ಸದಾ Vs ಕಮಿಷನ್ ಉದಾಸಿ:ಕಾಡುವ ಪಂಚ ಪ್ರಶ್ನೆಗಳು
ಬೆಂಗಳೂರು, ಮಾ 26: ಲೋಕೋಪಯೋಗಿ ಇಲಾಖೆಗೆ ಸಂಬಂಧಪಟ್ಟ ಕಡತ ವಿಲೇವಾರಿಗೆ ಮತ್ತು ಅಧಿಕಾರಿಗಳ ವರ್ಗಾವಣೆಗೆ ಸಚಿವರಾಗಿದ್ದ ಸಿ ಎಂ ಉದಾಸಿ ಇಂತಿಷ್ಟು ಶೇಕಡಾವಾರು ಕಮಿಷನ್ ಪಡೆಯುತ್ತಿದ್ದರು ಎನ್ನುವ ಮಾಜಿ ಸಿಎಂ ಸದಾನಂದ ಗೌಡರ ಹೇಳಿಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ಮತ್ತು ಚರ್ಚೆಸೆ ಗ್ರಾಸವಾಗಿದೆ.
ಚುನಾವಣೆಯ ಹೊಸ್ತಿಲಲ್ಲಿ ಸದಾನಂದ ಗೌಡರ ಹೇಳಿಕೆ ಐದು ವರ್ಷ ಅಧಿಕಾರ ನಡೆಸಿದ ಬಿಜೆಪಿಯ ಭ್ರಷ್ಟಾಚಾರಕ್ಕೆ ಮತ್ತೊಂದು ಕಪ್ಪು ಚುಕ್ಕೆಯಾಗಿದೆ. ತಾನು ಸಿಂ ಆಗಿದ್ದಾಗ ಸಂಪುಟ ದರ್ಜೆ ಸಚಿವರಾಗಿದ್ದ ಉದಾಸಿ ಮಾಡುತ್ತಿದ್ದ ಕಮೀಷನ್ ವ್ಯವಹಾರ ತಡೆಗಟ್ಟಿದ್ದೆ.
ಅದಕ್ಕಾಗಿ ತಮ್ಮ ವಿರುದ್ದ ಯಡಿಯೂರಪ್ಪನವರ ಬಳಿ ಇಲ್ಲಸಲ್ಲದ್ದನ್ನು ಹೇಳಿ ತಾವು ಅಧಿಕಾರದಿಂದ ಕೆಳಗಿಳಿಯುವಂತೆ ಮಾಡಿದರು ಎಂದು ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಹಾವೇರಿಯಲ್ಲಿ ಉದಾಸಿ ಮೇಲೆ ಗುರುತರ ಆರೋಪ ಮಾಡಿದ್ದರು.
ಸದಾನಂದ ಗೌಡರು ಹತಾಸರಾಗಿ ನನ್ನ ವಿರುದ್ದ ಬೇಜಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಉತ್ತರ ಕರ್ನಾಟಕದ ಭಾಗದ ಐದು ಜನ ಶಾಸಕರು ಅಂದು ಸದಾನಂದ ಗೌಡರಿಗೆ ಬೆಂಬಲ ಸೂಚಿಸಿದ್ದರಿಂದ ಅವರು ಮುಖ್ಯಮಂತ್ರಿಯಾದರು ಎನ್ನುವ ಸತ್ಯವನ್ನು ಅವರು ಮರೆಯದಿರಲಿ ಎಂದು ಉದಾಸಿ ತಿರುಗೇಟು ನೀಡಿದ್ದಾರೆ.
ಇವರಿಬ್ಬರ ಆರೋಪ, ಪ್ರತ್ಯಾರೋಪದ ನಡುವೆ ಸಾರ್ವಜನಿಕರಿಗೆ ಕಾಡುವ ಐದು ಪ್ರಶ್ನೆಗಳು

ಐದು ಪ್ರಶ್ನೆಗಳು
ಗೌಡರೇ, ನೀವು ಸಿಎಂ ಆಗಿದ್ದಾಗ ಉದಾಸಿ ಕಮಿಷನ್ ಪಡೆಯುತ್ತಿದ್ದಾರೆ ಎನ್ನುವ ಸತ್ಯ ನಿಮಗೆ ತಿಳಿದಿದ್ದರೂ ಅವರನ್ನು ಸಂಪುಟದಿಂದ ಯಾಕೆ ಕೈಬಿಡಲಿಲ್ಲ?

ಐದು ಪ್ರಶ್ನೆಗಳು
ಗೌಡರೇ, ಭ್ರಷ್ಟಾಚಾರ ನಿಮ್ಮ ಕಣ್ಣು ಮುಂದೆ ನಡೆಯುತ್ತಿದ್ದರೂ ನೀವು ಅವರ ವಿರುದ್ದ ಕ್ರಮ ಕೈಗೊಳ್ಳದಿರುವುದು ಮುಖ್ಯಮಂತ್ರಿ ಸೀಟಿನಲ್ಲಿ ಇನ್ನೂ ಸ್ವಲ್ಪ ದಿನ ಮುಂದುವರಿಯುವ ದುರಾಸೆಯೇ?

ಐದು ಪ್ರಶ್ನೆಗಳು
ಉದಾಸಿಯವರೇ, ನಿಮ್ಮ ಭಾಗದ ಐದು ಮಂದಿ ಶಾಸಕರಿಂದ ಗೌಡರು ಸಿಎಂ ಆದರು, ಇಲ್ಲಾಂದ್ರೆ ಆಗುತ್ತಿರಲಿಲ್ಲ ಎನ್ನುವ ಹೇಳಿಕೆಯ ಹಿಂದಿನ ರಹಸ್ಯವೇನು? ನೀವು ಒಂದು ವೇಳೆ ಕಮಿಷನ್ ಪಡೆಯುವ ಗೌಡರ ಹೇಳಿಕೆ ನಿಜವಾಗಿದ್ದಲ್ಲಿ ಅದನ್ನು ನೋಡಿಯೂ ನೋಡದಂತೆ ಸದಾನಂದ ಗೌಡರು ಸುಮ್ಮನಿರಬೇಕಿತ್ತೇ?

ಐದು ಪ್ರಶ್ನೆಗಳು
ಗೌಡರೇ, ಉದಾಸಿ ಬಿಜೆಪಿ ತೊರೆದ ನಂತರ ನೀವು ಅವರ ಮೇಲೆ ಈ ಆರೋಪ ಮಾಡುತ್ತಿದ್ದೀರಿ. ಒಂದು ವೇಳೆ ಅವರು ಬಿಜೆಪಿಯಲ್ಲಿ ಮುಂದುವರಿದಿದ್ದರೆ ಈ ಕಮಿಷನ್ ಅವ್ಯವಹಾರದ ಬಗೆಗಿನ ನಿಮ್ಮ ಹೇಳಿಕೆ ಸಾರ್ವಜನಿಕ ವಾಗುತ್ತಿರಲಿಲ್ಲ. ಹೌದಲ್ಲವೇ?

ಐದು ಪ್ರಶ್ನೆಗಳು
ನೀವು ಅಧಿಕಾರ ನಡೆಸುತ್ತಿರುವುದು ಸಾರ್ವಜನಿಕರ ತೆರಿಗೆಯ ದುಡ್ಡಿನಲ್ಲಿ. ನಿಮ್ಮ ನಿಮ್ಮ ರಾಜಕೀಯ ಮೇಲಾಟಕ್ಕೆ ಸಾರ್ವಜನಿಕರ ದುಡ್ಡನ್ನು ಯಾಕೆ ಪೋಲು ಮಾಡುತ್ತೀರಾ? ಅವ್ಯವಹಾರ ನಡೆದರೂ ಅದನ್ನು ತಡೆಗಟ್ಟಲಾಗದಿದ್ದಾರೆ ನಿಮ್ಮಂತ: ಸರಕಾರ ಇದ್ದರೆಷ್ಟು ಬಿಟ್ಟರೆಷ್ಟು?
-
Oil Import: ತೈಲ ಆಮದಿಗೆ ವಿದೇಶಗಳ ಅನುಮತಿ ಬೇಕಿಲ್ಲ: ಭಾರತದ ಸ್ವತಂತ್ರ ಇಂಧನ ನೀತಿ ಹೊಂದಿದೆ -
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
Jacob Bethell: ಟೀಂ ಇಂಡಿಯಾ ವಿರುದ್ಧ ಸೋತರೂ ಕನ್ನಡಿಗರ ಮನಗೆದ್ದ 22 ವರ್ಷದ ಜೇಕಬ್ ಬೆಥೆಲ್ -
ರಕ್ಷಿತ್ ಶೆಟ್ಟಿ ಪೋಸ್ಟ್ ವೈರಲ್, ರಶ್ಮಿಕಾ ಮಂದಣ್ಣ ಬಗ್ಗೆ ಚರ್ಚೆ ಶುರು... Rashmika Mandanna -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
ಮೊಟ್ಟೆ ಬೆಲೆ ಭಾರಿ ಕುಸಿತ, ಕೋಟಿ ಕೋಟಿ ರೂಪಾಯಿ ಕಳೆದುಕೊಳ್ಳುತ್ತಿರುವ ರೈತರು... Operation Roaring Lion -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
Karnataka Property: ಇ-ಆಸ್ತಿ, ಏಕೀಕೃತ ಆಸ್ತಿ ತೆರಿಗೆ ಸಂಯೋಜನೆ: ಕರ್ನಾಟಕದಲ್ಲಿ ಆಸ್ತಿ ನಿರ್ವಹಣೆಗೆ ಹೊಸ ನಿಯಮ












Click it and Unblock the Notifications