷ್ಟು ದಂಡ ರೂಪದಲ್ಲಿ ಅನಿತಾ ಕಟ್ಟಬೇಕಾಯಿತು. ಅವರ ಮುದ್ದಿನ ನಾಯಿಯ ಬೆಲೆ 45,000 ವಿತ್ತು.
ಆದ್ದರಿಂದ ಶೇ 36ರಷ್ಟು ಅಂದರೆ 16,200ರೂಗಳನ್ನು ದಂಡವಾಗಿ ಅನಿತಾ ಕಟ್ಟಬೇಕಾಯಿತು. ನಿಯಮ ಉಲ್ಲಂಘನೆ ಮಾಡಿರುವುದಕ್ಕಾಗಿ 8000 ಸೇರಿದಂತೆ ಒಟ್ಟು 36,200 ರೂ.ಗಳನ್ನು ಅನಿತಾ ದಂಡ ರೂಪದಲ್ಲಿ ಕಟ್ಟಿ ಪೊಲೀಸರಿಂದ ಬಿಡುಗಡೆ ಹೊಂದಿದರು.
ನಿಯಮವೇನು : ವಿಮಾನದಲ್ಲಿ ಸಾಕು ಪ್ರಾಣಿಗಳನ್ನು ಕರೆದೊಯ್ಯುವಂತಿಲ್ಲ ಎಂಬ ನಿಯಮವಿದೆ. ಪ್ರಯಾಣಿಕರು ಅಂವಿಕಲರಾಗಿದ್ದರೆ, ಅಥವ ಶಾಶ್ವತವಾಗಿ ತಮ್ಮ ವಾಸಸ್ಥಾನ ಬದಲಾವಣೆ ಮಾಡುತ್ತಿದ್ದರೆ, ಸಾಕು ಪ್ರಾಣಿಗಳನ್ನು ವಿವಿಧ ಇಲಾಖೆಗಳ ಅನುಮತಿ ಪಡೆದು ವಿಮಾನದಲ್ಲಿ ಕರೆದೊಯ್ಯಬಹುದು.
ಆದರೆ, ಅನಿತಾ ಅವರು ಒಂದು ತಿಂಗಳಿಗೂ ಹೆಚ್ಚುಕಾಲ ಭಾರತದಲ್ಲಿ ವಾಸ್ತವ್ಯ ಹೂಡುವುದರಿಂದ ನಾಯಿಯನ್ನು ಕರೆತಂದಿದ್ದರು. ಅದಕ್ಕೆ ಅನುಮತಿ ಸಹ ಪಡೆದಿರಲಿಲ್ಲ. ಆದರೆ, ಅನಿತಾ ವಿಮಾನ ಹತ್ತುವಾಗ ಅಧಿಕಾರಿಗಳು ಏಕೆ ತಡೆದಿಲ್ಲ ಎಂಬ ಪ್ರಶ್ನೆಗೆ ಉತ್ತರ ದೊರಕಿಲ್ಲ.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications