ಪಾರ್ಕಿಂಗ್ ದಂಡ: ಪೊಲೀಸರ ರುಂಡಾಡಿದ ಚಂಡಿ

32 ವರ್ಷದ ದಿವ್ಯಾ ದತ್ತಾ ದುಬೆ ಎಂಬ ಮಹಿಳೆ ಇಲ್ಲಿನ ಗ್ರೀನ್ ಪಾರ್ಕ್ ಪಂಚತಾರಾ ಹೋಟೆಲಿನಲ್ಲಿ ಸೇಲ್ಸ್ ಮ್ಯಾನೇಜರ್ ಆಗಿದ್ದಾರೆ. ದಿವ್ಯಾ ದುಬೆ ನಿನ್ನೆ ಮಧ್ಯಾಹ್ನ 12.30ರಲ್ಲಿ ತಮ್ಮ ಇಂಡಿಕಾ ಕಾರನ್ನು no parking ಜಾಗದಲ್ಲಿ ನಿಲ್ಲಿಸಿದ್ದರು.
ಅದನ್ನು ಕಂಡ ಪಂಜಾಗೂಡ ಟ್ರಾಫಿಕ್ ಸಬ್ಇನ್ಸ್ಪೆಕ್ಟರ್ ರಾಜಗೋಪಾಲ್ ರೆಡ್ಡಿ ಅವರು ದಿವ್ಯಾ ದುಬೆಯ ಕಾರ್ ಡ್ರೈವರ್ ಮೊಹಮದ್ ಮೊಹ್ಸಿನ್ ಗೆ ಕರೆದು, 200 ರುಪಾಯಿ ದಂಡದ ಚಲನ್ ನೀಡಿದರು. ಇದನ್ನು ಕಂಡು ರೋಡ್ ರೇಗಮ್ಮನಾದ ದಿವ್ಯಾ ದುಬೆ ಕಾರಿನಿಂದ ಇಳಿದವರೆ ಸಬ್ಇನ್ಸ್ಪೆಕ್ಟರ್ ರಾಜಗೋಪಾಲರತ್ತ ನುಗ್ಗಿದರು.
'ಕಾರ್ ಡ್ರೈವರ್ ಮೊಹಮದ್ ನಿಂದ ದಂಡ ಕಟ್ಟಿಸಿಕೊಂಡಿದ್ದಕ್ಕೆ ಕಾರಿನಲ್ಲಿದ್ದ ದಿವ್ಯಾ ದುಬೆ ನನ್ನೊಂದಿಗೆ ವಾಗ್ವಾದಕ್ಕೆ ಇಳಿದರು. ಚಲನ್ ಬುಕ್ ಅನ್ನು ಹರಿದುಹಾಕಿದರು. ಆ ಸಂದರ್ಭದಲ್ಲಿ ಮಹಿಳೆಯ ಫೋಟೋ ತೆಗೆಯುವಂತೆ ಹೋಂಗಾರ್ಡ್ ಗೆ ಸೂಚಿಸಿದೆ. ಅದರಿಂದ ಮತ್ತಷ್ಟು ಕುಪಿತಳಾದ ದಿವ್ಯಾ ದುಬೆ ಆತನ ಕೊರಳ ಪಟ್ಟಿ ಹಿಡಿದಳು.
ಆಕೆಯ ರಂಪಾಟವನ್ನು ದಾಖಲಿಸಲು ನಾನೇ ಫೋಟೋ ತೆಗೆಯಲು ಮುಂದಾದೆ. ತನ್ನ ಮುಖ, ಕತ್ತನ್ನು ಪರಚಿದಳು. ಅಲ್ಲೆಲ್ಲ ರಕ್ತ ಹರಿದಿದೆ' ಎಂದು ಸಬ್ಇನ್ಸ್ಪೆಕ್ಟರ್ ರಾಜಗೋಪಾಲ್ ವೃತ್ತಾಂತವನನ್ನು ಬಿಡಿಸಿಟ್ಟಿದ್ದಾರೆ.
ಸಬ್ಇನ್ಸ್ಪೆಕ್ಟರ್ ರಾಜಗೋಪಾಲ್ ಘಟನೆಯ ಬಳಿಕ ದಿವ್ಯಾ ದುಬೆಯನ್ನು ಪಂಜಾಗೂಡ ಪೊಲೀಸರ ವಶಕ್ಕೆ ಒಪ್ಪಿಸಿದರು. ಪಂಜಾಗೂಡ ಠಾಣೆಯ ಇನ್ಸ್ಪೆಕ್ಟರ್ ತಿರುಪತಿ ರಾವ್ ಅವರು ಮಧ್ಯಾಹ್ನ 3 ಗಂಟೆಯ ವೇಳೆಗೆ ದಿವ್ಯಾ ದುಬೆಯನ್ನು ಬಂಧಿಸಿದರು.
ಐಪಿಸಿ ಸೆಕ್ಷನ್ 332 (ಸರಕಾರಿ ಅಧಿಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ) ಮತ್ತು 353 (ಕರ್ತವ್ಯನಿರತ ಸರಕಾರಿ ಉದ್ಯೋಗಿಯ ಮೇಲೆ ಹಲ್ಲೆ ನಡೆಸಿದ ಆಪಾದನೆ) ಅನುಸಾರ ದಿವ್ಯಾ ದುಬೆ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ಇಂದು (ಗುರುವಾರ) ನ್ಯಾಯಾಲಯದಲ್ಲಿ ಹಾಜರುಪಡಿಸುವುದಾಗಿ ಇನ್ಸ್ಪೆಕ್ಟರ್ ತಿರುಪತಿ ರಾವ್ ಹೇಳಿದ್ದಾರೆ. ಈ ಘಟನೆಯ ನೀತಿಪಾಠ ಏನು ?
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications