ನಮ್ಗೆ 'ಡಾಗ್ಸ್ ಆರ್ ನಾಟ್ ಅಲೌಡ್' ಸ್ಥಿತಿ ಬರಬಾರ್ದು

ನಮ್ಗೆ ಮತ್ತೆ ಈ ಪರಿಸ್ಥಿತಿ ಬರಬಾರದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಹೆಗಲಿನ ಮೇಲಿನ ಟವಲ್ ಸರಿ ಮಾಡಿಕೊಳ್ಳುತ್ತಾ ವಿಧಾನಸಭೆಯಲ್ಲಿ ಗರ್ಜಿಸಿದರು.
ಬುಧವಾರ (ಆ.1) ಪ್ರಶ್ನೋತ್ತರ ಅವಧಿಯಲ್ಲಿ ಬೆಂಗಳೂರಿನ ಕ್ಲಬ್, ಪಬ್ ಗಳಿಗೆ ಕಡಿವಾಣ ಹಾಕುವ ಬಗ್ಗೆ ವಿಷಯ ಪ್ರಸ್ತಾಪವಾಯಿತು. ಈ ಸಂದರ್ಭದಲ್ಲಿ ಮಾತಿಗಿಳಿದ ಪಂಚೆಧಾರಿ ಸಿದ್ದರಾಮಯ್ಯ ಅವರು ಹೀಗೆಂದರು.
ಗಾಂಧೀಜಿಯವರು ದುಂಡುಮೇಜಿನ ಸಮಾವೇಶಕ್ಕೆ, ಲಂಡನ್ ಸಮಾವೇಶಕ್ಕೆ ಚಪ್ಪಲಿ ಮತ್ತು ಪಂಚೆಯಲ್ಲೆ ಹೋಗಿದ್ದರು. ವಿಶ್ವೇಶ್ವರಯ್ಯನವರಿಗೆ ಅಪಮಾನ ಮಾಡಲಾಯಿತು ಎಂಬ ಕಾರಣಕ್ಕಾಗಿ ಸೆಂಚುರಿ ಕ್ಲಬ್ ಆರಂಭಿಸಲಾಯಿತು. ಈಗ ಕ್ಲಬ್ಗಳ ಸಂಸ್ಕೃತಿ ಯಾವ ಮಟ್ಟಕ್ಕೆ ವಿಪರೀತಕ್ಕೆ ಹೋಗಿದೆ ಎಂದರೆ ಅಲ್ಲಿ ಬಟ್ಟೆ ಹಾಕಿಕೊಂಡು ಹೋಗುವವರಿಗಿಂತ ಬಟ್ಟೆ ಬಿಚ್ಚಿಕೊಂಡು ಬರುವವರಿಗೇ ಹೆಚ್ಚಿನ ಮರ್ಯಾದೆ, ಮಾನ್ಯತೆ ಸಿಗುತ್ತಿದೆ.
ಇದು ಸರಿಯಲ್ಲ. ನಮ್ಮ ಸಂಸ್ಕೃತಿ ಉಳಿಸಬೇಕಾಗಿದೆ. ನಾವು ಕಾನೂನನ್ನು ಮಾಡುವವರು. ನಮಗೆ ಅಲ್ಲಿ ಮರ್ಯಾದೆ ಇಲ್ಲ ಎಂದ ಮೇಲೆ ಅಲ್ಲಿ ಕಾನೂನಿಗೂ ಗೌರವ ಇರುವುದಿಲ್ಲ. ಲಂಗು-ಲಗಾಮು ಇಲ್ಲದೆ ಏಕಪಕ್ಷೀಯವಾಗಿ ವರ್ತಿಸುತ್ತಿರುವ ಕ್ಲಬ್ಗಳ ಹಾವಳಿಯನ್ನು ಮಟ್ಟ ಹಾಕಲೇಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.
ಚರ್ಚೆಯ ಅಂತ್ಯಕ್ಕೆ ಕ್ಲಬ್ಗಳಿಗೆ ಕಡಿವಾಣ ಹಾಕಬೇಕು ಎಂದು ವಿಧಾನಸಭೆಯಲ್ಲಿ ಪಕ್ಷಭೇದ ಮರೆತು ನಿರ್ಣಯ ಕೈಗೊಂಡರು.ಇದಕ್ಕಾಗಿ ಸದನ ಸಮಿತಿ ನೇಮಕ ಮಾಡುವ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಯಿತು.
ಪಂಚೆ ಕಂಡ್ರೆ ಕಳ್ಳನ ಮರ್ಯಾದೆ: ಈ ಚರ್ಚೆ ಆರಂಭವಾಗಿದ್ದು, ಪ್ರತಿಷ್ಠಿತ ಕ್ಲಬ್ ಗಳಲ್ಲಿ (ಉದಾಹರಣೆಗೆ ಕೆಎಸ್ ಸಿಎ ಕ್ಲಬ್ ) ಚಪ್ಪಲಿ, ಪಂಚೆ ಹಾಕಿಕೊಂಡು ಹೋದರೆ ಕ್ಲಬಿನ ಒಳಗಡೆ ಬಿಡೋದಿಲ್ಲಾ, ಆಚೆ ಕಳುಹಿಸುತ್ತಾರೆ, ನಾವೇ ಕಾನೂನು ಮಾಡುವವರು ವಿಧಾನಸೌಧಕ್ಕೆ ಚಪ್ಪಲಿ, ಪಂಚೆ ಹಾಕಿಕೊಂಡು ಬರಬಹುದಾದರೆ, ಕ್ಲಬ್ಗಳಿಗೆ ಏಕೆ ಹೋಗಬಾರದು? ಅವರೇನು ಆಕಾಶದಿಂದ ಬಂದವರೇ? ಎಂದು ಕಾಂಗ್ರೆಸ್ ಸದಸ್ಯ ಎ ಮಂಜು ವಿಷಯ ಪ್ರಸ್ತಾಪಿಸಿದರು.
ಇದೇ ಅನುಭವ ಪಡೆದಿದ್ದ ಲಕ್ಷ್ಮಣಸವದಿ, ಪಿ.ಎಂ.ಅಶೋಕ್ ಮುಂತಾದವರು ದನಿಗೂಡಿಸಿ ಚಪ್ಪಲಿ, ಪಂಚೆ ಕಂಡ್ರೆ ಕ್ಲಬ್ನ ಸಿಬ್ಬಂದಿ ಕಳ್ಳನನ್ನು ಕಂಡ ಹಾಗೆ ಗದರಿಸಿ ಆಚೆಗೆ ದಬ್ಬುತ್ತಾರೆ. ಅವರಿಗೆ ಹೇಳುವವರು, ಕೇಳುವವರು ಯಾರೂ ಇಲ್ಲ. ಅವರ ಚಟುವಟಿಕೆಯನ್ನು ನಿಯಂತ್ರಣ ಮಾಡಲೇಬೇಕು ಎಂದರು.
ಬೆಂಗಳೂರು ಸುತ್ತ ಮುತ್ತ 1515 ಕ್ಲಬ್ಗಳಿವೆ, ಮೈಸೂರು ಪ್ರಾಂತ್ಯದಲ್ಲಿ 1311, ಬೆಳಗಾವಿಯಲ್ಲಿ 503, ಗುಲ್ಬರ್ಗಾದಲ್ಲಿ 386 ಕ್ಲಬ್ಗಳು ನೊಂದಾವಣಿಯಾಗಿವೆ. ಒಟ್ಟಾರೆ 2,315 ಕ್ಲಬ್ ಗಳಿದ್ದು ಸರ್ಕಾರವೇ 57 ಕ್ಲಬ್ ಗಳಿಗೆ ಜಾಗ ನೀಡಿದೆ. ಇನ್ನೂ ಅನೇಕ ಕ್ಲಬ್ ಗಳಿಗೆ ಮಾನ್ಯತೆ ಸಿಕ್ಕಿಲ್ಲ ಎಂಬ ವಿಷಯ ಹೊರಬಿತ್ತು.
ಎಲ್ಲ ಸದಸ್ಯರ ಒತ್ತಾಯದ ಮೇರೆಗೆ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅವರು ಕ್ಲಬ್ ಚಟುವಟಿಕೆ ನಿಯಂತ್ರಣ ಮಾಡಲು ಸದನ ಸಮಿತಿ ರಚಿಸಿ ಅವುಗಳಿಗೆ ನಿಯಂತ್ರಣ ಹಾಕಬೇಕೆಂದು ಸರ್ಕಾರಕ್ಕೆ ಆದೇಶಿಸಿದರು.
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications