ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಿರಿನಗರ : ಪತ್ನಿಯನ್ನು ಬಡಿದು ಕೊಂದ ವೀಣಾವಾದಕ

|
Google Oneindia Kannada News

B.M.Candrashekaraiah
ಬೆಂಗಳೂರು, ಏ. 18 : ಗಿರಿನಗರದ ಸಾಯಿ ಮಂದಿರ ಬಳಿಯ ನಿವಾಸಿ ವೀಣಾವಾದಕ ಬಿ.ಎಂ.ಚಂದ್ರಶೇಖರಯ್ಯ ಬುಧವಾರ ತಡರಾತ್ರಿ ಜೋಡಿ ಕೊಲೆ ಮಾಡಿದ್ದಾರೆ. ಪತ್ನಿ ಪ್ರೀತಿ ಮತ್ತು ದೊಡ್ಡಪ್ಪನ ಮಗಳನ್ನು ಕೊಲೆ ಮಾಡಿರುವ ಅವರು ನಂತರ ಗಿರಿನಗರ ಪೊಲೀಸ್ ಠಾಣೆಗೆ ಶರಣಾಗರಾಗಿದ್ದಾರೆ.

ಬುಧವಾರ ತಡರಾತ್ರಿ ಒಂದು ಗಂಟೆ ಸುಮಾರಿಗೆ ಹೆಂಡತಿಯೊಂದಿಗೆ ಜಗಳ ಪ್ರಾರಂಭಿಸಿದ ಚಂದ್ರಶೇಖರಯ್ಯ ಪತ್ನಿ ಪ್ರೀತಿ (40) ದೊಡ್ಡಪ್ಪನ ಮಗಳು ವೇದ ಅವರನ್ನು ರಾಡ್ ನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ. ನಂತರ ಗಿರಿನಗರ ಪೊಲೀಸರಿಗೆ ಶರಣಾಗಿದ್ದಾರೆ.

ಕೌಟುಂಬಿಕ ಕಲಹವೇ ಘಟನೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ವಿಚ್ಚೇದಿತ ಪ್ರೀತಿಯನ್ನು ಚಂದ್ರಶೇಖರಯ್ಯ ವಿವಾಹವಾಗಿದ್ದರು. ಚಂದ್ರಶೇಖರಯ್ಯ ಅವರಿಗೆ ಸಹ ಪ್ರೀತಿ ಎರಡನೇ ಸಹ ಮೊದಲ ಪತ್ನಿಗೆ ವಿಚ್ಚೇದನ ನೀಡಿದ್ದರು. ಇವರಿಗೆ ಹತ್ತು ತಿಂಗಳ ಒಂದು ಹೆಣ್ಣುಮಗುವಿದೆ. ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಪ್ರೀತಿಗೆ ಚಂದ್ರಶೇಖರಯ್ಯ ಯಾವಾಗಲೂ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದ ಎಂದು ತಿಳಿದು ಬಂದಿದೆ.

ಗಂಡನ ಕಾಟದಿಂದ ಬೇಸತ್ತಿದ್ದ ಪ್ರೀತಿ ಗಿರಿನಗರ ಠಾಣೆಯಲ್ಲಿ ಗಂಡನ ಮೇಲೆ, ವರದಕ್ಷಿಣೆ ಕಿರುಕುಳದ ದೂರು ದಾಖಲಿಸಿದ್ದರು. ಇದನ್ನು ಅರಿತಿದ್ದ ಪತಿ ಸೇಡಿಗಾಗಿ ಪತ್ನಿಯೊಂದಿಗೆ ಜಗಳವಾಡಿ ಆಕೆಯನ್ನು ಕೊಲೆ ಮಾಡಿದ್ದಾನೆ. ಕೊಲೆಯಾಗಿದ್ದು ಕಂಡು ಓಡಲು ಯತ್ನಿಸಿದ ತನ್ನ ದೊಡ್ಡಪ್ಪನ ಮಗಳು ವೇದಾಳನ್ನು ಚಂದ್ರಶೇಖರಯ್ಯ ಕೊಲೆ ಮಾಡಿದ್ದಾನೆ.

ಯಾವುದೇ ಕೆಲಸ ಮಾಡದೇ ಮನೆಯ ಜಬಾಬ್ದಾರಿಯನ್ನು ನಿಭಾಯಿಸದೇ ಕಾಲ ಕಳೆಯುತ್ತಿದ್ದ ಚಂದ್ರಶೇಖರಯ್ಯ ಜೊತೆ ಪತ್ನಿ ಪ್ರೀತಿ ಯಾವಾಗಲೂ ಜಗಳವಾಡುತ್ತಿದ್ದಳು. ಹಣಕ್ಕಾಗಿ ಪೀಡಿಸಿ ಪತ್ನಿಗೆ ಚಂದ್ರಶೇಖರಯ್ಯ ಹೊಡೆಯುತ್ತಿದ್ದ ಎಂದು ಸ್ಥಳೀಯರು ಹೇಳಿದ್ದಾರೆ.

ಕೊಲೆ ಮಾಡಿದ ನಂತರ ಚಂದ್ರಶೇಖರಯ್ಯ ಗಿರಿನಗರ ಪೊಲೀಸರಿಗೆ ಶರಣಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
A middle aged person has brutally killed Two women in Bangalore. In Girinagar B.M.Candrashekaraiah killed his wife Preeti (40) and his friend. After killed both he surrender to the Girinagara police station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X