ಲಂಡನ್ : ಬದನೇಕಾಯಿಯಲ್ಲಿ ಗಣಪ ಪ್ರತ್ಯಕ್ಷ!

ಭಾರತದಲ್ಲಿ ದೇವರ ರೂಪದ ಮರ, ತರಕಾರಿ ಮುಂತಾದ ವಸ್ತುಗಳು ಪತ್ತೆಯಾಗಿ ಜನರಲ್ಲಿ ಅಚ್ಚರಿ ಮೂಡಿಸುವುದು ಹೊಸತೇನಲ್ಲ. ಆದರೆ, ವಿಘ್ನ ವಿನಾಶಕ ಲಂಡನ್ ನಲ್ಲೂ ತರಕಾರಿಯಲ್ಲಿ ಪ್ರತ್ಯಕ್ಷಗೊಂಡು ತನ್ನ ಪ್ರಭಾವ ಬೀರಿದ್ದಾನೆ.
ಭಾರತೀಯ ಮೂಲದ ಹೋಟೆಲ್ ಉದ್ಯಮಿ ಪ್ರಫುಲ್ ವಿಸ್ರಾಮ್ ನಡೆಸುತ್ತಿದ್ದ ಹೋಟೆಲ್ ನಲ್ಲಿ ಗಣೇಶನ ದರ್ಶನವಾಗಿದೆ. ಹೋಟೆಲ್ ಗೆ ಭೇಟಿ ನೀಡುವ ಜನರಿಗೆ ಇದರು ಅಚ್ಚರಿಗೆ ಕಾರಣವಾಗಿದ್ದರೆ, ಭಾರತೀಯರು ಹೋಟೆಲ್ ಗೆ ಅಗಮಿಸಿದರೆ, ಭಕ್ತಿಯಿಂದ ನಮಸ್ಕರಿಸುತ್ತಿದ್ದಾರೆ.
ಗಣೇಶ ಕಂಡಿದ್ದು ಹೇಗೆ : ಪ್ರಫುಲ್ ವಿಸ್ರಾಮ್ ಪ್ರತಿ ದಿನವೂ ಹೋಟೆಲ್ ಗೆ ಬದನೇಕಾಯಿ ತರಿಸುತ್ತಾರೆ. ಅಂತೆಯೇ ಭಾನುವಾರ ಹೋಟೆಲ್ ಗೆ 20 ಪೆಟ್ಟಿಗೆ ಬದನೇಕಾಯಿ ಬಂದಿಳಿದಿದೆ.
ಅಡುಗೆಯವರು ಬದನೇಕಾಯಿ ಸಂಸ್ಕರಿಸುವಾಗ ವಿಚಿತ್ರ ಆಕಾರದ ಬದನೇಕಾಯಿ ಇರುವುದನ್ನು ಗಮನಿಸಿದ್ದಾನೆ. ಕಣ್ಣು, ಕಿವಿ, ಸೊಂಡಿಲು ಇರುವಂತೆ ಇದ್ದ ಬನೇಕಾಯಿಯನ್ನು ಪೆಟ್ಟಿಗೆಯಿಂದ ತೆಗೆದು ನೋಡಿದಾಗ ಗಣೇಶನ ಮೂರ್ತಿಯಂತೆ ಕಂಡುಬಂದಿದೆ.
ತಕ್ಷಣ ಹೋಟೆಲ್ ಮಾಲೀಕರಿಗೆ ವಿಷಯ ತಿಳಿಸಿದ್ದಾನೆ. ಪ್ರಫುಲ್ ಪತ್ನಿ ರೇಖಾ ಇದು ಗಣೇಶನ ಮೂರ್ತಿಯೇ, ಇದನ್ನು ತಂಡುಮಾಡಿ ಅಡುಗೆ ಮಾಡುವುದು ಬೇಡ ಎಂದು ದೇವರ ಕೋಣೆಗೆ ತಂದು ಪೂಜೆ ಮಾಡಲು ಪ್ರಾರಂಭಿಸಿದ್ದಾರೆ.
ದೇವರು ಮನೆಬಾಗಿಲಿಗೆ ಬಂದ ಸಂತೋಷದಲ್ಲಿ ಪ್ರಫುಲ್ ದಂಪತಿಗಳು ಬದನೇಕಾಯಿ ಗಣಪನಿಗೆ ನಿತ್ಯ ಎರಡು ಬಾರಿ ಪೂಜೆ ಮಾಡುತ್ತಿದ್ದಾರೆ. ಹೋಟೆಲ್ ಗೆ ಆಗಮಿಸುವ ಗ್ರಾಹಕರಿಗೆ ಬದನೇಕಾಯಿ ಗಣಪ ಕುತೂಹಲ ಮೂಡಿಸಿದ್ದಾನೆ.
ಲಂಡನ್ ನಿವಾಸಿಗಳಾಗ ಕೆಲವು ಭಾರತೀಯರು ಹೋಟೆಲ್ ಗೆ ಆಗಮಿಸಿ, ಬದನೇಕಾಯಿ ಗಣಪನಿಗೆ ಶಿರ ಸಾಷ್ಟಾಂಗ ವಂದಿಸಿ ಮರಳುತ್ತಿದ್ದಾರೆ. ಒಟ್ಟಿನಲ್ಲಿ ಭಾತರದ ಪಾಲಿನ ವಿಘ್ನೇಶ್ವರ ಲಂಡನ್ ನಲ್ಲಿಯೂ ಮೋಡಿ ಮಾಡಿದ್ದಾನೆ.
-
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು -
ಶಿಕ್ಷಕಿಯರು ಹೆರಿಗೆ ರಜೆಗಾಗಿ ಅರ್ಜಿ ಸಲ್ಲಿಸಿದ 15 ದಿನಗಳ ಒಳಗೆ ಮಂಜೂರು; 5 ವರ್ಷ ಇಚ್ಛಿಸಿದ ಶಾಲೆಯಲ್ಲೇ ಕೆಲಸಕ್ಕೆ ಅವಕಾಶ -
SSLC Exam 2026 : ಮಾರ್ಚ್ 18ರಿಂದ ಪರೀಕ್ಷೆ; ವಿದ್ಯಾರ್ಥಿಗಳೇ, ನಿಮ್ಮ ಕೊನೆ ಕ್ಷಣದ ಸಿದ್ಧತೆಗೆ ಹೀಗಿರಲಿ -
Puneeth Rajkumar Birthday: ಇಂದು ನಟ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ; ಅಭಿಮಾನಿಗಳಿಂದ ವಿಶೇಷ ನಮನ, ಶುಭಾಶಯಗಳ ಮಹಾಪೂರ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
Shame on You: ಸೆರಗ ಸರ್ಸೆ ಡಬಲ್ ಮೀನಿಂಗ್ ಹಾಡಿಗೆ ಕನ್ನಡಿಗರ ಆಕ್ರೋಶ-ಶೋಭಾ ಮಳವಳ್ಳಿ ಬರಹ -
ನಾಳೆಯಿಂದ ರಾಜ್ಯಾದ್ಯಂತ SSLC ಪರೀಕ್ಷೆ: ಟೆನ್ಷನ್ ಬಿಡಿ, ರಿಲಾಕ್ಸ್ ಆಗಿರಿ; ಕೊನೆಯ ಕ್ಷಣದ ಸಿದ್ಧತೆಗೆ ಇಲ್ಲಿವೆ ಟಿಪ್ಸ್ -
Bengaluru Rain: ಬೆಂಗಳೂರಿನ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ: ಯುಗಾದಿಗೆ ಮೊದಲ ಮಳೆ; ರಾಜ್ಯಕ್ಕೆ ಶುಭಸೂಚಕ












Click it and Unblock the Notifications