ನಿತ್ಯಾನಂದ ಸ್ವಾಮಿಗೆ ಹೊಸ ಬಿರುದು ಬಾವಲಿ!

ಅಖಾಡದ ಕಾರ್ಯದರ್ಶಿ ಮಹಾಂತ ರವೀಂದ್ರ ಪುರಿ ಈ ವಿಷಯವನ್ನು ತಿಳಿಸಿದ್ದು, ಕುಂಭಮೇಳದಲ್ಲಿ ದಕ್ಷಿಣ ಭಾರತದವರನ್ನು ಕಡೆಗಣಿಸಲಾಗಿದೆ ಎಂಬ ಆರೋಪಗಳನ್ನು ಹೋಗಲಾಡಿಸಲು ನಿತ್ಯಾನಂದ ಸ್ವಾಮಿಗೆ ಬಿರುದು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ನಿತ್ಯಾನಂದ ಸ್ವಾಮಿಯ ವಿರುದ್ಧದ ಹಗರಣಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸ್ವಾಮಿಯ ಮೇಲಿನ ಆರೋಪಗಳು ವೈಯಕ್ತಿಕವಾದದು. ಅಖಾಡಕ್ಕೂ ಅದಕ್ಕೂ ಸಂಬಂಧವಿಲ್ಲ. ಅಖಾಡದಲ್ಲಿ ಪಾಲ್ಗೊಂಡಿದ್ದ ಸ್ವಾಮಿಗಳ ಒಪ್ಪಿಗೆ ಮೇರೆಗೆ ಮಹಾಮಂಡಲೇಶ್ವರ ಬಿರುದು ನೀಡಲಾಗಿದೆ ಎಂದು ಹೇಳಿದ್ದಾರೆ.
ಬಿಡದಿಯ ಧ್ಯಾನ ಪೀಠದ ನಿತ್ಯಾನಂದ ಸ್ವಾಮಿಯ ಮೇಲೆ ಅನೇಕ ಆರೋಪಗಳಿವೆ. ಆದ್ದರಿಂದ ಅವರು ಕುಂಭಮೇಳದಲ್ಲಿ ಪಾಲ್ಗೊಳ್ಳಬಾರದು ಎಂದು ಹಲವಾರು ಸಾಧು ಸಂತರು ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಯಾವ ವಿರೋಧಗಳನ್ನು ಲೆಕ್ಕಿಸದೆ ನಿತ್ಯಾನಂದ ಸ್ವಾಮಿ ಕುಂಭಮೇಳದಲ್ಲಿ ಪಾಲ್ಗೊಂಡು ಮೌನಿ ಅಮವಾಸ್ಯೆಯ ದಿನ ಗಂಗಾ, ಯಮುನಾ, ಸರಸ್ವತಿ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದರು.












Click it and Unblock the Notifications