ಲ್ಯಾಪ್ಟಾಪ್ ಬದಲು ಇಟ್ಟಿಗೆ: ಯಾಮಾರಿದ ಟೆಕ್ಕಿ

ನಿನ್ನೆಯೂ ಹೀಗೇ ಆಗಿದೆ: ಲ್ಯಾಪ್ಟಾಪ್ ಮತ್ತು ಐಫೋನ್ ಅಗ್ಗವಾಗಿ ಸಿಗುತ್ತದೆ ಎಂದು ಸುನೀಲ್ ಕುಮಾರ್ ಎಂಬ ಸಾಫ್ಟ್ ವೇರ್ ಇಂಜಿನಿಯರೊಬ್ಬರು 30 ಸಾವಿರ ರುಪಾಯಿ ಕಳೆದುಕೊಂಡಿದ್ದಾರೆ. ಜೆಪಿ ನಗರದಲ್ಲಿ ಬುಧವಾರ ಈ ಪ್ರಸಂಗ ನಡೆದಿದೆ.
ಏನಾಯಿತೆಂದರೆ ಜೆಪಿ ನಗರದ ಮೂರನೆಯ ಹಂತದಲ್ಲಿ ಐನಾತಿ ಆಸಾಮಿಯೊಬ್ಬ ಸುನೀಲ್ ಅವರನ್ನು ಭೇಟಿಯಾಗಿದ್ದಾರೆ. 'ಆ ಆಸಾಮಿ ಇವರಿಗೆ ಹೇಳಿದ್ದು ಇಷ್ಟೇ: ನೋಡಿ ಸಾರ್, ನನ್ನ ಬಳಿ 38 ಸಾವಿರ ರೂಪಾಯಿಯ ಐಫೋನು ಮತ್ತು 45 ಸಾವಿರ ರೂಪಾಯಿಯ ಲ್ಯಾಪ್ಟಾಪ್ ಇದೆ. ಆದರೆ ಇವೆರಡನ್ನೂ ನಿಮಗೇ ಅಂತ ಕೇವಲ 30 ಸಾವಿರ ರೂಪಾಯಿಗೆ ಕೊಡಬೇಕು ಅಂದ್ಕೊಂಡಿದ್ದೀನಿ. ಬೇಡ ಅನ್ನಬೇಡಿ. ದಯವಿಟ್ಟು ತಗೋಳಿ' ಎಂದು ಪುಸಲಾಯಿಸಿದ್ದಾನೆ. ಅಷ್ಟೇ ...
face valueನಲ್ಲಿ ಆತನನ್ನು ನಂಬಿದ ಟೆಕ್ಕಿ ಸುನೀಲ್ (26), 'ಹೌದಾ. ಹಾಗಾದ್ರೆ. ಇಲ್ಲೇ ATM ನಿಂದ ಅಷ್ಟೂ ದುಡ್ಡನ್ನು ತರುವೆ' ಅಂತ ಹೇಳಿದ್ದೂ ಅಲ್ಲದೆ ಈದಾ ಸಮೀಪದ ATMಗೆ ಹೋಗಿ ಒಂದಷ್ಟು ಹಣ ಡ್ರಾ ಮಾಡಿ, ಅದರ ಜತೆಗೆ ಜೇಬಿನಲ್ಲಿದ್ದಿದ್ದನ್ನೂ ಸೇರಿಸಿ, ಕಷ್ಟಪಟ್ಟು ದುಡಿದಿದ್ದ 30 ಸಾವಿರ ರುಪಾಯಿಯನ್ನು ಆ ಆಸಾಮಿ ಕೈಗೆ ಕೊಟ್ಟಿದ್ದಾರೆ.
ಅವನೋ 'ಸರಿಯಾದ ಮಿಕವೇ ತನ್ನ ಬಲೆಗೆ ಬಿದ್ದಿದೆ' ಎಂಬ ಸುಳಿವರಿತು ಟೆಕ್ಕಿ ಸುನೀಲನನ್ನು ಮತ್ತಷ್ಟು ಪುಸಲಾಯಿಸಿದ್ದಾನೆ. ಟೆಕ್ಕಿ ಸುನೀಲ್ 83 ಸಾವಿರ ರುಪಾಯಿ ಬೆಲೆ ಬಾಳುವ gadgets ಅನಾಯಾಸವಾಗಿ ಸಿಗುತ್ತಿದೆಯೆಂದು ಒಳಗೊಳಗೇ ಸಂತಸಪಡುತ್ತಾ, ಹೆಚ್ಚು cross question ಮಾಡದೆ ಹಣ ನೀಡಿ, ಬಣ್ಣ ಬಣ್ಣದ ಬ್ಯಾಗನ್ನು ಪಡೆದು ಮನೆ ಕಡೆ ಖುಷಿಯಿಂದ ಹೆಜ್ಜೆ ಹಾಕಿದ್ದಾನೆ. ಅಷ್ಟೇ... ಇನ್ನೇನು ಮನೆಯೊಳಕ್ಕೆ ಹೆಜ್ಜೆ ಹಾಕಬೇಕು ಅಂತಿದ್ದ ಟೆಕ್ಕಿ ಸುನೀಲ್ ಗೆ ಯಾಕೋ ಅನುಮಾನ ಬಂದಿದೆ.
ಮನೆ ಮುಂದೆ ನಿಂತು ಬ್ಯಾಗನ್ನು ಬಿಚ್ಚಿ ನೋಡಿದ್ದಾನೆ. ಒಳಗೆ ಲ್ಯಾಪ್ಟಾಪೂ ಇಲ್ಲ; ಐಫೋನು ಇಲ್ಲ. ಬದಲಿಗೆ ಚೆಂದದ ಇಟ್ಟಿಗೆಯೊಂದು ಕಿಸಕ್ಕಂತ ನಕ್ಕಿದೆ. ಸುನಿಲನಿಗೆ ಎದೆ ಧಸಕ್ಕೆಂದಿದೆ. ವಾಸ್ತವಕ್ಕೆ ಮರಳಿದವನೇ ಎದ್ನೋ ಬಿದ್ನೋ ಎಂದು ATM ಕೇಂದ್ರದತ್ತ ಓಡಿದ್ದಾರೆ. ಹೋಗುವಷ್ಟೊತ್ತಿಗೆ ಅಲ್ಲೇನಿದೆ!? ವಂಚಕ ಅಲ್ಲಿಂದ ಕಾಲ್ಕಿತ್ತು ಬೇರೊಂದು ಮಿಕದ ಬೇಟೆಯಲ್ಲಿ ತೊಡಗಿದೆ. ಟೆಕ್ಕಿ ಸುನೀಲ್ ಹ್ಯಾಪ್ ಮೋರೆ ಹಾಕಿಕೊಂಡು ಜೆಪಿ ನಗರ ಪೊಲೀಸ್ ಠಾಣೆಗೆ ಹೋಗಿದ್ದಾರೆ. ದೂರು ದಾಖಲಾಗಿದೆ.
-
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
ಬೆಂಗಳೂರು 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ vs ಹೊಸೂರು ಏರ್ಪೋರ್ಟ್: ಯೋಜನೆ ಯಾವ ಹಂತದಲ್ಲಿದೆ -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ -
Viral Video: ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಟವಲ್ ಡ್ಯಾನ್ಸ್: ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ












Click it and Unblock the Notifications