ಕಾವೇರಿ ಹೋರಾಟ, ಕಾನೂನು ಸಚಿವ ಸುರೇಶ್ ನಾಪತ್ತೆ?

Suresh Kumar
ಬೆಂಗಳೂರು,ಅ.5: ತಮಿಳುನಾಡಿಗೆ ಪ್ರತಿನಿತ್ಯ 9000 ಕ್ಯೂಸೆಕ್ಸ್ ನೀರು ಬಿಡಬೇಕು ಎಂದು ಕಾವೇರಿ ನದಿ ಪ್ರಾಧಿಕಾರ ನೀಡಿರುವ ಸೂಚನೆಗೆ ತಡೆ ನೀಡುವಂತೆ ಕರ್ನಾಟಕ ಸರ್ಕಾರ ಸಲ್ಲಿಸಿದ ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಲ್ಪಟ್ಟಿದೆ. ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಸ್ಪಷ್ಟ ಮಾಹಿತಿ ಸರ್ಕಾರದ ಪ್ರತಿನಿಧಿಗಳಿಂದ ಹೊರಬಿದ್ದಿಲ್ಲ. ಕಾನೂನು ಸಚಿವ ಸುರೇಶ್ ಕುಮಾರ್ ಅವರು ಎಲ್ಲೂ ಕಾಣಿಸುತ್ತಿಲ್ಲ.

ಜಲಮಂಡಳಿ ಹಾಗೂ ನಗರಾಭಿವೃದ್ಧಿ ಇಲಾಖೆ ಖಾತೆ ಹೊಂದಿರುವ ಸುರೇಶ್ ಕುಮಾರ್ ಅವರು ಎರಡು ದಿನಗಳಿಂದ ಬೆಂಗಳೂರಿಗರಿಗೆ ಡಿಸೆಂಬರ್ ನಂತರ ಕುಡಿಯಲು ನೀರು ಸಿಗುವುದಿಲ್ಲ ಎಂದು ಬಾಂಬ್ ಎತ್ತಿ ಹಾಕಿದ್ದು ಬಿಟ್ಟರೆ ಮತ್ತೆ ಮೌನವಾಗಿದ್ದಾರೆ.

ಹಲವಾರು ಹೋರಾಟಗಳಲ್ಲಿ ಪಾಲ್ಗೊಂಡ ಅನುಭವವಿರುವ ಸುರೇಶ್ ಕುಮಾರ್ ಅವರು ಕಾವೇರಿ ವಿವಾದ ಕಾನೂನು ಹೋರಾಟದ ಬಗ್ಗೆ ಮಾಹಿತಿ ನೀಡಲು ಹೊರಗೆ ಕಾಣಿಸಿಕೊಂಡಿಲ್ಲ. ಕಾವೇರಿ ಪರ ಹೋರಾಟದ ಪರ ಹೇಳಿಕೆಯನ್ನು ನೀಡಿಲ್ಲ.

ರಾಜಾಜಿನಗರ ವಾರ್ಡ್ ನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾದಾಗ ರಾತ್ರಿ ಇಡಿ ವಾರ್ಡ್ ಗಳಲ್ಲಿ ಸಂಚರಿಸಿ ಸಾರ್ವಜನಿಕರ ಸಮಸ್ಯೆ ಆಲಿಸಿ, ಸೂಕ್ತವಾಗಿ ಸ್ಪಂದಿಸಿದ್ದರು. ಕಾವೇರಿ 4ನೇ ಹಂತ 2ನೇ ಘಟ್ಟದ ಕಾಮಗಾರಿ ತ್ವರಿತವಾಗಿ ನಡೆಸುವಂತೆ ಕ್ರಮ ಕೈಗೊಂಡಿದ್ದರು.

ಅಸ್ಸಾಂ ನಿವಾಸಿಗಳ ವಲಸೆ ಬಗ್ಗೆ ತಲೆ ಕೆಡಿಸಿಕೊಂಡು ರೈಲ್ವೇ ನಿಲ್ದಾಣಕ್ಕೆ ತೆರಳಿ ಹಗಲು ರಾತ್ರಿ ಈಶಾನ್ಯ ರಾಜ್ಯದವರ ಮನ ಓಲೈಕೆಯಲ್ಲಿ ತೊಡಗಿದ್ದ ಸುರೇಶ್ ಕುಮಾರ್ ಅವರು ಎಲ್ಲಿ ಎಂದು ಹಲವರ ಪ್ರಶ್ನೆಯಾಗಿದೆ.

ಇದು ಸುರೇಶ್ ಕುಮಾರ್ ಅವರ ಮೇಲಿನ ಆರೋಪವಲ್ಲ. ಅಪ್ಪಟ ಆರೆಸ್ಸೆಸ್ ಮನೋಭಾವದ ಸಮಾಜಿಕ ಕಳಕಳಿ ಇರುವ ಸದಾ ಕಾಲ ಜನರಿಗಾಗಿ ಹೋರಾಟಕ್ಕಿಳಿಯುವ ಸಚಿವ ಸುರೇಶ್ ಅವರಿಗೆ ಏನಾಗಿದೆ ಎಂಬ ಪ್ರಶ್ನೆ ಮೂಡುತ್ತಿದೆ.

ಬೆಂಗಳೂರಿಗೆ ಹೊರಗಿನಿಂದ ಪೂರೈಕೆಯಾಗುವ ನೀರು ಸಿಗದಿರುವುದು ಆತಂಕಕಾರಿಯಾದಂತೆ ಅಂತರ್ಜಲ ಬತ್ತಿ ಹೋಗಿರುವುದು. ಕೆರೆಗಳು ನಾಶವಾಗಿರುವುದು ಸಮಸ್ಯೆಯನ್ನು ಇನ್ನಷ್ಟು ಉಲ್ಬಣಗೊಳಿಸಿದೆ. ಕುಡಿಯುವ ನೀರಿನ ಏಕೈಕ ಆಧಾರವಾಗಿರುವ ಕಾವೇರಿ ನೀರು ಸಿಗದಿದ್ದರೆ ಮುಂದೆ ಗತಿ ಏನು? ಎಂಬ ಪ್ರಶ್ನೆಗೆ ಪರ್ಯಾಯ ವ್ಯವಸ್ಥೆ ಬಗ್ಗೆ ಯೋಚಿಸಲಾಗುವುದು ಎಂದಿದ್ದ ಸುರೇಶ್ ಕುಮಾರ್ ಎಲ್ಲಿದ್ದಾರೆ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+