ಚುನಾವಣೆ: ರೆಡ್ಡಿಗೆ ಬಿಡುಗಡೆ ಭಾಗ್ಯವಿಲ್ಲ, ಬಾಬುಗೂ ಕಂಟಕ

ಜಾಮೀನು ಕೋರಿ ಹೊರಬಂದು ಚುನಾವಣೆ ಪ್ರಚಾರದಲ್ಲಿ ಭಾಗವಹಿಸುವುದು ಮತ್ತು ಚುನಾವಣೆಗೆ ನಿಲ್ಲುವ ಬಗ್ಗೆಯೂ ಚಂಚಲಗೂಡ ಜೈಲಿನಿಂದಲೇ ಮಂತ್ರಾಲೋಚಿಸುತ್ತಿದ್ದ ಜನಾ ರೆಡ್ಡಿಗೆ ಜಾಮೀನು ಅತ್ಯಂತ ದುರ್ಲಭವಾಗುವ ಸಾಧ್ಯತೆಗಳು ಹೆಚ್ಚಾಗುತ್ತಿವೆ.
ರೆಡ್ಡಿಗೆ ಆತನ ಅತ್ಯಾಪ್ತ ಸಹಾಯಕ ಮೆಹಫೂಜ್ ಅಲಿ ಖಾನ್ ಸಮ ಮುಳುಗುನೀರು ತಂದಿಟ್ಟಿದ್ದಾನೆ. ಜನಾರ್ದನ ರೆಡ್ಡಿ ಗಣಿ ಅಕ್ರಮದಲ್ಲಿ ತನ್ನದು ಲವಲೇಶವೂ ಪಾತ್ರವಿಲ್ಲ. ತಾನು ಅಮಾಯಕ ಎಂದೇ ನಿರೂಪಿಸುತ್ತಾ ಬಂದಿದ್ದ ಅಲಿ ಖಾನ್ ವಿರುದ್ಧ ಹೈದರಾಬಾದ್ ಸಿಬಿಐನ ಕಿರಿಯ ಅಧಿಕಾರಿ ಎಂ ಆರ್ ಖಾನ್ ಖಡಕ್ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಇದು ರೆಡ್ಡಿಯನ್ನು ನೇರವಾಗಿ ಅಪರಾಧಿ ಸ್ಥಾನಕ್ಕೆ ಕೊಂಡೊಯ್ಯುವಂತಹುದು.
ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಹೀಗೆ 'ಹೆಚ್ಚುವರಿ' ಚಾರ್ಜ್ ಶೀಟ್ ಸಲ್ಲಿಸುವ ಕ್ರಮವನ್ನು ಜಾರಿಯಲ್ಲಿಟ್ಟಿರುವ ಸಿಬಿಐ, ರೆಡ್ಡಿಗೆ ಜಾಮೀನು ಸಿಗದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ.
ಅಷ್ಟೇ ಅಲ್ಲ. ಈಗ ಅಲಿ ಖಾನ್ ವಿರುದ್ಧ 'ಹೆಚ್ಚುವರಿ' ಚಾರ್ಜ್ ಶೀಟ್ ಸಲ್ಲಿಸಿದ್ದೂ ಅಲ್ಲದೆ, ಅದರಲ್ಲಿ ಅಲಿ ಖಾನನ ಇನ್ನೂ ಮೂರ್ನಾಲ್ಕು ಸ್ನೇಹಿತರನನ್ನು ಗುರುತಿಸಿ, ಅವರ ವಿಚಾರಣೆ ನಡೆಸಿ, ಅವರ ವಿರುದ್ಧವೂ ಚಾರ್ಜ್ ಶೀಟ್ ಸಲ್ಲಿಸಲು ಸಿಬಿಐ ರಣೋತ್ಸಾಹದಲ್ಲಿದೆ. ಹಾಗಾಗಿ, ರೆಡ್ಡಿಗೆ ಸದ್ಯಕ್ಕೆ ಬಿಡುಗಡೆಯ ಭಾಗ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
ಕುತೂಹಲಕಾರಿಯೆಂದರೆ ಮೆಹಫೂಜ್ ಅಲಿ ಖಾನ್ ಕಂಪ್ಲಿ ಶಾಸಕ ಸುರೇಶ ಬಾಬುಗೆ ಇಂಜಿನಿಯರಿಂಗ್ ಕ್ಲಾಸ್ ಮೇಟ್. ಹಾಗಾಗಿ ರೆಡ್ಡಿ- ಅಲಿ ಖಾನ್ ಮುಲಾಖಾತ್ ಗೆ ನೀರೆರೆದಿದ್ದೇ ಕಂಪ್ಲಿ ಸುರೇಶ್. ಹಾಗಾಗಿ ಚುನಾವಣೆ ಉತ್ಸಾಹದಲ್ಲಿರುವ ಸುರೇಶ ಬಾಬುವಿಗೂ ಈಗ ಸಿಬಿಐ ಕಾಟ ಶುರುವಾಗಿದೆ.
-
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
Hardik vs Krunal: ತಮ್ಮ ಹಾರ್ದಿಕ್ ವಿಕೆಟ್ ಕಿತ್ತ ಬೌಲರ್ಗಿಂತ ಹೆಚ್ಚಾಗಿ ಸಂಭ್ರಮಿಸಿದ ಕೃನಾಲ್ ಪಾಂಡ್ಯ, ಭಾರಿ ವೈರಲ್ -
Namma Metro: ಪ್ರಯಾಣಿಕರಿಗೆ ಸಿಹಿ ಸುದ್ದಿ, ಹಳದಿ ಮಾರ್ಗಕ್ಕಾಗಿ ಬಂತು ಹೊಸ ಡ್ರೈವರ್ ಲೆಸ್ ರೈಲು












Click it and Unblock the Notifications