ಭಂಡಾಯ: ವಾಕರಿಕೆ ಬರಿಸುತ್ತಿರುವ ಉಮೇದುವಾರಿಕೆ

ಪರಿಸ್ಥಿತಿ ಯಾವ ಮಟ್ಟಕ್ಕೆ ಬಂದು ನಿಂತಿದೆಯೆಂದರೆ ಅದು ದೊಡ್ಡಗುಣದ ಅಂಬರೀಷೇ ಆಗಿರಬಹುದು ಅಥವಾ ಅವರ ಪಕ್ಕದ ಮತ್ತೊಬ್ಬ ಸಜ್ಜನ ಕೆಆರ್ ಪೇಟೆ ಕೃಷ್ಣ ಅವರೇ ಆಗಿರಬಹುದು, ಒಟ್ಟಾರೆಯಾಗಿ ಒಂದು ಟಿಕೆಟಿಗಾಗಿ ಈ ಜನನಾಯಕರು ನಡೆಸುತ್ತಿರುವ ಭಂಡಾಯ, ಬಂಡಾಯ, ದೊಂಬರಾಟಗಳನ್ನು ನೋಡಿದರೆ ಉಮೇದುವಾರಿಕೆ ಎಂಬುದು ನಿಜಕ್ಕೂ ವಾಕರಿಕೆ ಬರಿಸುತ್ತಿದೆ.
ಈ ದೊಂಬರಾಟ, ಇವರು ಸಲ್ಲಿಸುವ ರಾಮ-ಕೃಷ್ಣ ಲೆಕ್ಕದ ಆಸ್ತಿ ವಿವರ ಘೋಷಣೆಯನ್ನು ನೋಡಿದಾಗ... ನಿನ್ನೆ ಸುವರ್ಣ ನ್ಯೂಸ್ ಚಾನೆಲಿನಲ್ಲಿ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಮಾಜಿ ತೆರಿಗೆ ಅಧಿಕಾರಿ, ನೈಜ ಕಲಾವಿದ ಸೇತೂರಾಂ ಅವರು ಹೇಳಿದಂತೆ 'ಜನಸಾಮಾನ್ಯ ಸೇವೆ ಮಾಡಲು ಸೋಕಾಲ್ಡ್ ಜನನಾಯಕರು ಇಷ್ಟೆಲ್ಲ ಕಷ್ಟಪಟ್ಟು ಟಿಕೆಟ್ ಗಿಟ್ಟಿಸಬೇಕಾ?' ಎಂಬ ಪ್ರಶ್ನೆ ಮೂಡುತ್ತದೆ.
ಗೆದ್ದು ಸೋತ ಕಾಂಗ್ರೆಸ್ !: ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದ್ದೇ ಅದಕ್ಕೆ ಮುಳುವಾಗುವ ಸಾಧ್ಯತೆಯಿದೆ. ಏಕೆಂದರೆ ವಿಧಾನಸಭೆ ಚುನಾವಣೆ ಆರಂಭಕ್ಕೂ ಮುನ್ನವೇ ಕಾಂಗ್ರೆಸ್ ಗೆದ್ದೇ ಬಿಟ್ಟಿದೆ ಎಂಬ ವಾತಾವರಣ ನಿರ್ಮಾಣಗೊಂಡುಬಿಟ್ಟು, ಆ ಪಕ್ಷವನ್ನು ಹೈರಾಣಗೊಳಿಸಿದೆ.
ಇದಕ್ಕೆ ವಿರುದ್ಧವಾಗಿ ಆಡಳಿತಾರೂಢ ಬಿಜೆಪಿ ತನ್ನ ಲೆಕ್ಕಾಚಾರ ತಪ್ಪಿ, ಕೊನೆಯ ಹಂತದಲ್ಲಿ ಸೂಕ್ತ ಅಭ್ಯರ್ಥಿಗಳನ್ನು ನಿಲ್ಲಿಸಲಾಗದೆ ಪರದಾಡುವಂತಹ ಪರಿಸ್ಥಿತಿ ಎದುರಿಸುವಂತಾಗಿದೆ. ಎರಡೂ ಸ್ವಯಂಕೃತಾಪರಾಧವೇ. ಆದರೆ ಈ ಪರಿಸ್ಥಿತಿಗೆ ಹೇತುವಾದ ಎನ್ನಬಹುದಾದ ಇತರೆ ಪಕ್ಷಗಳು ಸುಮ್ಮನೆ ಮಜಾ ತೆಗೆದುಕೊಳ್ಳುತ್ತಿವೆ. ಅದು ಕೆಜೆಪಿಯಾದರೂ ಆಗಿರಬಹುದು ಅಥವಾ ಜೆಡಿಎಸ್ ಆದರೂ ಅಷ್ಟೇ.
ಅಂಬರೀಷ್ ಆಟ ಸಮೂಹ ಸನ್ನಿಯಾಗಿ ಮಂಡ್ಯ, ಚಿಕ್ಕಬಳ್ಳಾಪುರ, ಬಳ್ಳಾರಿ, ಭದ್ರಾವತಿ, ದಾವಣಗೆರೆ, ಕಾಪು, ಹೆಬ್ಬಾಳ, ಬಸವನಗುಡಿ, ಮುಳಬಾಗಿಲು, ಕೆಆರ್ ಪುರಂ, ಚನ್ನಪಟ್ಟಣ ಮುಂತಾದ ಕಡೆಗಳಲ್ಲೂ ಹಬ್ಬಿದ್ದು ಈ ನಾಡಿನ ದೌರ್ಭಾಗ್ಯವೇ ಸರಿ.
ಜಸ್ಟ್, ನಾಮಿನೇಷನ್ ಹಂತದಲ್ಲೇ ಹಿಂಗೆ ಇನ್ನು ಮುಂದಿದೆ ಮಾರಿ ಹಬ್ಬವೆಂಬಂತೆ ಮುಂದಿನ ದಿನಗಳಲ್ಲಿ ಈ ನಾಡಿಗೆ ಏನು ಕಾದಿದೆಯೋ. ಪಕ್ಷಗಳ ಮಾದರಿಯಲ್ಲೇ ಮತದಾರ ಸಹ ಗೊಂದಲಕ್ಕೀಡಾಗಿ ಹಂಗಿನರಮನೆ ನಿರ್ಮಾಣವಾದರೆ, ತಾಯೆ ಭುವನೇಶ್ವರಿಯೇ ಕಾಪಾಡಬೇಕು ಕರುನಾಡನ್ನು. ಆದರೆ ಜಾಣ ಮತದಾರ ಹಾಗೆ ಮಾಡಲಾರ ಎಂಬ ಆಶಾಭಾವ ಬೇರೂರಿದೆ.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications