ಯಲಹಂಕದಲ್ಲಿ ವಿಶ್ವೇಶ್ವರಯ್ಯ vs ಬಸವೇಶ್ವರ ಸಮರ

ಅದರಂತೆ ಯಲಹಂಕ ಉಪನಗರ 3ನೇ 'ಎ' ಮುಖ್ಯರಸ್ತೆ, 11ನೇ 'ಎ' ಅಡ್ಡರಸ್ತೆ ಹಾಗೂ 12ನೇ 'ಎ' ಅಡ್ಡರಸ್ತೆ ನಡುವಿನ ಉದ್ಯಾನಕ್ಕೆ 'ವಿಶ್ವಗುರು ಬಸವಣ್ಣನವರ ಉದ್ಯಾನವನ' ಎಂದು ನಾಮಕರಣ ಮಾಡಲು ನಿರ್ಧರಿಸಲಾಗಿದೆ ಇದಕ್ಕೆ ಆಕ್ಷೇಪಣೆ ಇದ್ದರೆ ಸಲ್ಲಿಸಬಹುದು ಎಂದು ಬಿಬಿಎಂಪಿ ಸೆ.26,2012ರಂದು ಪ್ರಕಟಣೆ ನೀಡಿತ್ತು.
ಇದಕ್ಕೆ ಪ್ರತಿಕ್ರಿಯಿಸಿದ್ದ ಸ್ಥಳೀಯರು, ಉದ್ಯಾನವನವಕ್ಕೆ ವಿಶ್ವಗುರು ಬಸವಣ್ಣ ಹೆಸರಿಡಲು ಆಕ್ಷೇಪ ವ್ಯಕ್ತಪಡಿಸಿದ್ದರು. ಚಿಕ್ಕಬಳ್ಳಾಪುರ ಬಳಿಯ ಮುದ್ದೇನಹಳ್ಳಿ ಜನಿಸಿದ ವಿಶ್ವಖ್ಯಾತ ಇಂಜಿನಿಯರ್ ಸರ್ ಎಂ ವಿಶ್ವೇಶ್ವರಯ್ಯ ಅವರ ಹೆಸರಿಡುವಂತೆ ಸ್ಥಳೀಯ ನಾಗರೀಕರು ಮನವಿ ಸಲ್ಲಿಸಿದ್ದರು. ಬಿಬಿಎಂಪಿ ಕೂಡಾ ಆಕ್ಷೇಪಣೆಗೆ ಸ್ಪಂದಿಸಿತ್ತು.
ಆದರೆ,ಈಗ ಉದ್ಯಾನವನಕ್ಕೆ ವಿಶ್ವಗುರು ಬಸವೇಶ್ವರ ಅವರ ಹೆಸರನ್ನು ಇಟ್ಟು ಆ.15 ರಂದು ತರಾತುರಿಯಲ್ಲಿ ಬಸವೇಶ್ವರ ಪುತ್ಠಳಿ ಅನಾವರಣಗೊಳಿಸಿರುವ ವೀರಶೈವ ಈಶ್ವರ ಸೇವಾ ಸಮಿತಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಬಸವಣ್ಣನವರ ಹೆಸರನ್ನು ಇಡಲು ಆಕ್ಷೇಪಣೆ ಸಲ್ಲಿಸಲಾಗಿದ್ದರೂ ಅನುಮತಿ ಇಲ್ಲದೆ ಈ ರೀತಿ ಒತ್ತುವರಿ ಮಾಡಿರುವುದು ಸ್ಥಳೀಯರನ್ನು ಕೆರಳಿಸಿದೆ.
ಅಸಲಿಗೆ ಸಮಸ್ಯೆ ಏನು?: ಯಲಹಂಕದಲ್ಲಿ ಸುಮಾರು 50 ಪಾರ್ಕ್ ಗಳಿದೆ. ರಾಜೀವ್ ಗಾಂಧಿ, ಸುಭಾಶ್ ಚಂದ್ರ ಬೋಸ್, ಶಂಕರ್ ನಾಗ್ ಮುಂತಾದವರ ಹೆಸರಲ್ಲದೆ ಬಸವಣ್ಣನವರ ಹೆಸರಿನಲ್ಲಿ 4ನೇ ಹಂತದಲ್ಲಿ ಒಂದು ಪಾರ್ಕ್ ಇದೆ. 1989ರಿಂದ ಅದೇ ಹೆಸರಿನಲ್ಲಿ ಅನಧಿಕೃತವಾಗಿ ಕರೆಯಲ್ಪಡುತ್ತಿದೆ.
* ಈಶ್ವರ ಸೇವಾ ಸಮಿತಿ ಬಿಬಿಎಂಪಿ ನಿಮಯಗಳನ್ನು ಪಾಲಿಸಿಲ್ಲ. ಅಲ್ಲದೆ ಬಸವಣ್ಣನವರ ಪುತ್ಥಳಿ ಈಗಾಗಲೇ ಆಗಸ್ಟ್ 15, 2012ರಂದು ಸ್ಥಾಪಿಸಲಾಗಿದೆ.
* ಈಗ ಪಾರ್ಕಿಗೆ ಹೊಸದಾಗಿ ನಾಮಕರಣ ಹಾಗೂ ಪುತ್ಥಳಿ ಅನಾವರಣ ಮಾಡಿದರೆ ಸರ್ಕಾರದ ಆದೇಶದ ಉಲ್ಲಂಘನೆಯಾಗಲಿದೆ.
* ಬಸವಣ್ಣನವರ ಹೆಸರನ್ನು ಮುಂದಿಟ್ಟುಕೊಂಡು ಈಶ್ವರ ಸೇವಾ ಸಮಿತಿ ತನ್ನ ವಿದ್ಯಾಸಂಸ್ಥೆಗಾಗಿ ಜಾಗವನ್ನು ಆಕ್ರಮಿಸಲು ಹುನ್ನಾರ ಹೂಡಿರುವ ಶಂಕೆ ವ್ಯಕ್ತವಾಗಿದೆ.
ಹೀಗಾಗಿ ಪಾರ್ಕಿಗೆ ಬಸವಣ್ಣ ಅವರ ಹೆಸರನ್ನು ಇಟ್ಟಿರುವುದನ್ನು ಬದಲಿಸಿ ವಿಶ್ವೇಶ್ವರಯ್ಯ ಅವರ ಹೆಸರನ್ನು ಬಿಬಿಎಂಪಿ ಇಡಬೇಕು ಎಂದು ಒಂದು ವರ್ಗ ಒತ್ತಾಯಿಸಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications