ಚಿತ್ರಸುದ್ದಿ: ಶ್ರದ್ಧಾಂಜಲಿ, ಆನೆ, ಸಿಂಗ್, ತಂಬಾಕು
ಬೆಂಗಳೂರು, ಮೇ. 31: ಗುಟ್ಕಾ, ಪಾನ್ ಮಸಲಾ ಮುಂತಾದ ತಂಬಾಕು ಪದಾರ್ಥಗಳಲ್ಲಿ ನಿಕೋಟಿನ್ ಸೇರಿದಂತೆ ಹಲವು ರೀತಿಯ ರಾಸಾಯನಿಕಗಳನ್ನು ಬಳಸಲಾಗಿರುತ್ತದೆ. ಇದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ. ಇಂದು ವಿಶ್ವ ತಂಬಾಕು ಸೇವನೆ ರಹಿತ ದಿನಾಚರಣೆ. ಕರ್ನಾಟಕ ಸರ್ಕಾರ ಗುಟ್ಕಾ ಸೇವನೆಗೆ ನಿಷೇಧ ಹೇರಲು ತುದಿಗಾಲಲ್ಲಿ ನಿಂತಿದೆ.
ಬಂಗಾಳಿಯ ಖ್ಯಾತ ಚಿತ್ರ ನಿರ್ದೇಶಕ ಹಾಗೂ ನಟ ರಿತುಪರ್ಣೋ ಘೋಷ್(49) ಅಕಾಲಿಕ ಮರಣದ ಶೋಕ ಎಲ್ಲೆಡೆ ಆವರಿಸಿದೆ. ಬಂಗಾಳಳವು ಅತ್ಯುತ್ತಮ ನಿರ್ದೇಶಕರನ್ನು ಕಳೆದುಕೊಂಡಿದೆ. ಅವರ ಆಕಸ್ಮಿಕ ಮರಣವು ಅತ್ಯಂತ ನೋವನ್ನು ತಂದಿದೆ. ಇದು ಅತ್ಯಂತ ಕರಾಳ ದಿನ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಹೇಳಿದ್ದಾರೆ.
ಬಾಲಿವುಡ್ ನ ಅನೇಕ ತಾರೆಯರು, ಬಾಂಗ್ಲಾ ಚಿತ್ರರಂಗದ ಸಿನಿನಟ, ನಟಿಯರು ಹಾಗೂ ಆಪಾರ ಅಭಿಮಾನಿಗಳು ಘೋಷ್ ಅವರ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಗುರುವಾರ ಕೋಲ್ಕತಾದ ನಂದನ್ ಸಿನಿಮಾ ಕಾಂಪ್ಲೆಕ್ಸ್ ನಲ್ಲಿ ಘೋಷ್ ಅವರ ಪಾರ್ಥೀವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಸಂಜೆ 6 ಗಂಟೆ ನಂತರ ಅಂತ್ಯಸಂಸ್ಕಾರ ನೆರವೇರಿತು.
ಪಶ್ಚಿಮ ಬಂಗಾಳದಲ್ಲಿ ಇನ್ನೊಂದು ದುರಂತ ಸಂಭವಿಸಿದ್ದು, ವೇಗವಾಗಿ ಬರುತ್ತಿದ್ದ ರೈಲು ಗುದ್ದಿ ಮೂರು ಆನೆಗಳ ಪೈಕಿ ಎರಡು ಆನೆಗಳು ಪ್ರಾಣ ತೆತ್ತು ಹಳಿಗಳ ಮೇಲೆ ಮಲಗಿರುವ ದೃಶ್ಯ ಎಲ್ಲರ ಮನ ಕಲಕುತ್ತಿದೆ.
ಜಲಪೈಗುರಿಯ ಮೊರಾಘಾಟ್ ಬಳಿ ವೇಗವಾಗಿ ಬರುತ್ತಿದ್ದ ರೈಲಿಗೆ ಎರಡು ಆನೆಗಳು ಬಲಿಯಾಗಿದೆ. ಮಿಕ್ಕಂತೆ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಗಳಿಗೆ ಸಜ್ಜಾಗುತ್ತಿರುವ ಇಂಗ್ಲೆಂಡಿನ ಕ್ರೀಡಾಂಗಣ ಇನ್ನಷ್ಟು ಇಲ್ಲಿದೆ ನೋಡಿ

ಚಿತ್ರದಲ್ಲಿ ಇತ್ತೀಚಿನ ಸುದ್ದಿಗಳು
ಪಾಟ್ನಾ: ಶಾಲಾ ಮಕ್ಕಳು ವಿಶ್ವ ತಂಬಾಕು ರಹಿತ ದಿನಾಚರಣೆಯಂದು ತಂಬಾಕು ವಿರುದ್ಧ ಅಭಿಯಾನದಲ್ಲಿ

ಚಿತ್ರದಲ್ಲಿ ಇತ್ತೀಚಿನ ಸುದ್ದಿಗಳು
ಒಡಿಶಾದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಅವರು ಸಿಗರೇಟ್ ಸೇವನೆ ದುಷ್ಪರಿಣಾಮದ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ.

ಚಿತ್ರದಲ್ಲಿ ಇತ್ತೀಚಿನ ಸುದ್ದಿಗಳು
ಸೂರತ್ : ಸ್ವಾಮಿ ನಾರಾಯಣ ಗುರುಕುಲದ ಮಕ್ಕಳು ತಂಬಾಕು ಸೇವನೆ ವಿರುದ್ಧ ಕಾರ್ಯಕ್ರಮದಲ್ಲಿ

ಚಿತ್ರದಲ್ಲಿ ಇತ್ತೀಚಿನ ಸುದ್ದಿಗಳು
ಬರ್ಮಿಂಗ್ ಹ್ಯಾಮ್ : ಎಜ್ಬಾಸ್ಟನ್ ನಲ್ಲಿ ಇಂದಿನಿಂದ ಚಾಂಪಿಯನ್ ಟ್ರೋಫಿ ಅಭ್ಯಾಸ ಪಂದ್ಯ ಆರಂಭ ಪಾಕಿಸ್ತಾನ ಹಾಗೂ ಶ್ರೀಲಂಕಾ ಪಂದ್ಯ ಮೊದಲಿಗೆ

ಚಿತ್ರದಲ್ಲಿ ಇತ್ತೀಚಿನ ಸುದ್ದಿಗಳು
ಎವೆರೆಸ್ಟ್ ಏರಲು ನನಗೆ ಕ್ರಿಕೆಟರ್ ಯುವರಾಜ್ ಸಿಂಗ್ ಸ್ಪೂರ್ತಿ ನೀಡಿದರು ಎಂದು ಒಂಟಿ ಕಾಲಲ್ಲಿ ಎವೆರೆಸ್ಟ್ ಏರಿಳಿದ ಅರುಣಿಮಾ ಹೇಳಿಕೆ

ಚಿತ್ರದಲ್ಲಿ ಇತ್ತೀಚಿನ ಸುದ್ದಿಗಳು
ಬಿಸಿಸಿಐ ಅಧ್ಯಕ್ಷ ಎನ್ ಶ್ರೀನಿವಾಸನ್ ಹುದ್ದೆಯಿಂದ ಕೆಳಗಿಳಿಯಬೇಕು ಎನ್ನುತ್ತಿರುವ ಶರದ್ ಪವಾರ್

ಚಿತ್ರದಲ್ಲಿ ಇತ್ತೀಚಿನ ಸುದ್ದಿಗಳು
ಇದು ಸಂಸತ್ತಿಗೆ ಮತ್ತೊಮ್ಮೆ ಆಯ್ಕೆಯಾದ ಖುಷಿಗೆ.. ಚಿಯರ್ಸ್
ಬ್ಯಾಂಕಾಕ್ ನಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಥೈಲ್ಯಾಂಡ್ ಪ್ರಧಾನಿ ಯಿಂಗ್ಲುಕ್ ಶಿನಾವಾತ್ರ

ಚಿತ್ರದಲ್ಲಿ ಇತ್ತೀಚಿನ ಸುದ್ದಿಗಳು
ಕೋಲ್ಕತ್ತಾ: ರಿತುಪರ್ಣೋ ಘೋಷ್ ಗೆ ಶ್ರದ್ಧಾಂಜಲಿ

ಚಿತ್ರದಲ್ಲಿ ಇತ್ತೀಚಿನ ಸುದ್ದಿಗಳು
ಕೋಲ್ಕತ್ತಾ: ರಿತುಪರ್ಣೋ ಘೋಷ್ ಗೆ ಶ್ರದ್ಧಾಂಜಲಿ

ಚಿತ್ರದಲ್ಲಿ ಇತ್ತೀಚಿನ ಸುದ್ದಿಗಳು
ಕೋಲ್ಕತ್ತಾ: ರಿತುಪರ್ಣೋ ಘೋಷ್ ಗೆ ಶ್ರದ್ಧಾಂಜಲಿ

ಚಿತ್ರದಲ್ಲಿ ಇತ್ತೀಚಿನ ಸುದ್ದಿಗಳು
ಕೋಲ್ಕತ್ತಾ: ರಿತುಪರ್ಣೋ ಘೋಷ್ ಗೆ ಶ್ರದ್ಧಾಂಜಲಿ

ಚಿತ್ರದಲ್ಲಿ ಇತ್ತೀಚಿನ ಸುದ್ದಿಗಳು
ಕೋಲ್ಕತ್ತಾ: ರಿತುಪರ್ಣೋ ಘೋಷ್ ಗೆ ಶ್ರದ್ಧಾಂಜಲಿ... ಬೆಂಗಾಳಿ ನಟಿ ರಿತುಪರ್ಣಾ

ಚಿತ್ರದಲ್ಲಿ ಇತ್ತೀಚಿನ ಸುದ್ದಿಗಳು
ಪಶ್ವಿಮ ಬಂಗಾಳದ ಜಲಪೈಗುರಿಯ ಮೊರಾಘಾಟ್ ಬಳಿ ವೇಗವಾಗಿ ಬರುತ್ತಿದ್ದ ರೈಲಿಗೆ ಎರಡು ಆನೆಗಳು ಬಲಿಯಾಗಿದೆ.












Click it and Unblock the Notifications