ಜೆಸಿಂತಾ ಬರೆದ 3 ಮರಣಪತ್ರಗಳಲ್ಲಿ ಏನಿದೆ?

ಗಾರ್ಡಿಯನ್ ಪತ್ರಿಕೆ ಬಹಿರಂಗ ಪಡಿಸಿದ ಮರಣಪತ್ರದ ವಿವರಗಳು ಕೆಳಗಿನಂತಿವೆ.
* ಮೊದಲ ಮರಣಪತ್ರದಲ್ಲಿ, ಕುಚೋದ್ಯ ಮಾಡಿ ಅವರ ಸಾವಿಗೆ ಕಾರಣರಾದ ಆಸ್ಟ್ರೇಲಿಯಾದ ಡಿಜೆಗಳಾದ ಮೆಲ್ ಗ್ರೇಗ್ ಮತ್ತು ಮೈಕೆಲ್ ಕ್ರಿಸ್ಚಿಯನ್ ಅವರನ್ನು ಜೆಸಿಂತಾ ತರಾಟೆಗೆ ತೆಗೆದುಕೊಂಡಿದ್ದಾರೆ. ತಾವು ಇಂಗ್ಲೆಂಡ್ ರಾಣಿ ಎರಡನೇ ಎಲಿಜಬೆತ್ ಮತ್ತು ಪ್ರಿನ್ಸ್ ಚಾರ್ಲ್ಸ್ ಎಂದು ಹೇಳಿಕೊಂಡು ಕರೆ ಮಾಡಿ ಕೇಟ್ಳ ಎಲ್ಲ ಖಾಸಗಿ ವಿವರಗಳನ್ನು ಇವರಿಬ್ಬರು ಪಡೆದುಕೊಂಡಿದ್ದರು. ಆ ಕರೆಯನ್ನು ಕೇಟ್ ಜೊತೆಗಿದ್ದ ನರ್ಸ್ಗೆ ವರ್ಗಾಯಿಸಿದ್ದು ಜೆಸಿಂತಾ.
* ಎರಡನೇ ಮರಣಪತ್ರದಲ್ಲಿ, ತಾವು ನಿಧನರಾದ ಮೇಲೆ ಅಂತಿಮ ಸಂಸ್ಕಾರವನ್ನು ಯಾವ ರೀತಿ ಮಾಡಬೇಕು ಎಂಬ ವಿವರಗಳನ್ನು ಬರೆದಿಟ್ಟಿದ್ದರು. ಅವರ ಇಚ್ಛೆಯಂತೆ ಅಂತಿಮ ಸಂಸ್ಕಾರ ಅವರ ತವರೂರಾದ ಉಡುಪಿ ಜಿಲ್ಲೆಯ ಶಿರ್ವದಲ್ಲಿ ನಡೆಯುವ ಸಾಧ್ಯತೆಯಿದೆ.
* ಮೂರನೇ ಮರಣಪತ್ರದಲ್ಲಿ, ತಾವು ಕೆಲಸ ಮಾಡುತ್ತಿದ್ದ 7ನೇ ಕಿಂಗ್ ಎಡ್ವರ್ಡ್ ಆಸ್ಪತ್ರೆಯ ಸಿಬ್ಬಂದಿಗಳನ್ನು ಜೆಸಿಂತಾ ದೂಷಿಸಿದ್ದಾರೆ. ಕರೆ ಸ್ವೀಕರಿಸಿ ವರ್ಗಾಯಿಸಿದ್ದರಲ್ಲಿ ತಮ್ಮದೇನೂ ತಪ್ಪಿರಲಿಲ್ಲ. ಆದರೆ, ಕೇಟ್ಳ ಎಲ್ಲ ಖಾಸಗಿ ವಿವರಗಳನ್ನು ನೀಡಬಾರದಿತ್ತು ಎಂದು ಅವರು ಹೇಳಿದ್ದಾರೆ. ಹಾಗೆಯೆ, ಆಸ್ಪತ್ರೆಯ ಹಿರಿಯ ಅಧಿಕಾರಿಗಳು ತಮ್ಮನ್ನು ನಡೆಸಿಕೊಂಡ ರೀತಿಯ ಬಗ್ಗೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸದ್ಯಕ್ಕೆ ಇಷ್ಟು ವಿವರಗಳು ಮಾತ್ರ ಲಭ್ಯವಿವೆ. ತಲ್ಲಣಗೊಳಿಸಿದ ಈ ಪ್ರಕರಣದ ತನಿಖೆಯನ್ನು ಸ್ಕಾಟ್ಲೆಂಡ್ ಪೊಲೀಸರು ಇನ್ನೂ ನಡೆಸುತ್ತಿದ್ದಾರೆ. ಆದರೆ, ಮರಣಪತ್ರದಲ್ಲಿರುವ ವಿವರಗಳನ್ನು ನೋಡಿ ಜೆಸಿಂತಾ ಕುಟುಂಬದವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಚೋದ್ಯ ಮಾಡಿದ ನಂತರ ಮತ್ತು ಆಕೆಯ ಸಾವಿಗೆ ಮುನ್ನ ಏನೇನು ನಡೆಯಿತು ಎಂಬುದರ ಕುರಿತು ಪೂರ್ಣ ತನಿಖೆ ನಡೆಸಬೇಕೆಂದು ಜೆಸಿಂತಾ ಗಂಡ ಆಗ್ರಹಿಸಿದ್ದಾರೆ. ಎಲ್ಲ ಸತ್ಯ ಹೊರಬರಬೇಕೆಂದು ಒತ್ತಾಯಿಸಿದ್ದಾರೆ.
ಭಾರತಕ್ಕೆ ಜೆಸಿಂತಾ ಶವ : ಜೆಟ್ ಏರ್ವೇಸ್ ಮುಖಾಂತರ ಜೆಸಿಂತಾ ಶವವನ್ನು ಭಾರತಕ್ಕೆ ತರಲಾಗುತ್ತಿದೆ. ಶನಿವಾರ ಬೆಳಗಿನ ಜಾವ 3 ಗಂಟೆಗೆ ಮುಂಬೈಗೆ ಬರಲಿದ್ದು, ಡಿ.16ರಂದು ವಿಮಾನದ ಮೂಲಕ ಮಂಗಳೂರಿಗೆ ಬರಲಿದ್ದು, ಶಿರ್ವದಲ್ಲಿ ಅಂದು ಶವಸಂಸ್ಕಾರ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion












Click it and Unblock the Notifications