ಎರಡು ಅಡುಗೆಮನೆಯಿದ್ದರೆ ಎಲ್ಪಿಜಿ ಸಿಲಿಂಡರ್ ಹನ್ನೆರಡು

ಖುಷಿಯಿಂದ ಕುಣಿದಾಡುವ ಮುನ್ನ ಕೆಲ ನಿಬಂಧನೆಗಳಿವೆ. ಆ ಕಂಡಿಷನ್ಗಳನ್ನು ಪೂರೈಸಿದರೆ, ಎರಡು ಗ್ಯಾಸ್ ಸಂಪರ್ಕಗಳು ಮತ್ತು ವರ್ಷಕ್ಕೆ ಹನ್ನೆರಡು ಸಿಲಿಂಡರ್ ನಿಮಗೆ ಸಿಗೋದು ಗ್ಯಾರಂಟಿ. ಆ ನಿಬಂಧನೆಗಳೇನೆಂದರೆ,
* ನಿಮಗೆ ಮದುವೆಯಾಗಿರಬೇಕು ಮತ್ತು ಪಾಲಕರೊಂದಿಗೆ ವಾಸಿಸುತ್ತಿರಬೇಕು.
* ಮನೆಯಲ್ಲಿ ಎರಡು ಅಡುಗೆಮನೆಗಳಿರಬೇಕು.
ಆದರೆ, ಒಂದು ಮನೆಗೆ ಒಂದೇ ಎಲ್ಪಿಜಿ ಕನೆಕ್ಷನ್ ಇರುವಾಗ ಇದು ಹೇಗೆ ಸಾಧ್ಯ ಎಂದು ಜನರು ಚಿಂತಿಸುತ್ತಿದ್ದರೆ, ಅದಕ್ಕೂ ಇಲ್ಲಿ ಉತ್ತರವಿದೆ. ಒಂದೇ ಸೂರಿನಡಿ ಎರಡು ಅಡುಗೆಮನೆಗಳಿದ್ದು ಎರಡೂ ಕಡೆಗಳಲ್ಲಿ ಕುಕ್ಕರ್ ಶೀಟಿ ಹೊಡೆಯುತ್ತಿದೆ ಎಂದು ಮನವರಿಕೆ ಮಾಡಿಕೊಟ್ಟರೆ ತೈಲ ಕಂಪನಿಗಳು, 'ಒಂದು ಮನೆಗೆ ಒಂದೇ ಅನಿಲ ಕನೆಕ್ಷನ್' ಎಂಬ ನಿಯಮವನ್ನು ತಿದ್ದುಪಡಿ ಮಾಡಲು ನಿರ್ಧರಿಸಿವೆ.
ಒಂದು ಮನೆಯಲ್ಲಿ ಇಬ್ಬಿಬ್ಬರ ಹೆಸರಲ್ಲಿ ಇನ್ನೂ ಕೂಡ ಸಾವಿರಾರು ಜನರು ಎಲ್ಪಿಜಿ ಕನೆಕ್ಷನ್ಗಳನ್ನು ಪಡೆದಿದ್ದಾರೆ. ಅಂಥವರಿಗೆ ಇದು ವರದಾನವಾಗಿ ಸಿಗಲಿದೆ. ಅಡುಗೆ ಮಾಡಲಿಕ್ಕಾಗಿ ಎರಡು ಅಡುಗೆಮನೆಗಳನ್ನು ನಿರ್ವಹಿಸುತ್ತಲಾಗುತ್ತಿದೆ ಎಂದು ಖುದ್ದಾಗಿ ಬಂದು ತೈಲ ಕಂಪನಿಗಳ ಅಧಿಕಾರಿಗಳು ಖಚಿತಪಡಿಸಿಕೊಂಡನಂತರವೇ ಸಿಲಿಂಡರ್ ಸಂಖ್ಯೆಯನ್ನು ದ್ವಿಗುಣಗೊಳಿಸಲಾಗುವುದು.
ಇಂದಿಗೂ ನಮ್ಮ ಭಾರತದಲ್ಲಿ ಅಪ್ಪ ಅಮ್ಮಂದಿರು ಮಕ್ಕಳು ಸೊಸೆ ಮೊಮ್ಮಕ್ಕಳೊಂದಿಗೆ ಜಂಟಿಯಾಗಿ ಜೀವಿಸುತ್ತಿದ್ದಾರೆ. ಒಟ್ಟಾಗಿಯೇ ಅಡುಗೆ ಮಾಡುತ್ತಾರೆ, ಒಟ್ಟಾಗಿಯೇ ಕುಳಿತು ಊಟ ಮಾಡುತ್ತಾರೆ. ಆದರೆ, ತಿಂಗಳಿಗೆ ಮುಗಿದುಹೋಗುವ ಸಿಲಿಂಡರಿಂದಾಗಿ ಜೀವನ ನಡೆಸುವುದು ಬಲು ಕಷ್ಟವಾಗಿದೆ. ಹೆಚ್ಚು ದುಡ್ಡು ಕೊಟ್ಟು ಸಿಲಿಂಡರ್ ಪಡೆದುಕೊಳ್ಳಬೇಕಾಗಿದೆ. ಆದರೆ, ಈ ಹೊಸ ನಿಯಮದ ಪ್ರಕಾರ, ಜಂಟಿಯಾಗಿ ಕುಟುಂಬ ನಿರ್ವಹಿಸುತ್ತಿದ್ದರೂ, ಇನ್ನೂ ಆರು ಎಲ್ಪಿಜಿ ಸಿಲಿಂಡರ್ ಬೇಕೆಂದರೆ ಮನೆಯಲ್ಲಿ ಎರಡು ಅಡುಗೆಮನೆ ಇದೆ ಎಂದು ತೋರಿಸಲೇಬೇಕು. ಬಲವಂತವಾಗಿಯಾದರೂ ಜಂಟಿ ಸಂಸಾರವನ್ನು ಒಡೆಯಲೇಬೇಕು!
-
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್












Click it and Unblock the Notifications