ಪದೇ ಪದೇ ಸಿಎಂ ಬದಲಾವಣೆ, ಕೋಟಿಗಟ್ಟಲೆ ಖರ್ಚು
ಬೆಂಗಳೂರು, ಜು.24: ಪದೇ ಪದೇ ಮುಖ್ಯಮಂತ್ರಿ ಸ್ಥಾನ ಬದಲಾವಣೆಯಾಗುವುದರಿಂದ ರಾಜ್ಯದ ಜನತೆಗೆ ಮುಜುಗರ ತಂದರೆ, ಸರ್ಕಾರಿ ಅಧಿಕಾರಿಗಳಿಗಂತೂ ಬಲು ತೊಂದರೆಯಾಗುತ್ತದೆ. ಮುಖ್ಯಮಂತ್ರಿ ಬದಲಾಗುತ್ತಿದ್ದಂತೆ ಕಚೇರಿ, ಸಾರಿಗೆ, ಜಾಹೀರಾತು ಎಲ್ಲವೂ ಬದಲಾಗಬೇಕಾಗುತ್ತದೆ. ಅದು ಆದಷ್ಟು ಬೇಗ ಮುಗಿಯಬೇಕು ಇಲ್ಲದಿದ್ದರೆ, ಅಲ್ಲಿ ಹೋರ್ಡಿಂಗ್ ನೋಡಿದೆ ಇನ್ನೂ ಹಳೆ ಸಿಎಂ ಫೋಟೋನೇ ಇದೆ ಎಂದು ಜನ ನಗೆಯಾಡುತ್ತಾರೆ. ಇದರ ಪರಿಣಾಮ ಸರ್ಕಾರಿ ಅಧಿಕಾರಿಗಳ ಮೇಲೆ ಬೀಳುತ್ತದೆ.

ಉದಾಹರಣೆಗೆ ವಾರ್ತಾ ಇಲಾಖೆ ಈಗ ಡಿವಿ ಸದಾನಂದ ಗೌಡರ ಭಾವಚಿತ್ರ ಬದಲಿಸಿ ಜಗದೀಶ್ ಶೆಟ್ಟರ್ ಅವರ ಭಾವಚಿತ್ರ ಲಗತ್ತಿಸುವ ಕಾರ್ಯದಲ್ಲಿ ಮಗ್ನವಾಗಿದೆ. ಈ ಕಾರ್ಯಕ್ಕೆ ಏನಿಲ್ಲವೆಂದರೂ ಸುಮಾರು 5 ಕೋಟಿ ರು ಖರ್ಚಾಗುತ್ತದೆ.
ರಾಜ್ಯದೆಲ್ಲೆಡೆ ಸುಮಾರು 1,721 ಸರ್ಕಾರಿ ಹೋರ್ಡಿಂಗ್ ಜಾಹೀರಾತುಗಳಿದೆ. ಈ ಹೋರ್ಡಿಂಗ್ ಗಳನ್ನು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಬದಲಾಯಿಸಲು ಸ್ವಲ್ಪ ಕಾಲಾವಧಿ ಹಿಡಿಯುತ್ತದೆ. ಬರೀ ಹೋರ್ಡಿಂಗ್ ಬದಲಾವಣೆಗೆ ಸುಮಾರು 1.25 ಕೋಟಿ ರು ತಗುಲುತ್ತದೆ ಎಂದು ವಾರ್ತಾ ಇಲಾಖೆಯ ನಿರ್ದೇಶಕ ವಿಶು ಕುಮಾರ್ ಹೇಳಿದ್ದಾರೆ.
ಇದಲ್ಲದೆ ಸರ್ಕಾರಿ ಕಡತ, ಪುಸ್ತಕ, ಪಾಂಪ್ಲೇಟ್, ಯೋಜನೆಗಳ ಜಾಹೀರಾತುಗಳಲ್ಲಿ ಸಿಎಂ ಭಾವಚಿತ್ರ ಹಾಗೂ ಮಾಹಿತಿ ಬದಲಾಗಬೇಕಾಗುತ್ತದೆ. ಇದಕ್ಕೆ ಪ್ರತ್ಯೇಕ ಸಿಬ್ಬಂದಿಯಾಗಲಿ, ಸಮಯವಾಗಲಿ ಮೀಸಲಿರುವುದಿಲ್ಲ. ಇರುವ ಸಿಬ್ಬಂದಿಗಳು ಹಾಗೂ ಸಹಾಯಕರ ನೆರವಿನಿಂದ ಬದಲಾವಣೆ ಕಾರ್ಯ ಕೈಗೊಳ್ಳಬೇಕಾಗುತ್ತದೆ. ಈ ಕಾರ್ಯ ವಿಳಂಬವಾದರೆ ಇಲಾಖೆ ಹಾಗೂ ಸರ್ಕಾರ ಮುಜುಗರ ಅನುಭವಿಸಬೇಕಾಗುತ್ತದೆ ಎಂದು ವಿಶು ಕುಮಾರ್ ಹೇಳಿದರು.
ಇದು ಕೇವಲ ಒಂದು ಇಲಾಖೆಯ ಅನುಭವ. ಉಳಿದಂತೆ ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ಪ್ರವಾಸೋದ್ಯಮ ಹಾಗೂ ಕೃಷಿ ಇಲಾಖೆಗಳಲ್ಲಿ ಕೂಡಾ ಭಿತ್ತಿಚಿತ್ರ, ಭಾವ ಚಿತ್ರ ಹಾಗೂ ದಾಖಲಾತಿ ಬದಲಾವಣೆಯಾಗಬೇಕಾಗುತ್ತದೆ. ಜಾಹೀರಾತು ಫಲಕಗಳನ್ನು ಬದಲಿಸಬಹುದಾದರೂ, ಪುಸ್ತಕ ಹಾಗೂ ಹಲವು ಕಡತಗಳನ್ನು ಮರು ಮುದ್ರಣ ಮಾಡಲೇಬೇಕು ಇದರ ಅಂದಾಜು ವೆಚ್ಚ 5 ಕೋಟಿ ರು ಮೀರುತ್ತದೆ.
ಈ ಎಲ್ಲಾ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಟೆಂಡರ್ ಕರೆಯಲಾಗುತ್ತದೆ. ಸಿಎಂ ಸೀಟು ಬದಲಾಯಿಸಿದ್ದಷ್ಟು ಸುಲಭವಾಗಿ ಅವರ ಭಾವಚಿತ್ರ ಬದಲಿಸಲು ಬರುವುದಿಲ್ಲ. ಬದಲಾವಣೆಯಾದರೂ ಅದರ ವೆಚ್ಚ ಕೋಟಿ ರು ದಾಟುತ್ತದೆ ಎಂಬುದು ನಂಬಲೇಬೇಕಾದ ಸತ್ಯ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications