ಟಿಕೆಟ್ ಕೇಳಿದ ರೈಲ್ವೆ ಇನ್ಸ್‌ಪೆಕ್ಟರಿಗೆ ಗುಂಡಿಕ್ಕಿ ಹತ್ಯೆ

railway-ticket-inspector-shot-dead-mahananda-express
ಲಖ್ನೋ, ಡಿ.1: ಉತ್ತರ ಭಾರತದ ರೈಲ್ವೆಯಲ್ಲಿ ಉದ್ಯೋಗ ಮಾಡುವುದು ಯಮಸದೃಶ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ರೈಲ್ವೆ ಪ್ರಯಾಣದ ಟಿಕೆಟ್ ಎಲ್ಲಪ್ಪಾ? ಎಂದು ಟಿಕೆಟ್ ಇನ್ಸ್‌ಪೆಕ್ಟರ್ ಕೇಳಿದ್ದೇ ಮಹಾಪರಾಧವಾಗಿ, ದುಷ್ಕರ್ಮಿ ಪ್ರಯಾಣಿಕರು ಅವರ ಹೊಟ್ಟೆಗೆ ಗುಂಡಿಟ್ಟು ಸಾಯಿಸಿಬಿಟ್ಟಿದ್ದಾರೆ.

ದೆಹಲಿಯತ್ತ ಹೊರಟಿದ್ದ ಮಹಾನಂದ ಎಕ್ಸ್ ಪ್ರೆಸ್ ರೈಲಿನಲ್ಲಿ ಶುಕ್ರವಾರ ಈ ದುರ್ಘಟನೆ ನಡೆದಿದೆ. ಪಾತಕಿಗಳು ಹತ್ಯೆಯ ನಂತರ ಪರಾರಿಯಾಗಿದ್ದಾರೆ.

ಖಿಫಾಯತುಲ್ಲಾ ಮೃತ ದುರ್ದೈವಿ. ಇವರು ಉತ್ತರಪ್ರದೇಶದ ಮೊರಾದಾಬಾದಿನವರು. ಷಹೀಬಾಬಾದ್ ಸ್ಟೇಷನ್ ಬಳಿ ಈ ಹತ್ಯೆ ನಡೆದಿದೆ. ಗುಂಡೇಟು ತಿಂದ ಮುಖ್ಯ ಟಿಕೆಟ್ ಇನ್ಸ್‌ಪೆಕ್ಟರ್ ಖಿಫಾಯತುಲ್ಲಾ ಅವರನ್ನು ಗುರು ತೇಜ್ ಬಹದ್ದೂರ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅತೀವ ರಕ್ತಸ್ರಾವದಿಂದ ಅವರು ಅಸುನೀಗಿದರು.

ದುಷ್ಕರ್ಮಿಗಳು ಅಧಿಕಾರಿಗೆ ಗುಂಡೇಟು ಹೊಡೆಯುತ್ತಿದ್ದಂತೆ ಆಘಾತಕ್ಕೊಳಗಾದ ಇತರೆ ಪ್ರಯಾಣಿಕರು ರೈಲಿನ ತುರ್ತು ನಿಲುಗಡೆ ಚೈನ್ ಎಳೆದು ರೈಲನ್ನು ನಿಲ್ಲಿಸಿದರು. ಅದರ ಸದುಪಯೋಗಪಡಿಸಿಕೊಂಡ ದುಷ್ಕರ್ಮಿಗಳು ರೈಲಿಳಿದು ಪರಾರಿಯಾಗಿದ್ದಾರೆ ಎಂದು ರೈಲ್ವೆ ಪೊಲೀಸರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+