ತಾಯಿ ಸತ್ತರೂ 3 ತಿಂಗಳು ಶವಸಂಸ್ಕಾರ ಮಾಡದ ಮಗ

ಇಂಥದೊಂದು ವಿಚಿತ್ರ, ವಿಸ್ಮಯಕಾರಿ ಘಟನೆ ನಡೆದಿರುವ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಪಳನಿಮೇಡು ಎಂಬ ಗ್ರಾಮದಲ್ಲಿ. ಮುನಿಸ್ವಾಮಿ (60) ಎಂಬ ಬ್ರಹ್ಮಚಾರಿಯೊಬ್ಬ ತನ್ನ ತಾಯಿ ಲಕ್ಷ್ಮೀ (90) ತೀರಿಕೊಂಡು ಮೂರು ತಿಂಗಳಾಗಿದ್ದರೂ ಶವಸಂಸ್ಕಾರ ಮಾಡದೆ ದಿನವೂ ಪೂಜಿಸುತ್ತಿದ್ದ ಮತ್ತು ಆರಾಧಿಸುತ್ತಿದ್ದ. ತನ್ನ ತಾಯಿ ಇನ್ನೂ ಸತ್ತೇ ಇಲ್ಲ ಎಂಬಂತೆ ವರ್ತಿಸುತ್ತಿದ್ದ.
ಆತ ಮಾನಸಿಕವಾಗಿ ಅಸ್ವಸ್ಥನಾಗಿರಲಿಲ್ಲ, ಆದರೆ, ಆತನ ತಾಯಿ ಪ್ರೇಮವೇ ಅಂತಹುದು. ತಾನಿದ್ದ ಮನೆಯ ಪಕ್ಕದಲ್ಲಿ ಗುಡಿಸಲೊಂದನ್ನು ನಿರ್ಮಿಸಿ, ಅಲ್ಲಿ ತಾಯಿಯ ಶವವನ್ನು ತೂಗುಯ್ಯಾಲೆಯಲ್ಲಿ ಇಟ್ಟು ತೂಗುತ್ತಿದ್ದ. ಪ್ರತಿದಿನವೂ ಪಾದಪೂಜೆ ಮಾಡುತ್ತಿದ್ದ. ಅಯ್ಯಪ್ಪ ಸ್ವಾಮಿಯ ಭಕ್ತನಾಗಿರುವ ಆತ ಒಂದು ಕ್ಷಣವೂ ತಾಯಿಯ ಶವವನ್ನು ಬಿಟ್ಟು ಕದಲುತ್ತಿರಲಿಲ್ಲ.
ಫ್ಲಾಷ್ ಬ್ಯಾಕ್ : ಮುನಿಸ್ವಾಮಿ ಲಕ್ಷ್ಮೀ ಎಂಬ ಮಹಿಳೆಯ 9 ಮಕ್ಕಳಲ್ಲಿ 6ನೇಯವರು. ಬಾಲ್ಯದಿಂದಲೂ ತಾಯಿಯೆಂದರೆ ಅಪಾರವಾದ ಮಮಕಾರ. ಉಳಿದ ಮಕ್ಕಳು ಬೆಳೆದ ಮೇಲೆ ಬೇರೆಡೆ ವಾಸವಿದ್ದರೆ ಈತ ತಾಯಿಯ ಜೊತೆಗೇ ಇದ್ದ. ತಾನು 14ನೇ ವಯಸ್ಸಿನಲ್ಲಿ ಇದ್ದಾಗಲೇ ದೇವರ ಪೂಜೆಯ ಜೊತೆಗೆ ಅಮ್ಮನನ್ನು ಕೂಡ ದೇವರಂತೆ ಕಾಣುತ್ತಿದ್ದ ಮತ್ತು ಆರಾಧಿಸುತ್ತಿದ್ದ. ಮದುವೆಯಾದರೆ ತಾಯಿ ಪ್ರೇಮ ಕಡಿಮೆಯಾಗುತ್ತದೆಂದು ಲಗ್ನ ಕೂಡ ಆಗಿರಲಿಲ್ಲ. ಆತನ ತಾಯಿ ಪ್ರೇಮ ಅಷ್ಟು ಉತ್ಕಟವಾಗಿತ್ತು.
ಮಾನವನಾಗಿ ಹುಟ್ಟಿದ ಮೇಲೆ ಒಂದಿಲ್ಲೊಂದು ದಿನ ದಕ್ಷಿಣ ದಿಕ್ಕಿನೆಡೆಗೆ ಪಯಣ ಬೆಳೆಸಲೇಬೇಕಲ್ಲ. ಮುನಿಸ್ವಾಮಿಯ ತಾಯಿ ಮೂರು ತಿಂಗಳ ಹಿಂದೆ ತೀರಿಕೊಂಡುಬಿಟ್ಟರು. ಆದರೆ, ಆತ ಎಲ್ಲರಂತೆ ಶವಸಂಸ್ಕಾರ ಮಾಡಲೇ ಇಲ್ಲ. ಶವವನ್ನು ಗಾಜಿನ ಪೆಟ್ಟಿಗೆಯಲ್ಲಿ ಮರಳಿನ ಮೇಲೆ ಇಟ್ಟು ತೂಗುಯ್ಯಾಲೆಯಲ್ಲಿ ನೆಲಕ್ಕೆ ತಾಗದಂತೆ ಇಟ್ಟಿದ್ದ. ತಾಯಿಯ ದೇಹ ಮಣ್ಣಲ್ಲಿ ಮಣ್ಣಾಗಬಾರದು ಎಂಬುದು ಆತನ ಆಶಯವಾಗಿತ್ತು.
ಇದರ ಹಿಂದೆಯೂ ಒಂದು ಕಥೆಯಿದೆ. ಹಿಂದೆ ಗೋವಾಗೆ ಹೋಗಿದ್ದಾಗ ಚರ್ಚಿನಲ್ಲಿ ಶವವನ್ನು ಪಿರಮಿಡ್ ಮಾದರಿಯ ಗಾಜಿನಪೆಟ್ಟಿಗೆಯಲ್ಲಿ ಕೆಡದಂತೆ ಇಟ್ಟಿದ್ದನ್ನು ನೋಡಿದ್ದಾನೆ. ತನ್ನ ತಾಯಿಯನ್ನು ಕೂಡ ಹಾಗೆಯೇ ಕೆಡದಂತೆ ಇಡಬೇಕೆಂದು ಬಯಸಿದ್ದಾನೆ. ಅದಕ್ಕಾಗಿ ತಕ್ಕ ವ್ಯವಸ್ಥೆಯನ್ನು ಕೂಡ ಮಾಡಿದ್ದ. ಶವಪೆಟ್ಟಿಗೆಯ ಮೇಲೆ ತಕ್ಕಷ್ಟು ಬೆಳಕು ಬೀಳುವ ವ್ಯವಸ್ಥೆಯನ್ನೂ ಮಾಡಿದ್ದ.
ಜನರ ಆಕ್ಷೇಪ : ಆತ ಎಷ್ಟೇ ಪ್ರಯತ್ನ ಮಾಡಿದ್ದರೂ ವೈಜ್ಞಾನಿಕ ರೀತಿಯಲ್ಲಿ ಮಾಡಿರದಿದ್ದರಿಂದ ಶವ ತಡೆಯಬೇಕಲ್ಲ. ಕೊಳೆತು ನಾರಲು ಪ್ರಾರಂಭಿಸಿತು. ಅಕ್ಕಪಕ್ಕದ ಗ್ರಾಮಸ್ಥರೆಲ್ಲ ಆಕ್ಷೇಪ ವ್ಯಕ್ತಪಡಿಸಲು ಆರಂಭಿಸಿದರು. ತಾಯಿಯ ಶವಸಂಸ್ಕಾರ ಮಾಡಿರದಿದ್ದರಿಂದಲೇ ಜಿಲ್ಲೆಯಲ್ಲಿ ಸರಿಯಾಗಿ ಮಳೆಯಾಗುತ್ತಿಲ್ಲ ಎಂದು ಮುನಿಸ್ವಾಮಿ ಮೇಲೆ ಗೂಬೆಕೂರಿಸಲು ಆರಂಭಿಸಿದರು.
ಇದರಿಂದ ಕೊನೆಗೂ ಮುನಿಸ್ವಾಮಿ ಮಣಿಯಲೇಬೇಕಾಯಿತು. ಅಮ್ಮನ ಶವವನ್ನು ಇಟ್ಟ ಸ್ಥಳದಲ್ಲಿಯೇ ಸಮಾಧಿಯನ್ನು ನಿರ್ಮಿಸಿದ್ದಾನೆ. ಆದರೆ, ಪೊಲೀಸರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಮಾಧಿಯನ್ನು ಒಡೆದು ಹಾಕಿದ್ದಾರೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ












Click it and Unblock the Notifications