Get Updates
Get notified of breaking news, exclusive insights, and must-see stories!

ಕಾವೇರಿ: ತಂಜಾವೂರು ರೈತರಿಂದ ಜಯಾಗೆ ಸನ್ಮಾನ

ಚೆನ್ನೈ, ಫೆ.28: ಟ್ರೈನ್ ಹೋದ ಮೇಲೆ ಟಿಕೆಟ್ ತೆಗೆದುಕೊಂಡ ಹಾಗೆ ಕರ್ನಾಟಕದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ದಿಲ್ಲಿಯಲ್ಲಿ ಠಿಕಾಣಿ ಹೂಡಿ ಕಾವೇರಿ ನ್ಯಾಯ ಮಂಡಳಿ ರಚಿಸಬೇಡಿ ಎಂದು ಅಲವತ್ತುಕೊಂಡಿರುವ ಸಂದರ್ಭದಲ್ಲೇ ಅತ್ತ ತಮಿಳುನಾಡಿನ...

ತಂಜಾವೂರು ಭಾಗದ ಕಾವೇರಿ ರೈತರು ತಮ್ಮ ಪಾಲಿನ ಅಧಿದೇವತೆ, ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಗೌರವಪೂರ್ವಕವಾಗಿ ಸನ್ಮಾನ ಮಾಡಲು ಸಿದ್ಧತೆ ನಡೆಸಿದ್ದಾರೆ.

Cauvery Tribunal award- Tanjavur farmers to felicitate Jayalalithaa on Mar 7,
ಕೇಂದ್ರ ಸರಕಾರದಿಂದ ಕಾವೇರಿ ನ್ಯಾಯ ಮಂಡಳಿ ಅಧಿಸೂಚನೆಯನ್ನು ಹೊರಡಿಸುವ ಮೂಲಕ ಕಳೆದ ವಾರ ತಮ್ಮ 65ನೇ ಹುಟ್ಟುಹಬ್ಬಕ್ಕೆ ಭರ್ಜರಿ ಕಾಣಿಕೆ ಪಡೆದಿದ್ದ ತಮಿಳ್ ಸೆಲ್ವಿ ಜಯಾರನ್ನು ಅಭಿನಂದಿಸಲು ಅಲ್ಲಿನ ರೈತರು ಮಾರ್ಚ್ 7ರಂದು ಸನ್ಮಾನ ಸಮಾರಂಭ ಆಯೋಜಿಸಿದ್ದಾರೆ.

ನಿನ್ನೆ, ಈ ಸಂಬಂಧ ಸಚಿವಾಲಯದಲ್ಲಿ ಮುಖ್ಯಮಂತ್ರಿ ಜಯಲಲಿತಾರನ್ನು ಭೇಟಿ ಮಾಡಿದ ರೈತರ ನಿಯೋಗವು ಸನ್ಮಾನವನ್ನು ಒಪ್ಪಿಸಿಕೊಳ್ಳುವಂತೆ ಜಯಾರನ್ನು ಕೋರಿದ್ದಾರೆ. ಕಾವೇರಿ ಅಧಿಸೂಚನೆಯನ್ನು ರಾಜಕೀಯ ಅಸ್ತ್ರವನ್ನಾಗಿಸಿಕೊಳ್ಳಲು ನಿರ್ಧರಿಸಿರುವ ಜಯಾ ಸಹ ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಕರ್ನಾಟಕದಿಂದ 'ವಿಪರೀತ' ಒತ್ತಡವಿದ್ದಾಗ್ಯೂ ಅಧಿಸೂಚನೆ ಕಾರ್ಯರೂಪಕ್ಕೆ ಬರುವಂತೆ ನೋಡಿಕೊಳ್ಳುವಲ್ಲಿ ಅಮ್ಮಾ ಜಯಾ ಯಶಸ್ವಿಯಾಗಿದ್ದಾರೆ ಎಂದು ತಂಜಾವೂರು ರೈತರು ತಮ್ಮ ಮುಖ್ಯಮಂತ್ರಿಯನ್ನು ಇಂದೇ ಕೊಂಡಾಡಿದ್ದಾರೆ. ಇನ್ನು, ಮಾರ್ಚ್ 7ರಂದು ಇವರು ತಮ್ಮ ಮುಖ್ಯಮಂತ್ರಿಯನ್ನು ಏನೆಲ್ಲಾ ಹಾಡಿಹೊಗಳುತ್ತಾರೋ ಕಾದುನೋಡಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+