Get Updates
Get notified of breaking news, exclusive insights, and must-see stories!

ದೊಡ್ಡ ದೊಡ್ಡ ನಾಯಕರೆಲ್ಲ ಧೂಳೀಪಟ: ಭವಿಷ್ಯ

major-leaders-will-bite-dust-predicts-hs-doreswamy
ಬೆಂಗಳೂರು, ಏ. 15: ಪ್ರಚಲಿತ ರಾಜಕೀಯ ವಿದ್ಯಮಾನಗಳು, ಹಾಲಿ ರಾಜಕಾರಣಿಗಳಿಂದ ಬೇಸತ್ತಿರುವ ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್ಎಸ್ ದೊರೆಸ್ವಾಮಿ (96) ಅವರು ಭವಿಷ್ಯ ನುಡಿದಿದ್ದು, ರಾಜಕೀಯದಲ್ಲಿ 'ದೊಡ್ಡವರು' ಅನಿಸಿಕೊಂಡವರರು ಮುಂದಿನ ತಿಂಗಳು ರಾಜ್ಯ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಮಣ್ಣುಮುಕ್ಕಲಿದ್ದಾರೆ ಎಂದಿದ್ದಾರೆ.

'ರಾಜಕೀಯ ಪಕ್ಷಗಳಿಗೆ ದೇಶದ ಅಭಿವೃದ್ಧಿಗಿಂತ ಅಧಿಕಾರದ ದಾಹ ಹೆಚ್ಚಾಗಿದೆ. ಹಾಗಾಗಿ ಮತ್ತೆ ಇಂತಹ ಪರಿಸ್ಥಿತಿ ಉಂಟಾಗಲು ಯಾವುದೇ ಕಾರಣಕ್ಕೂ ಮತದಾರರು ಅವಕಾಶ ನೀಡಬಾರದು. ಮತದಾರಿಂದ ಏನೂ ಮಾಡಲು ಸಾಧ್ಯವಿಲ್ಲ ಎಂಬ ಭಾವನೆ ರಾಜಕಾರಣಿಗಳಲ್ಲಿದೆ. ಅವರಿಗೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು' ಎಂದು ಅವರು ತಿಳಿಯ ಹೇಳಿದರು.

ಡಾ. ಬಿಆರ್ ಅಂಬೇಡ್ಕರ್‌ ಅವರ 122ನೆ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ರಾಜಕೀಯ ಜಾಗೃತಿ ಸಮಾವೇಶವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು ಈ ಭವಿಷ್ಯ ಹೇಳಿದ್ದಾರೆ.

90ರ ಗಡಿ ದಾಟಿರುವ ದೊರೆಸ್ವಾಮಿ ಅವರ ಹಿರಿಯ ಸೋದರ ಎಚ್ಎಸ್ ಸೀತಾರಾಮ್ ಅವರೂ ಸ್ವಾತಂತ್ರ್ಯ ಹೋರಾಟಗಾರರೇ. ಸೀತಾರಾಮ್ ಅವರು 1950ರ ದಶಕದಲ್ಲಿ ಬೆಂಗಳೂರಿನ ಮೇಯರ್ ಆಗಿದ್ದರು. ಇವರ ಪುತ್ರ ಬೊನ್ಸಾಯ್ ಶ್ರೀನಿವಾಸ್.

'ಪ್ರಸಕ್ತದ ರಾಜಕೀಯ ಪರಿಸ್ಥಿತಿ ಹೊಲಸಾಗಿದೆ. ಅದನ್ನು ಸ್ವಚ್ಚಗೊಳಿಸುವ ಕಾರ್ಯ ನಡೆಯಬೇಕಾಗಿದೆ. ಈ ಚುನಾವಣೆ ಹೆಚ್ಚು ಕುತೂಹಲದಿಂದ ಕೂಡಿದ್ದು, ಬಹಳಷ್ಟು ಬದಲಾ ವಣೆಗಳಾಗುವ ನಿರೀಕ್ಷೆ ಇದೆ' ಎಂದು ಹಿರಿಯ ಚೇತನ ದೊರೆಸ್ವಾಮಿ ಅವರು ಅಭಿಪ್ರಾಯಪಟ್ಟರು.

ರಾಜಕೀಯ ಪಕ್ಷಗಳು ದಲಿತರನ್ನು ಕೇವಲ ಒಗ್ಗರಣೆಗೆ ಬಳಸುವ ಕರಿಬೇವಿನಂತೆ ಬಳಸುತ್ತಿದ್ದಾರೆ. ಆದುದರಿಂದ ರಾಜ್ಯದಲ್ಲಿನ ಎಲ್ಲ ದಲಿತ ಸಂಘಟನೆಗಳು ಒಂದೇ ವೇದಿಕೆಯಡಿ ಹೋರಾಟ ಮಾಡಿ ರಾಜಕಾರಣಿಗಳಿಗೆ ಬುದ್ಧಿ ಕಲಿಸಬೇಕು ಎಂದೂ ದೊರೆಸ್ವಾಮಿ ಆಶಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+