ಶಂಕಿತ ಉಗ್ರರ ಪಟ್ಟಿ, & ಹಾಕಿರುವ ಕೇಸುಗಳು

ಹುಬ್ಬಳ್ಳಿ, ಧಾರವಾಡ, ಬೆಂಗಳೂರು, ಭಟ್ಕಳ, ಮಹಾರಾಷ್ಟ್ರ, ಹೈದರಾಬಾದ್ ಮುಂತಾದೆಡೆ ಜಾಲ ಹೊಂದಿದ್ದ ಈ ಬಂಧಿತರು ನಗರ ಅನೇಕ ಕಾಲೇಜಿನ ಅಯ್ದ ವಿದ್ಯಾರ್ಥಿಗಳನ್ನು ಉಗ್ರವಾದದತ್ತ ಆಕರ್ಷಿಸುವಂತೆ ಮಾಡುವಲ್ಲಿ ಸಫಲರಾಗಿದ್ದರು ಎಂಬುದು ತಿಳಿದು ಬಂದಿದೆ.
ಆದರೆ, ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡದೆ ತಾಳ್ಮೆಯಿಂದ ವರ್ತಿಸಬೇಕು, ಉಗ್ರರನ್ನು ಮಟ್ಟ ಹಾಕಲು ನಮ್ಮ ಪೊಲೀಸ ಪಡೆ ಕಂಕಣ ತೊಟ್ಟಿದೆ. ಸಾರ್ವಜನಿಕರು ಸಹಕಾರ ನೀಡಿದರೆ ಸಾಕು ಎಂದು ನಗರ ಪೊಲೀಸ್ ಅಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಬಂಧಿತ ಶಂಕಿತ ಉಗ್ರರ ಪಟ್ಟಿ :
* ಮಹಮ್ಮದ್ ಅಕ್ರಂ ಅಲಿಯಾಸ್ ಇಮ್ರಾನ್
* ಉಬೇದುಲ್ಲಾ ರೆಹಮಾನ್ ಅಲಿಯಾಸ್ ಇರ್ಶಾದ್ ಮಹಮದ್
* ಮತಿ ಉರ್ ರೆಹಮಾನ್ ಸಿದ್ಧಿಕಿ, [ಪತ್ರಕರ್ತ, 26 ವರ್ಷ]
* ಇಜಾಜ್ ಮಹಮ್ಮದ್ ಮಿರ್ಜಾ, [ಡಿಆರ್ ಡಿಒದಲ್ಲಿ ಜ್ಯೂ. ವಿಜ್ಞಾನಿ, 25 ವರ್ಷ]
* ಶೋಯಿಬ್ ಅಹ್ಮದ್ ಮಿರ್ಜಾ ಅಲಿಯಾಸ್ ಛೋಟು, [ಎಂಸಿಎ ಪದವೀಧರ, 25 ವರ್ಷ]
* ಮೊಹಮ್ಮದ್ ಯೂಸುಫ್ ನಾಲಬಂದ್, [ಸೇಲ್ಸ್ ಮನ್, 28 ವರ್ಷ]
* ರಿಯಾಜ್ ಅಹಮ್ಮದ್ ಬ್ಯಾಹಟ್ಟಿ, ಬಿಸಿಎ ಪದವೀಧರ, [ಸೇಲ್ಸ್ ಮನ್, 28 ವರ್ಷ]
* ಒಬೇದುಲ್ಲಾ ಅಲಿಯಾಸ್ ಇಮ್ರಾನ್ ಬಹದ್ದೂರ್ ಅಲಿಯಾಸ್ ಸಮೀರ್, [ವಿದ್ಯಾರ್ಥಿ, 24 ವರ್ಷ]
* ಮೊಹಮ್ಮದ್ ಸಾಧಿಕ್ ಲಷ್ಕರ್ ಅಲಿಯಾಸ್ ರಾಜು, [28 ವರ್ಷ]
* ವಾಹಿದ್ ಹುಸೇನ್ ಅಲಿಯಾಸ್ ಸಾಹಿಲ್, [26 ವರ್ಷ]
* ಬಾಬಾ ಅಲಿಯಾಸ್ ಮೆಹಬೂಬ್ ಬಾಗಲಕೋಟೆ, [26 ವರ್ಷ]
* ಡಾ. ಜಾಫರ್ ಇಕ್ಬಾಲ್ ಸೋಲಾಪುರ್, [27 ವರ್ಷ]
* ಅಬ್ದುಲ್ಲಾ ಅಲಿಯಾಸ್ ಅಬ್ದುಲ್ ಹಕೀಂ, [25 ವರ್ಷ]
ಉಳಿದಂತೆ ಮಹಾರಾಷ್ಟ್ರದಲ್ಲಿ ನಾಲ್ವರು, ಚಿಕ್ಕಮಗಳೂರಿನ ಕೊಪ್ಪದಲ್ಲಿ ಒಬ್ಬ ಶಂಕಿತ ಉಗ್ರನ ಬಂಧನವಾಗಿದ್ದು, ಅವರ ಗುರುತು ಪರಿಚಯದ ವಿವರಗಳನ್ನು ಸಿಸಿಬಿ ಪೊಲೀಸರು ಹೊರ ಹಾಕಿಲ್ಲ. ಬಿಜಾಪುರ, ಬಾಗಲಕೋಟೆಗಳಲ್ಲೂ ಶಂಕಿತ ಉಗ್ರರ ಬಂಧನದ ಸುದ್ದಿ ಟಿವಿ ಮಾಧ್ಯಮಗಳನ್ನು ಕಾಣಿಸಿಕೊಂಡಿದ್ದರೂ ಪೊಲೀಸರು ಇನ್ನೂ ಸ್ಪಷ್ಟಪಡಿಸಿಲ್ಲ. [ಟಾರ್ಗೆಟ್ ಸ್ಥಳ ಪಟ್ಟಿ]
ಪ್ರಕರಣಗಳು: ಶಂಕಿತ ಉಗ್ರರ ಮೇಲೆ ಬೆಂಗಳೂರು ನಗರ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ Cr.No.384/12 u/s 120(B), 121, 121(A), 122, 123, 153 (A), 307, 379 IPC, ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ 1959ರ ಸೆಕ್ಷನ್. 3 ಹಾಗು 25 ಮತ್ತು ವಿಧ್ವಂಸಕ ಕೃತ್ಯ(ತಡೆ) ಕಾಯ್ದೆ 1967ರ ಅಡಿಯಲ್ಲಿ ಸೆಕ್ಷನ್ 10, 12, 13, 15, 16 & 18 ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಶಂಕಿತ ಉಗ್ರರ ವಿಚಾರಣೆ ಜಾರಿಯಲ್ಲಿದ್ದು, ವಿಚಾರಣೆ ಬಳಿಕ ಇನ್ನಷ್ಟು ಮಾಹಿತಿ ಹೊರಬೀಳುವ ಸಾಧ್ಯತೆಯಿದೆ.
ವಶವಾದ ವಸ್ತುಗಳು: ಎರಡು 7.65 mm ಪಿಸ್ತೂಲ್ 7 cartridges, 16 ಮೊಬೈಲ್, 8 ಸಿಮ್, 4 ಎಟಿಎಂ ಕಾರ್ಡ್, 3 ಪೆನ್ ಕಾರ್ಡ್, 2 ಲ್ಯಾಪ್ ಟಾಪ್, 1 ಹೀರೋ ಹೋಂಡಾ ಸ್ಪ್ಲೈಂಡರ್, 1 dragger, 7 ಜಿಹಾದಿ ಪುಸ್ತಕಗಳು, 2o ಚೆನ್ನೈ ನಕಾಶೆ, 1 ಭಾರತದ ಭೂಪಟ, 1 ಇರಾನ್ ಮ್ಯಾಪ್, ಕೆಲವು ಉರ್ದು ಪತ್ರಿಕೆಗಳು ಹಾಗೂ 1,500 ರು.ನಗದು ಮೊದಲ ಹಂತದ ಬೇಟೆಯಲ್ಲಿ ಸಿಕ್ಕಿದೆ. ಮಿಕ್ಕ ವಿವರಗಳನ್ನು ನಿರೀಕ್ಷಿಸಲಾಗಿದೆ.
-
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ












Click it and Unblock the Notifications