ಅತ್ಯಾಚಾರ: ವಿಕಿ'ಲೀಕ್ಸ್' ಜುಲಿಯನ್ ಅಸ್ಸಾಂಜ್ ನಿರ್ದೋಷಿ

ಜುಲಿಯನ್ ಅಸ್ಸಾಂಜ್ (41) ತನ್ನ ಮೇಲೆ ರೇಪ್ ಮಾಡಿದ್ದ ಎಂದು ಯುವತಿಯೊಬ್ಬಳು ಸಾಕ್ಷ್ಯವನ್ನಾಗಿ ನೀಡಿದ್ದ ಉಡುಪು ಮತ್ತು ತೂತುಬಿದ್ದಿದ್ದ ಕಾಂಡೋಮ್ ನಲ್ಲಿ ವಿಕಿ'ಲೀಕ್ಸ್' ಅಸ್ಸಾಂಜನ ವಂಶವಾಹಿ (ಡಿಎನ್ಎ) ಇಲ್ಲ ಎಂಬುದು ದೃಢಪಟ್ಟಿದೆ.
ವಿಕಿ'ಲೀಕ್ಸ್' ಅಸ್ಸಾಂಜನ ವಕೀಲರು ಹೇಳಿರುವಂತೆ ಅತ್ಯಾಚಾರ ಪ್ರಕರಣದ ಪ್ರಮುಖ ಸಾಕ್ಷ್ಯವಾದ ತೂತು ಕಾಂಡೋಮ್ ಅನ್ನು ಎರಡು ವಿಧಿವಿಜ್ಞಾನ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಲಾಗಿ ಅದರಲ್ಲಿ ಅಸ್ಸಾಂಜನ ವಂಶವಾಹಿಯ ಲವಲೇಶವೂ ಪತ್ತೆಯಾಗಿಲ್ಲ ಎಂದು 'ಡೈಲಿ ಮೇಲ್' ಪತ್ರಿಕೆ ವರದಿ ಮಾಡಿದೆ.
ಜುಲಿಯನ್ ಅಸ್ಸಾಂಜ್ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ಸಿದ್ಧಪಡಿಸಿರುವ 100 ಪುಟಗಳ ವರದಿಯನ್ನು ಆಧರಿಸಿ ಆತನ ವಕೀಲರು ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಆದರೆ ಎರಡನೆಯ ಬಾಧಿತೆಯೊಬ್ಬಳು ಸಲ್ಲಿಸಿರುವ ಮತ್ತೊಂದು ಕಾಂಡೋಮಿನಲ್ಲಿ ಅಸ್ಸಾಂಜನ ವಂಶವಾಹಿ ಪತ್ತೆಯಾಗಿರುವುದು ಇದೇ ಪ್ರಯೋಗಾಲಯದಲ್ಲಿ ಕಂಡುಬಂದಿದೆ.
ಸ್ಟಾಕ್ ಹೋಂನಲ್ಲಿ ತನ್ನ ಅಪಾರ್ಟ್ ಮೆಂಟ್ ನಲ್ಲಿ ಜುಲಿಯನ್ ಅಸ್ಸಾಂಜ್ ಅತ್ಯಾಚಾರ ಮಾಡಿದ್ದ ಎಂದು ಬಾಧಿತ ಯುವತಿಯರಿಬ್ಬರೂ 2 ವರ್ಷಗಳ ಹಿಂದೆ ದೂರು ಸಲ್ಲಿಸಿದ್ದರು. ಒಬ್ಬ ಯುವತಿಯಂತೂ ಅಸುರಕ್ಷಿತ ಸಂಭೋಗದಲ್ಲಿ ತೊಡಗುವಂತಾಗಲು ಅಸಾಂಜ್ ಬೇಕಾಗಿಯೇ ಕಾಂಡೋಮಿಗೆ ತೂತು ಮಾಡಿದ್ದ ಎಂದು ಅಲವತ್ತುಕೊಂಡಿದ್ದಳು.
ಮತ್ತೊಬ್ಬಳು ತಾನು ಮಲಗಿದ್ದಾಗ ಅಸಾಂಜ್ ಮೆತ್ತಗೆ ಬಂದು ಸದ್ದಿಲ್ಲದೆ ತನ್ನ ಮೇಲೆ ರೇಪ್ ಮಾಡಿ ಹೋಗಿದ್ದ ಎಂದು ಬೊಬ್ಬಿಟ್ಟಿದ್ದಳು. ಆದರೆ ಪೊಲೀಸರು ಜುಲಿಯನ್ ಅಸ್ಸಾಂಜ್ ಇನ್ನೂ ಯಾವುದೇ ಪ್ರಕರಣವನ್ನು ಅಧಿಕೃತವಾಗಿ ದಾಖಲಿಸಿಕೊಂಡಿಲ್ಲ.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications