ಕ್ರೂರ ದುರಂತ: ಅಮಾಯಕ ಮಗ ಸಾವು

ಹಾಗೆಂದೇ ಗುರುವಾರ ರಾತ್ರಿ 7.30ರಲ್ಲಿ ಅಮ್ಮನಿಗೆ ಟೀ ಮಾಡಿಕೊಡೋಣವೆಂದು ಪಂಪ್ ಸ್ಟವ್ ಹಚ್ಚಿದ್ದಾನೆ. ಅದೇನಾಯಿತೋ ಸ್ಟವ್ ಸಿಡಿದಿದೆ. ಪಕ್ಕದಲ್ಲೇ ಇದ್ದ ಸೀಮೆಎಣ್ಣೆ ಡಬ್ಬಕ್ಕೂ ಬೆಂಕಿ ತಾಕಿದೆ. ಆ ಪುಟ್ಟ ಕೋಣೆಯಲ್ಲಿ ಅಗ್ನಿಜ್ವಾಲೆಗಳು ಹರಡಿವೆ. ಅದರಲ್ಲಿ ಮಗು ಬೆಂದು ಹೋಗಿದೆ. ಕಮಲಾ ನಗರದ 3ನೇ ಕ್ರಾಸಿನಲ್ಲಿ ಈ ಕ್ರೂರ ದುರಂತ ಸಂಭವಿಸಿದೆ.
ಬುದ್ಧಿಮಾಂದ್ಯ ಅಮ್ಮನಿಗೆ, ಕಣ್ಣೆದುರೇ ತನ್ನ ಮಗನಿಗೆ ಏನಾಗುತ್ತಿದೆ ಎಂಬುದರ ಪರಿವೆಯೂ ಇಲ್ಲ. ಬೆಂಕಿ-ಹೊಗೆಯನ್ನು ಕಂಡು ಹೌಹಾರಿದ ಸುತ್ತಮುತ್ತಲ ಜನ ಬಂದು ಬೆಂಕಿಗೆ ಸಿಲುಕಿ ಒದ್ದಾಡುತ್ತಿದ್ದ ಮಗುವನ್ನು ರಕ್ಷಿಸಿ, ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಶೇ. 80ರಷ್ಟು ಸಂಪೂರ್ಣವಾಗಿ ಸುಟ್ಟುಹೋಗಿದ್ದ ಮಗು ಹೆಚ್ಚು ಕಾಲ ಉರಿಯನ್ನು ತಾಳಲಾರದೆ ಅಸುನೀಗಿದೆ.
ಮೃತ ದುರ್ದೈವಿಯ ಹೆಸರು ಚಂದನ್. ಅವನು 5ನೇ ಕ್ಲಾಸಿನಲ್ಲೂ ಓದುತ್ತಿದ್ದ. ಅವರಪ್ಪ ಚಂದ್ರಶೇಖರ್ ಖಾಸಗಿ ಕಂಪನಿಯಲ್ಲಿ ಸೆಕ್ಯುರಿಟಿ ಸೇವೆಯಲ್ಲಿದ್ದಾರೆ. ಮೂಲತಃ ಬಳ್ಳಾರಿಯವರು. 'ಚಂದನದ' ಬದುಕು ರೂಪಿಸೋಣ ಅಂತ ಬುದ್ಧಿಮಾಂದ್ಯ ಪತ್ನಿಯೊಂದಿಗೆ ಊರುಬಿಟ್ಟು ಬಂದಿದ್ದರು. ಆದರೆ ಇದೀಗ ಅವರ ಜೀವನದ ಗುರಿಯಾಗಿದ್ದ ಮಗುವೇ ಅವರನ್ನು ಬಿಟ್ಟುಹೋಗಿದ್ದಾನೆ. ಬಸವೇಶ್ವರ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications