ಯಡಿಯೂರಪ್ಪ ಗುರುವಾರದ ಸುದ್ದಿಗೋಷ್ಠಿ ವಿವರಗಳು

KJP President BS Yeddyurappa Press meet
ಬೆಂಗಳೂರು, ಜ.24: ಬಿಜೆಪಿ vs ಕೆಜೆಪಿ ಸಮರದಲ್ಲಿ ಬುಧವಾರ ಭರ್ಜರಿ ಹೆಜ್ಜೆ ಇಟ್ಟ ನಂತರ ಮೊದಲ ಬಾರಿಗೆ ಕೆಜೆಪಿ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಗುರುವಾರ(ಜ.24) ಮಲ್ಲೇಶ್ವರಂನ ಕೆಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು.

ಕರ್ನಾಟಕ ಜನತಾ ಪಕ್ಷಕ್ಕೆ ಯಾರು ಯಾರು ಸೇರಲಿದ್ದಾರೆ. ಬಿಜೆಪಿ ಸೇರಿದಂತೆ ಕಾಂಗ್ರೆಸ್, ಜೆಡಿಎಸ್ ನಿಂದ ಕೆಜೆಪಿಗೆ ಯಾರು ಯಾರು ಬರಲಿದ್ದಾರೆ ಎಂಬುದರ ಬಗ್ಗೆ ಸ್ಥೂಲವಾಗಿ ಬಿಎಸ್ ಯಡಿಯೂರಪ್ಪ ವಿವರಿಸಿದರು.

ಸುದ್ದಿಗೋಷ್ಠಿ ಮುಖ್ಯಾಂಶಗಳು ಇಂತಿದೆ:

* ಇಬ್ಬರು ಸಚಿವರು, 13 ಶಾಸಕರು ನಿನ್ನೆ ರಾಜೀನಾಮೆ ನೀಡಿದ್ದಾರೆ. ಇನ್ನಷ್ಟು ಸಚಿವರು ರಾಜೀನಾಮೆ ನೀಡುತ್ತಾರೆ.
* ಸ್ಪೀಕರ್ ಜ.28ಕ್ಕೆ ಬರುತ್ತಾರಂತೆ, ನಾಳೆ ಬಂದರೆ ನಾಳೆಯೇ ನಮ್ಮ ಶಾಸಕರು ರಾಜೀನಾಮೆ ನೀಡುತ್ತಾರೆ.
* ಸುನೀಲ್ ವಲ್ಯಾಪುರೆ ರಾಜೀನಾಮೆ ನೀಡುತ್ತಾರೆ. ಮುಕುಡಪ್ಪ ಕೆಜೆಪಿ ಸೇರುತ್ತಾರೆ.
* ಜನವರಿ ಮುಗಿದಿಲ್ಲ. ಈಗಾಗಲೇ ಕುಡಿಯುವ ನೀರಿನ ಹಾಹಾಕಾರ ಎದ್ದಿದೆ. ಸರ್ಕಾರ ಗಮನ ಹರಿಸುತ್ತಿಲ್ಲ.
* ಬಜೆಟ್ ಮಂಡನೆ ತಡೆಯುವುದು ನಮ್ಮ ಉದ್ದೇಶವಲ್ಲ. ಸರ್ಕಾರ ಬೀಳಿಸಲು ಯತ್ನಿಸುತ್ತಿಲ್ಲ.
* ಜಗದೀಶ್ ಶೆಟ್ಟರ್ ಸರ್ಕಾರಕ್ಕೆ ಬಹುಮತ ಇಲ್ಲ ಎಂದು ಸಾಮಾನ್ಯ ಜನರನ್ನು ಕೇಳಿದರೂ ಹೇಳುತ್ತಾರೆ.
* ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಗಳು ವಾಸ್ತವಾಂಶವನ್ನು ಅರ್ಥಮಾಡಿಕೊಂಡು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ, ಜನರು ತಮಗೆ ಬೇಕಾದ ಸರ್ಕಾರ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಬೇಕು.
* ಸದ್ಯದಲ್ಲೇ ಕೆಜೆಪಿ ಸಂಸದೀಯ ಮಂಡಳಿ ರಚಿಸಲಾಗಿದೆ.
* ಚಿತ್ರದುರ್ಗದ ಹಿಂದುಳಿದ ವರ್ಗಕ್ಕೆ ಸೇರಿದ ಮಹಿಳೆಯೊಬ್ಬರು ಪಕ್ಷ ಸೇರುತ್ತಿದ್ದಾರೆ. ಅವರಿಗೆ ಅಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಲಾಗುತ್ತೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+