Get Updates
Get notified of breaking news, exclusive insights, and must-see stories!

ಬೆಳಗಾವಿ : ಗೃಹಿಣಿ ಮೇಲೆ ಕಾಮುಕನ ಆಸಿಡ್ ದಾಳಿ

Acid attack on married woman in Belgaum
ಬೆಳಗಾವಿ, ಜು. 20 : ಕಳೆದ ಒಂದು ವರ್ಷದಿಂದ ಮಹಿಳೆಯೊಬ್ಬರಿಗೆ ಆಗಾಗ ಫೋನ್ ಮಾಡಿ ಅಶ್ಲೀಲ ಮಾತುಗಳನ್ನಾಡಿ ಪೀಡಿಸುತ್ತಿದ್ದ ಅಪರಿಚಿತ ವ್ಯಕ್ತಿಯೊಬ್ಬ ಆ ಮಹಿಳೆಯ ಮೇಲೆ ಆಸಿಡ್ ದಾಳಿ, ಮುಖವನ್ನು ಸುಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಯಮಕನಮರಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.

ನಗರದಲ್ಲಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಸಂದೀಪ್ ಪಾಟೀಲ್ ಅವರು ಗುರುವಾರ ನಡೆಸಿದ ಜನತಾ ದರ್ಶನದ ಸಂದರ್ಭದಲ್ಲಿ ಈ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಜೊತೆಗೆ ಬಡವ ಮತ್ತು ಸಂತ್ರಸ್ತರ ಸಹಾಯಕ್ಕೆ ಧಾವಿಸದ ಪೊಲೀಸ್ ಇಲಾಖೆಯ ಅಸಡ್ಡೆತನ, ನಿಷ್ಕ್ರಿಯತೆಯನ್ನೂ ಬಯಲು ಮಾಡಿದೆ.

ಕಾಮುಕ ವ್ಯಕ್ತಿಯಿಂದ ಆಸಿಡ್ ದಾಳಿಗೆ ಒಳಗಾದ 33 ವರ್ಷದ ಗೃಹಿಣಿ ಉಜ್ವಲಾ ಜಿನಪ್ಪ ಬಸ್ತವಾಡ ಅವರು ಹುಕ್ಕೇರಿ ತಾಲೂಕಿನ ಹೊಸೂರು ಗ್ರಾಮದವರು. ಆಸಿಡ್ ದಾಳಿಯಿಂದಾಗಿ ಅವರ ಮುಖ ಸಂಪೂರ್ಣ ಸುಟ್ಟಿದ್ದು ಅವರನ್ನು ಘಟಪ್ರಭಾದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ನಡೆದಿದ್ದೇನು? : ಅಪರಿಚಿತ ವ್ಯಕ್ತಿಯೊಬ್ಬ ಕಳೆದ ಒಂದು ವರ್ಷದಿಂದ ಉಜ್ವಲಾರಿಗೆ ಫೋನ್ ಮಾಡಿ ಅಶ್ಲೀಲವಾಗಿ ಮಾತನಾಡುತ್ತ ಸರಸಕ್ಕೆ ಬಾ ಎಂದೆಲ್ಲ ಪೀಡಿಸುತ್ತಿದ್ದ. ಇದನ್ನು ಗಂಡನಿಗೆ ತಿಳಿಸಿ ನಂತರ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ನವೆಂಬರ್ 24, 2011ರಂದೇ ದೂರು ನೀಡಲಾಗಿತ್ತು. ಪೀಡಕನ ಫೋನ್ ನಂಬರ್ ನೀಡಲಾಗಿದ್ದರೂ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಕೇಳಿದಾಗಲೆಲ್ಲ ಬೆಂಗಳೂರಿಗೆ ಫೋನ್ ನಂಬರ್ ಕಳಿಸಲಾಗಿದೆ ಎಂದು ಸಬೂಬು ನೀಡುತ್ತಿದ್ದರು.

ಪೊಲೀಸರಿಗೆ ದೂರು ನೀಡಿರುವುದು ತಿಳಿಯುತ್ತಿದ್ದಂತೆ ನಾಗರಪಂಚಮಿಯ ದಿನ ಆಸಿಡ್ ಹಾಕಿ ಸುಟ್ಟುಬಿಡುವುದಾಗಿ ಅಪರಿಚಿತ ಫೋನ್ ಮಾಡಿ ಬೆದರಿಕೆ ಹಾಕಿದ್ದ. ಜು.17ರಂದು ರಾತ್ರಿ 3 ಗಂಟೆಗೆ ಉಜ್ವಲಾ ಅವರ ಮನೆ ಬಾಗಿಲು ಯಾರೋ ಬಾರಿಸಿದ್ದಾರೆ. ಆಗ ಬಾಗಿಲು ತೆಗೆದ ಉಜ್ವಲಾ ಅವರ ಮುಖದ ಮೇಲೆ ಆಸಿಡ್ ದಾಳಿ ಮಾಡಿ ದುಷ್ಕರ್ಮಿ ಪರಾರಿಯಾಗಿದ್ದಾನೆ. ದಟ್ಟ ಕತ್ತಲು ಇದ್ದದ್ದರಿಂದ ದಾಳಿ ಮಾಡಿದವರು ಯಾರು ಎಂದು ಉಜ್ವಲಾಗೆ ಗೊತ್ತಾಗಿಲ್ಲ.

ಈ ಘಟನೆ ನಡೆದು ಮೂರು ದಿನಗಳಾದರೂ ಪೊಲೀಸರು ದಾಳಿಕೋರನನ್ನು ಬಂಧಿಸುವಲ್ಲಿ ವಿಫಲರಾಗಿದ್ದಾರೆ. ಪೊಲೀಸರ ನಿಷ್ಕ್ರಿಯತೆಯಿಂದ ಬೇಸತ್ತ ಉಜ್ವಲಾ ಕುಟುಂಬದವರು ನೇರವಾಗಿ ಜನತಾ ದರ್ಶನಕ್ಕೆ ಬಂದು ಪೊಲೀಸ್ ಸುಪರಿಂಟೆಂಡೆಂಟ್ ಸಂದೀಪ್ ಪಾಟೀಲ್ ಅವರಿಗೆ ದೂರು ನೀಡಿದ್ದಾರೆ. ಉಜ್ವಲಾ ಅವರು ಸ್ವತಃ ತಮ್ಮ ಮಗನ ಪ್ರಜ್ವಲ್ ಜೊತೆ ಬಂದು ದೂರು ನೀಡಿದ್ದಾರೆ. "ನನಗೆ ನ್ಯಾಯ ದೊರಕಿಸಿಕೊಡಿ, ತಪ್ಪಿತಸ್ಥನನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಿ" ಎಂದು ಆಕೆ ಪೊಲೀಸ್ ಅಧಿಕಾರಿಯನ್ನು ಕೋರಿದ್ದಾರೆ.

ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಂದೀಪ್ ಪಾಟೀಲ್ ಅವರು ತಪ್ಪಿತಸ್ಥ ಯಾರೇ ಆಗಿರಲಿ ಖಂಡಿತ ಬಂಧಿಸುತ್ತೇವೆ ಎಂದು ವಾಗ್ದಾನ ನೀಡಿದ್ದಾರೆ. ಶಹಾಪುರದಲ್ಲಿ ಕೂಡ ಕೆಲ ದಿನಗಳ ಹಿಂದೆ ಇಂಥದೇ ಘಟನೆ ನಡೆದಿತ್ತು. ಆಗ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದವು ಎಂದು ಹೇಳಿರುವ ಅವರು, ಈ ಘಟನೆಯ ಆರೋಪಿಯನ್ನೂ ಖಂಡಿತ ಬಂಧಿಸುತ್ತೇವೆ ಎಂದಿದ್ದಾರೆ. ಆಸಿಡ್ ದಾಳಿಕೋರ ಮಾತ್ರವಲ್ಲ, ಸರಿಯಾದ ಸಮಯದಲ್ಲಿ ಆ ಅಪರಿಚಿತನನ್ನು ಬಂಧಿಸುವಲ್ಲಿ ವಿಫಲರಾದ ಪೊಲೀಸ್ ಅಧಿಕಾರಿಗಳ ವಿರುದ್ಧ ಕೂಡ ಪಾಟೀಲರು ಕ್ರಮ ತೆಗೆದುಕೊಳ್ಳಬೇಕು.

ಅಪರಾಧಿಗೆ 10 ವರ್ಷ ಜೈಲು ಶಿಕ್ಷೆ : ಆಸಿಡ್ ದಾಳಿಯನ್ನು 10 ವರ್ಷ ಜೈಲು ಶಿಕ್ಷೆ ನೀಡಬಹುದಾದ ಅಪರಾಧ ಎಂದು ಪರಿಗಣಿಸಿರುವ ಕೇಂದ್ರ ಸರಕಾರ, ಇದಕ್ಕೆ ಸಂಬಂಧಿಸಿದ ಕರಡು ವಿಧೇಯಕವನ್ನು ಅಂಗೀಕರಿಸಿ ಮಹತ್ವದ ನಿರ್ಣಯವನ್ನು ತೆಗೆದುಕೊಂಡಿದೆ. ಇಲ್ಲಿಯವರೆಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 326 ಮತ್ತು 306ರ ಅಡಿಯಲ್ಲಿ ಅಪರಾಧಿಗೆ 2 ವರ್ಷ ಮಾತ್ರ ಜೈಲು ಶಿಕ್ಷೆ ವಿಧಿಸಲಾಗುತ್ತಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+