ಭಾರತಕ್ಕೂ ಬಂತು ಗೂಗಲ್ ಉಚಿತ ಎಸ್ಎಂಎಸ್

ಗೂಗಲ್ ಎಸ್ ಎಂಎಸ್ ಇರುವಾಗ ಇದು ಯಾವುದು ಹೊಸ ಎಸ್ ಎಂಎಸ್ ವ್ಯವಸ್ಥೆ ಎಂದು ಗೂಗಲ್ ಬಳಕೆದಾರರು ತಲೆ ಕೆಡಿಸಿಕೊಳ್ಳಬೇಕಿಲ್ಲ.
ಗೂಗಲ್ ಚಾಟ್ ಮಾಡುವ ಎಲ್ಲರಿಗೂ ಈ ಸೌಲಭ್ಯ ಲಭ್ಯವಾಗಲಿದ್ದು, ಚಾಟ್ ಪ್ಯಾನೆಲ್ ನಲ್ಲಿ ಒಂದು pop up ಕಾಣಿಸಿಕೊಳ್ಳುತ್ತದೆ. next ಬಟನ್ ಒತ್ತಿದರೆ ನಿಮ್ಮ ಗೂಗಲ್ ಚಾಟ್ ಜೊತೆಗೆ ಉಚಿತ ಎಸ್ಎಂಎಸ್ ಸೇವೆ ಕೂಡಾ ಜೋಡಣೆಗೊಳ್ಳಲಿದೆ.
ನಿಮ್ಮ ಸ್ನೇಹಿತರ ಮೊಬೈಲ್ ನಂಬರ್ ಹಾಕಿ ಎಸ್ ಎಂಎಸ್ ಕಳಿಸಬಹುದು. ನೀವು ಕಳಿಸುವ ಸಂದೇಶಗಳು ಜಿಮೇಲ್ history ಯಲ್ಲೇ ಶೇಖರಿಸಲಾಗುತ್ತದೆ. ಗೂಗಲ್ ಚಾಟ್ ಸಂದೇಶವನ್ನು ಶೇಖರಿಸುವಂತೆ ಗೂಗಲ್ ಚಾಟ್ ಎಸ್ ಎಂಎಸ್ ಕೂಡಾ Save ಆಗಿರುತ್ತದೆ.
ಭಾರತದ ಪ್ರಮುಖ 8 ಮೊಬೈಲ್ ಸೇವಾ ಸಂಸ್ಥೆಗಳು ಜಿಮೇಲ್ ಎಸ್ಎಂಎಸ್ ಸೇವೆ ಜೊತೆ ಕೈಜೋಡಿಸಿದೆ.
ಏರ್ ಸೆಲ್, ಐಡಿಯಾ, ಲೂಪ್ ಮೊಬೈಲ್, ಎಂಟಿಎಸ್, ರಿಲಯನ್ಸ್, ಟಾಟಾ ಡೊಕೊಮೊ, ಟಾಟಾ ಇಂಡಿಕಾಮ್ ಹಾಗೂ ವೋಡಾಫೋನ್.
ದೆಹಲಿ, ಮುಂಬೈ, ಕೋಲ್ಕತ್ತಾ, ಗುಜರಾತ್, ಆಂಧ್ರಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಅಂಡಮಾನ್ ಹಾಗೂ ನಿಕೋಬಾರ್, ಅಸ್ಸಾಂ, ಈಶಾನ್ಯ ರಾಜ್ಯಗಳಲ್ಲಿ ಸದ್ಯಕ್ಕೆ ಈ ಸೌಲಭ್ಯ ಲಭ್ಯವಿರುತ್ತದೆ. ಕೆಲವೇ ದಿನಗಳಲ್ಲಿ ಭಾರತದೆಲ್ಲೆಡೆ ಈ ಸೌಲಭ್ಯ ವಿಸ್ತರಣೆಗೊಳ್ಳಲಿದೆ ಎಂದು ಗೂಗಲ್ ಸಂಸ್ಥೆ ಹೇಳಿದೆ.
ಸ್ಮಾರ್ಟ್ ಫೋನ್ ನಲ್ಲಿ ಇಲ್ಲ: ಆದರೆ, ಈ ಸೌಲಭ್ಯ ಇನ್ನೂ ಸ್ಮಾರ್ಟ್ ಫೋನ್ ಗಳಲ್ಲಿ ಲಭ್ಯವಿಲ್ಲ. ಜಿಟಾಕ್ App ಇರುವ ಕಂಪ್ಯೂಟರ್ ಹಾಗೂ ಸ್ಮಾರ್ಟ್ ಫೋನ್ ಗಳಲ್ಲಿ ಸದ್ಯಕ್ಕೆ ಈ ಸೌಲಭ್ಯ ಲಭ್ಯವಿರುವುದಿಲ್ಲ, ಡೆಸ್ಕ್ ಟಾಪ್ PCಗಳಲ್ಲಿ ಜಿಮೇಲ್ ಮೂಲಕ ಈ ಸೌಲಭ್ಯ ಸುಲಭವಾಗಿ ಬಳಕೆ ಮಾಡಬಹುದಾಗಿದೆ.
ಎಷ್ಟು SMS ಕಳಿಸಬಹುದು: ಆರಂಭಿಕವಾಗಿ ಗ್ರಾಹಕರು 50 ಎಸ್ ಎಂಎಸ್ ಗಳಿಸಬಹುದಾಗಿದ್ದು, ಪ್ರತಿ ಎಸ್ ಎಂಎಸ್ ಗೂ ಕ್ರೆಡಿಟ್ ಮಿತಿ ಕಡಿಮೆಯಾಗುತ್ತಾ ಹೋಗುತ್ತದೆನಿಮ್ಮ ಕ್ರೆಡಿಟ್ ಖಾಲಿಯಾದ ಮೇಲೆ ಮರುದಿನ ಕ್ರೆಡಿಟ್ ಭರ್ತಿಯಾಗಲಿದೆ. ಜೊತೆಗೆ ಹೆಚ್ಚಿನ ಕ್ರೆಡಿಟ್ ಆನ್ನು ಖರೀದಿಸಬಹುದು. ನಿಮಗೆ ಬೇಕಾದ contact ಗೆ ಮಾತ್ರ ಎಸ್ ಎಂಎಸ್ ಕಳಿಸಬಹುದು ಅಥವಾ Block ಮಾಡಬಹುದು.
START or 'STOP' to +918082801060 ಕಳಿಸುವ ಮೂಲಕ ಸೌಲಭ್ಯ ಹೊಂದಬಹುದಾಗಿದೆ.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications